<p><strong>ಚಾಮರಾಜನಗರ</strong>: ತರಕಾರಿ ಹಾಗೂ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಈವಾರ ಧಾರಣೆಯಲ್ಲಿ ಏರಿಳಿತ ಕಂಡು ಬಂದಿದೆ.</p>.<p>ತರಕಾರಿಗಳಲ್ಲಿ ಈರುಳ್ಳಿ ಸ್ವಲ್ಪ ತುಟ್ಟಿಯಾಗಿದ್ದರೆ, ಬೀನ್ಸ್, ತೊಂಡೆಕಾಯಿ ಅಗ್ಗವಾಗಿದೆ. ಹೂವುಗಳಲ್ಲಿ ಮಲ್ಲಿಗೆ, ಕಾಕಡದ ದರ ಗಣನೀಯವಾಗಿ ಹೆಚ್ಚಾಗಿದೆ. ಹಣ್ಣುಗಳು ಹಾಗೂ ಮಾಂಸದ ಮಾರುಕಟ್ಟೆಗಳಲ್ಲಿ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.</p>.<p>ಮೂರು ವಾರಗಳಿಂದ ಏರುಮುಖಿಯಾಗಿದ್ದ ಈರುಳ್ಳಿಯ ಬೆಲೆ ಕಳೆದ ವಾರ ಬದಲಾಗಿರಲಿಲ್ಲ. ಈ ವಾರ ಸ್ವಲ್ಪ ಏರಿಕೆಯಾಗಿದೆ. ಹಾಪ್ ಕಾಮ್ಸ್ನಲ್ಲಿ ಕೆಜಿ ಈರುಳ್ಳಿ ಬೆಲೆ ₹5 ಹೆಚ್ಚಾಗಿದೆ. ₹45ರಿಂದ ₹50ವರೆಗೆ ಬೆಲೆ ಇದೆ. ಕಳೆದ ವಾರ ₹40–₹45ರವರೆಗೆ ಇತ್ತು.</p>.<p>ಕಳೆದ ವಾರ ಕೆಜಿಗೆ ₹40 ಇದ್ದ ಬೀನ್ಸ್, ಈ ವಾರ ₹30ಕ್ಕೆ ಇಳಿದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀನ್ಸ್ ಬರುತ್ತಿರುವುದರಿಂದ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<p>ಹೋದ ವಾರ ₹50 ಇದ್ದ ತೊಂಡೆಕಾಯಿ ಬೆಲೆ ₹10 ಕಡಿಮೆಯಾಗಿದೆ. ಟೊಮೆಟೊ (₹20–₹25), ಕ್ಯಾರೆಟ್ (₹60) ಸೇರಿದಂತೆ ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಸೇಬು ಹಾಗೂ ಮೂಸಂಬಿಗಳು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ನಗರದ ವಿವಿಧ ಕಡೆ ವ್ಯಾಪಾರಿಗಳುತಳ್ಳುಗಾಡಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದಾರೆ.</p>.<p class="Subhead">ಮಲ್ಲಿಗೆಗೆ ಹೆಚ್ಚಿದ ಬೇಡಿಕೆ:ದಸರಾ ಹತ್ತಿರವಾಗುತ್ತಿದ್ದಂತೆಯೇ ಹೂವುಗಳಿಗೆ ಬೇಡಿಕೆ ಹೆಚ್ಚಾಗಲು ಆರಂಭವಾಗಿದೆ. ಮಲ್ಲಿಗೆ ಹಾಗೂ ಕಾಕಡಗಳಿಗೆ ಹೆಚ್ಚು ಬೇಡಿಕೆ ಬಂದಿದೆ.</p>.<p>ಬಿಡಿಹೂವಿನ ಮಾರುಕಟ್ಟೆಯಲ್ಲಿ ಕಳೆದವಾರ ಮಲ್ಲಿಗೆಗೆ ಕೆಜಿಗೆ ₹120–₹160 ಇತ್ತು. ಸೋಮವಾರ ಅದು ₹400–₹500ವರೆಗೆ ಏರಿದೆ. ₹80ರಿಂದ ₹100ರವರೆಗೆ ಇದ್ದ ಕಾಕಡ ₹240ರಿಂದ ₹280ರವರೆಗೆ ಆಗಿದೆ. ಚೆಂಡು ಹೂ, ಸುಗಂಧರಾಜ ಹೂವುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ.</p>.<p>‘ಮಲ್ಲಿಗೆ ಸೀಸನ್ ಮುಗಿಯುತ್ತಾ ಬಂದಿದೆ. ಹಾಗಾಗಿ, ಮಾರುಕಟ್ಟೆಗೆ ಹೆಚ್ಚು ಬರುತ್ತಿಲ್ಲ. ಅದಕ್ಕಾಗಿ ಬೆಲೆ ಜಾಸ್ತಿಯಾಗಿದೆ. ದಸರಾ ಸಮಯಕ್ಕೆ ಎಲ್ಲ ಹೂವುಗಳ ಬೆಲೆ ಹೆಚ್ಚಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಾಂಸದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 100ಕ್ಕೆ ₹530 ಇದೆ. ಅಂಗಡಿಗಳಲ್ಲಿ ಒಂದು ಮೊಟ್ಟೆಗೆ ₹6ರಿಂದ ₹7 ದರವಿದೆ. ಚಿಕನ್, ಮಟನ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ತರಕಾರಿ ಹಾಗೂ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಈವಾರ ಧಾರಣೆಯಲ್ಲಿ ಏರಿಳಿತ ಕಂಡು ಬಂದಿದೆ.</p>.<p>ತರಕಾರಿಗಳಲ್ಲಿ ಈರುಳ್ಳಿ ಸ್ವಲ್ಪ ತುಟ್ಟಿಯಾಗಿದ್ದರೆ, ಬೀನ್ಸ್, ತೊಂಡೆಕಾಯಿ ಅಗ್ಗವಾಗಿದೆ. ಹೂವುಗಳಲ್ಲಿ ಮಲ್ಲಿಗೆ, ಕಾಕಡದ ದರ ಗಣನೀಯವಾಗಿ ಹೆಚ್ಚಾಗಿದೆ. ಹಣ್ಣುಗಳು ಹಾಗೂ ಮಾಂಸದ ಮಾರುಕಟ್ಟೆಗಳಲ್ಲಿ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.</p>.<p>ಮೂರು ವಾರಗಳಿಂದ ಏರುಮುಖಿಯಾಗಿದ್ದ ಈರುಳ್ಳಿಯ ಬೆಲೆ ಕಳೆದ ವಾರ ಬದಲಾಗಿರಲಿಲ್ಲ. ಈ ವಾರ ಸ್ವಲ್ಪ ಏರಿಕೆಯಾಗಿದೆ. ಹಾಪ್ ಕಾಮ್ಸ್ನಲ್ಲಿ ಕೆಜಿ ಈರುಳ್ಳಿ ಬೆಲೆ ₹5 ಹೆಚ್ಚಾಗಿದೆ. ₹45ರಿಂದ ₹50ವರೆಗೆ ಬೆಲೆ ಇದೆ. ಕಳೆದ ವಾರ ₹40–₹45ರವರೆಗೆ ಇತ್ತು.</p>.<p>ಕಳೆದ ವಾರ ಕೆಜಿಗೆ ₹40 ಇದ್ದ ಬೀನ್ಸ್, ಈ ವಾರ ₹30ಕ್ಕೆ ಇಳಿದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀನ್ಸ್ ಬರುತ್ತಿರುವುದರಿಂದ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<p>ಹೋದ ವಾರ ₹50 ಇದ್ದ ತೊಂಡೆಕಾಯಿ ಬೆಲೆ ₹10 ಕಡಿಮೆಯಾಗಿದೆ. ಟೊಮೆಟೊ (₹20–₹25), ಕ್ಯಾರೆಟ್ (₹60) ಸೇರಿದಂತೆ ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಸೇಬು ಹಾಗೂ ಮೂಸಂಬಿಗಳು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ನಗರದ ವಿವಿಧ ಕಡೆ ವ್ಯಾಪಾರಿಗಳುತಳ್ಳುಗಾಡಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದಾರೆ.</p>.<p class="Subhead">ಮಲ್ಲಿಗೆಗೆ ಹೆಚ್ಚಿದ ಬೇಡಿಕೆ:ದಸರಾ ಹತ್ತಿರವಾಗುತ್ತಿದ್ದಂತೆಯೇ ಹೂವುಗಳಿಗೆ ಬೇಡಿಕೆ ಹೆಚ್ಚಾಗಲು ಆರಂಭವಾಗಿದೆ. ಮಲ್ಲಿಗೆ ಹಾಗೂ ಕಾಕಡಗಳಿಗೆ ಹೆಚ್ಚು ಬೇಡಿಕೆ ಬಂದಿದೆ.</p>.<p>ಬಿಡಿಹೂವಿನ ಮಾರುಕಟ್ಟೆಯಲ್ಲಿ ಕಳೆದವಾರ ಮಲ್ಲಿಗೆಗೆ ಕೆಜಿಗೆ ₹120–₹160 ಇತ್ತು. ಸೋಮವಾರ ಅದು ₹400–₹500ವರೆಗೆ ಏರಿದೆ. ₹80ರಿಂದ ₹100ರವರೆಗೆ ಇದ್ದ ಕಾಕಡ ₹240ರಿಂದ ₹280ರವರೆಗೆ ಆಗಿದೆ. ಚೆಂಡು ಹೂ, ಸುಗಂಧರಾಜ ಹೂವುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ.</p>.<p>‘ಮಲ್ಲಿಗೆ ಸೀಸನ್ ಮುಗಿಯುತ್ತಾ ಬಂದಿದೆ. ಹಾಗಾಗಿ, ಮಾರುಕಟ್ಟೆಗೆ ಹೆಚ್ಚು ಬರುತ್ತಿಲ್ಲ. ಅದಕ್ಕಾಗಿ ಬೆಲೆ ಜಾಸ್ತಿಯಾಗಿದೆ. ದಸರಾ ಸಮಯಕ್ಕೆ ಎಲ್ಲ ಹೂವುಗಳ ಬೆಲೆ ಹೆಚ್ಚಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಾಂಸದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 100ಕ್ಕೆ ₹530 ಇದೆ. ಅಂಗಡಿಗಳಲ್ಲಿ ಒಂದು ಮೊಟ್ಟೆಗೆ ₹6ರಿಂದ ₹7 ದರವಿದೆ. ಚಿಕನ್, ಮಟನ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>