<p><strong>ಚಾಮರಾಜನಗರ</strong>: ‘ಹಿಮೊಫೀಲಿಯಾ ಮಾರಣಾಂತಿಕ ಕಾಯಿಲೆ ಅಲ್ಲ. ಆದರೆ, ನೋವು ಬಂದಾಗ ಅನುಭವಿಸುವುದು ತುಂಬಾ ಕಷ್ಟ’ ಎಂದು ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ಮಂಗಳವಾರ ಹೇಳಿದರು. </p>.<p>ನಗರದ ಬಿ.ರಾಚಯ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದೊಂದಿಗೆ ಇಂಟಾಸ್ ಫೌಂಡೇಷನ್ ಆಯೋಜಿಸಿದ್ದ ಹಿಮೊಫೀಲಿಯಾ ರೋಗಿಗಳ ಸಹಾಯ ಔಷಧಿ ವಿತರಣೆ, ಫಿಸಿಯೋಥೆರಪಿ, ವೈದ್ಯರ ಸಮಾಲೋಚನೆ ಶಿಬಿರದಲ್ಲಿ ಅವರು ಮಾತನಾಡಿದರು. </p>.<p>‘ಹಿಮೋಫಿಲಿಯಾ ರೋಗದಿಂದ ಆಗುವ ಕಷ್ಟಗಳ ಬಗ್ಗೆ ರೋಗಿಗಳಿಗೆ, ಅವರ ತಂದೆ, ತಾಯಿ ಮತ್ತು ಚಿಕಿತ್ಸೆ ನೀಡುವವರಿಗೆ ಮಾತ್ರ ಅದರ ಗೊತ್ತು. ಇದಕ್ಕೆ ಔಷಧಿ ಲಭ್ಯವಿದ್ದರೂ, ಮುಕ್ತ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಸರ್ಕಾರವೇ ಸರಬರಾಜು ಮಾಡುತ್ತದೆ. ಜಿಲ್ಲೆಯಲ್ಲಿ ನಮ್ಮಲ್ಲಿ ನೋಂದಾಯಿಸಿದ 24 ರೋಗಿಗಳಿದ್ದಾರೆ’ ಎಂದರು. </p>.<p>‘ಔಷಧಿ ಕೊರತೆ ಬಗ್ಗೆ ಕಳೆದ ವರ್ಷ ರೋಗಿಗಳು ಸಚಿವರ ಮುಂದೆ ಪ್ರಸ್ತಾಪಿಸಿದ್ದರು. ಕಾಯಿಲೆ ಬಂದಾಗ ಔಷಧಿ ಹುಡುಕಿಕೊಂಡು ಹೋಗುವ ಬದಲು ನಿಮ್ಮ ಹತ್ತಿರ ಇದ್ದರೆ ಧೈರ್ಯ ಇರುತ್ತದೆ. ಈಗ ಇಂಟಾಸ್ ಕಂಪನಿ ಔಷಧಿ ನೀಡಲು ಮುಂದೆ ಬಂದಿದ್ದು, ಒಂದು ಚುಚ್ಚು ಮದ್ದಿಗೆ ₹ 16 ಸಾವಿರ ಆಗುತ್ತದೆ. ಒಂಬತ್ತು ಜನರಿಗೆ ಉಚಿತವಾಗಿ ಕೊಡುತ್ತಿದ್ದಾರೆ’ ಎಂದರು.</p>.<p>ಬೆಂಗಳೂರಿನ ಇಂಟಾಸ್ ಫೌಂಡೇಷನ್ ಕಂಪನಿಯ ಕುದ್ಸಿಯಾ ಬೇಗಂ ಮಾತನಾಡಿ, ‘24 ರೋಗಿಗಳಿಗೆ ಫಿಸಿಯೊಥೆರಪಿ ಮಾಡಿ, ಒಂಬತ್ತು ಜನರಿಗೆ ಔಷಧಿ ನೀಡಿದ್ದೇವೆ ಎಂದು ತಿಳಿಸಿದರು. ರೋಗಿಗಳಿಗೆ ₹3.5 ಲಕ್ಷದ ಔಷಧಿ ನೀಡಲಾಗಿದೆ’ ಎಂದು ತಿಳಿಸಿದರು.</p>.<p>ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರವಿಕುಮಾರ್, ಮಕ್ಕಳ ತಜ್ಞೆ ಡಾ.ಲಕ್ಷ್ಮಿ<br>ಮನೋತಜ್ಞರಾದ ಡಾ. ರಾಜೇಶ್, ಫೆಥಾಲಜಿಯ ಡಾ.ರವಿತೇಜ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ‘ಹಿಮೊಫೀಲಿಯಾ ಮಾರಣಾಂತಿಕ ಕಾಯಿಲೆ ಅಲ್ಲ. ಆದರೆ, ನೋವು ಬಂದಾಗ ಅನುಭವಿಸುವುದು ತುಂಬಾ ಕಷ್ಟ’ ಎಂದು ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ಮಂಗಳವಾರ ಹೇಳಿದರು. </p>.<p>ನಗರದ ಬಿ.ರಾಚಯ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದೊಂದಿಗೆ ಇಂಟಾಸ್ ಫೌಂಡೇಷನ್ ಆಯೋಜಿಸಿದ್ದ ಹಿಮೊಫೀಲಿಯಾ ರೋಗಿಗಳ ಸಹಾಯ ಔಷಧಿ ವಿತರಣೆ, ಫಿಸಿಯೋಥೆರಪಿ, ವೈದ್ಯರ ಸಮಾಲೋಚನೆ ಶಿಬಿರದಲ್ಲಿ ಅವರು ಮಾತನಾಡಿದರು. </p>.<p>‘ಹಿಮೋಫಿಲಿಯಾ ರೋಗದಿಂದ ಆಗುವ ಕಷ್ಟಗಳ ಬಗ್ಗೆ ರೋಗಿಗಳಿಗೆ, ಅವರ ತಂದೆ, ತಾಯಿ ಮತ್ತು ಚಿಕಿತ್ಸೆ ನೀಡುವವರಿಗೆ ಮಾತ್ರ ಅದರ ಗೊತ್ತು. ಇದಕ್ಕೆ ಔಷಧಿ ಲಭ್ಯವಿದ್ದರೂ, ಮುಕ್ತ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಸರ್ಕಾರವೇ ಸರಬರಾಜು ಮಾಡುತ್ತದೆ. ಜಿಲ್ಲೆಯಲ್ಲಿ ನಮ್ಮಲ್ಲಿ ನೋಂದಾಯಿಸಿದ 24 ರೋಗಿಗಳಿದ್ದಾರೆ’ ಎಂದರು. </p>.<p>‘ಔಷಧಿ ಕೊರತೆ ಬಗ್ಗೆ ಕಳೆದ ವರ್ಷ ರೋಗಿಗಳು ಸಚಿವರ ಮುಂದೆ ಪ್ರಸ್ತಾಪಿಸಿದ್ದರು. ಕಾಯಿಲೆ ಬಂದಾಗ ಔಷಧಿ ಹುಡುಕಿಕೊಂಡು ಹೋಗುವ ಬದಲು ನಿಮ್ಮ ಹತ್ತಿರ ಇದ್ದರೆ ಧೈರ್ಯ ಇರುತ್ತದೆ. ಈಗ ಇಂಟಾಸ್ ಕಂಪನಿ ಔಷಧಿ ನೀಡಲು ಮುಂದೆ ಬಂದಿದ್ದು, ಒಂದು ಚುಚ್ಚು ಮದ್ದಿಗೆ ₹ 16 ಸಾವಿರ ಆಗುತ್ತದೆ. ಒಂಬತ್ತು ಜನರಿಗೆ ಉಚಿತವಾಗಿ ಕೊಡುತ್ತಿದ್ದಾರೆ’ ಎಂದರು.</p>.<p>ಬೆಂಗಳೂರಿನ ಇಂಟಾಸ್ ಫೌಂಡೇಷನ್ ಕಂಪನಿಯ ಕುದ್ಸಿಯಾ ಬೇಗಂ ಮಾತನಾಡಿ, ‘24 ರೋಗಿಗಳಿಗೆ ಫಿಸಿಯೊಥೆರಪಿ ಮಾಡಿ, ಒಂಬತ್ತು ಜನರಿಗೆ ಔಷಧಿ ನೀಡಿದ್ದೇವೆ ಎಂದು ತಿಳಿಸಿದರು. ರೋಗಿಗಳಿಗೆ ₹3.5 ಲಕ್ಷದ ಔಷಧಿ ನೀಡಲಾಗಿದೆ’ ಎಂದು ತಿಳಿಸಿದರು.</p>.<p>ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರವಿಕುಮಾರ್, ಮಕ್ಕಳ ತಜ್ಞೆ ಡಾ.ಲಕ್ಷ್ಮಿ<br>ಮನೋತಜ್ಞರಾದ ಡಾ. ರಾಜೇಶ್, ಫೆಥಾಲಜಿಯ ಡಾ.ರವಿತೇಜ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>