<p><strong>ಚಾಮರಾಜನಗರ</strong>: ಜಿಲ್ಲೆಯಲ್ಲಿ ಮೈಕ್ರೋ ಉದ್ಯಮ ಅಭಿವೃದ್ಧಿ, ಮಾರುಕಟ್ಟೆ ಸಂಶೋಧನೆ, ನೋಂದಣಿ, ವಿಸ್ತರಣೆ, ಹೊಸ ಉದ್ಯಮಿಗಳ ಸೃಷ್ಟಿ, ಸಾಮರ್ಥ್ಯವೃದ್ಧಿ ಗುರಿಯೊಂದಿಗೆ ಜಿಲ್ಲಾಡಳಿತದಿಂದ ‘ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್’ಗೆ ಗುರುವಾರ ಚಾಲನೆ ನೀಡಲಾಯಿತು.</p>.<p>ನಗರದಲ್ಲಿ ಜಿಲ್ಲಾಡಳಿತ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ, ಸೆಂಟರ್ ಆಫ್ ಎಕ್ಸಲೆನ್ಸ್ ಅನ್ ಎಂಪ್ಲಾಯ್ಮೆಂಟ್ ಮತ್ತು ಲಿವ್ಲಿಹುಡ್ ಸಂಸ್ಥೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಉದ್ಯಮಿಗಳು, ಆಸಕ್ತರು ಭಾಗವಹಿಸಿದ್ದರು.</p>.<p>ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆ ನೈಸರ್ಗಿಕ ಸಂಪತ್ತು ಹಾಗೂ ಅಗಾಧ ಮಾನವ ಸಂಪನ್ಮೂಲ ಸಾಮರ್ಥ್ಯ ಹೊಂದಿದೆ. ಸಾರ್ವಜನಿಕರ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಮತ್ತು ಆರ್ಥಿಕತೆಯನ್ನು ಕೇಂದ್ರವಾಗಿಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ ಎಂದರು.</p>.<p>ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಯೋಜನೆಯ ಮೂಲಕ ಸಿ.ಐ.ಐ., ಸಿ.ಇ.ಎಲ್. ಸಂಸ್ಥೆಗಳಿಂದ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಾಮರ್ಥ್ಯ ಅಭಿವೃದ್ಧಿಗೆ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.</p>.<p>ಮೈಸೂರಿನ ಸಿಐಐ ಸಂಸ್ಥೆಯ ಅಧ್ಯಕ್ಷ ನಾಗರಾಜ ಗರ್ಗೇಶ್ವರಿ ಮಾತನಾಡಿ, ಚಾಮರಾಜನಗರದಲ್ಲಿ ಉದ್ಯಮ ಕ್ಷೇತ್ರದ ಅವಕಾಶಗಳು ಹೆಚ್ಚುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್, ಮಾರಾಟ ಮತ್ತು ಉದ್ಯಮ ನಿರ್ವಹಣೆಯಲ್ಲಿ ಉದ್ಯಮಿಗಳು ಕೌಶಲ ವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಸರ್ಕಾರದ ವಿವಿಧ ಉದ್ಯಮ ಸಹಾಯ ಯೋಜನೆಗಳು, ಹಣಕಾಸು, ತೆರಿಗೆ, ಜಿಎಸ್ಟಿ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಿ.ಐ.ಐ-ಸಿ.ಇ.ಎಲ್ ಪ್ರಮುಖ ಪಾತ್ರವಹಿಸಲಿದೆ. ಉದ್ಯಮಿಗಳ ಅಭಿವೃದ್ಧಿ ವೇದಿಕೆಗೆ ಹೆಚ್ಚಿನ ಸಂಖ್ಯೆಯ ಉದ್ಯಮಿಗಳು ಸೇರ್ಪಡೆಯಾಗಬೇಕು ಎಂದು ಅವರು ಸಲಹೆ ನೀಡಿದರು.</p>.<p>ಸಿ.ಐ.ಐ ಕರ್ನಾಟಕ ಎಂ.ಎಸ್.ಎಂ.ಇ ಪ್ಯಾನೆಲ್ ಸದಸ್ಯ ಕಾರ್ಯದರ್ಶಿ ಸ್ಯಾಮ್ ಚೆರಿಯನ್ ಮಾತನಾಡಿ, ‘ ಪ್ರಗತಿಪರ ಆಡಳಿತ ಅನುಷ್ಠಾನ ಹಾಗೂ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳ ಜಾರಿಯಿಂದ ಜಿಲ್ಲೆ ಹೆಚ್ಚಿನ ಕೈಗಾರಿಕೆಗಳನ್ನು ಆಕರ್ಷಿಸುತ್ತಿದೆ ಎಂದರು.</p>.<p>ಜಿಲ್ಲಾಡಳಿತ ಮತ್ತು ಸಿ.ಐ.ಐ-ಸಿ.ಇ.ಎಲ್ ನಡುವಿನ ಬಿಸಿನೆಸ್ 360 ಉದ್ಯಮಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ನಾಗರಾಜ ಗರ್ಗೇಶ್ವರಿ ಸಿ.ಎಸ್.ಆರ್. ಸಹಯೋಗ ಪತ್ರ ಸಲ್ಲಿಸಿದರು.</p>.<p> ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ದೊರೈರಾಜ್, ಸಹಾಯಕ ನಿರ್ದೇಶಕ ವಿಜಯ್ ಕುಮಾರ್, ಸಿ.ಐ.ಐ-ಸಿ.ಇ.ಎಲ್ನ ಶಿವೇಕ ಜಿ, ಜಿಲ್ಲಾ ಸಿ.ಎಸ್.ಆರ್ ಸಮಾಲೋಚಕಿ ರಕ್ಷಿತಾ, ಜಿಲ್ಲಾ ಇ-ಆಡಳಿತ ಸಮಾಲೋಚಕ ಮಧುಕೇಶ್ ಇದ್ದರು.</p>.<p><strong>ವಿವಿಧ ಕಾರ್ಯಕ್ರಮ</strong></p><p>ಯೋಜನೆಯಡಿ ಜಿಲ್ಲೆಯ 200 ಉದ್ಯಮಿಗಳಿಗೆ ತರಬೇತಿ ದೊರೆಯಲಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇಂಟರಾಕ್ಟಿವ್ ಲರ್ನಿಂಗ್ ಉಪಕರಣಗಳ ಕೊಡುಗೆ ಮಹಿಳೆಯರ ಆರೋಗ್ಯ ಸ್ವಚ್ಛತೆಗೆ ಪಿಂಕ್ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು. ಈ ಕಾರ್ಯಕ್ಕೆ ₹ 1.6 ಕೋಟಿ ವ್ಯಯ ಮಾಡುವ ಯೋಜನೆ ರೂಪಿಸಲಾಗಿದ್ದು ಸಿಎಸ್ಆರ್ ಸಹಯೋಗಕ್ಕಾಗಿ ಜಿಲ್ಲಾಧಿಕಾರಿಗೆ ಬದ್ಧತೆಯ ಪತ್ರ ಸಲ್ಲಿಸಲಾಯಿತು. ಯೋಜನೆಯು ರೋಟರಿ ಸಹಭಾಗಿತ್ವದಲ್ಲಿ ಸಿ.ಎಸ್.ಆರ್ ಅಧ್ಯಕ್ಷ ಕಿರಣ್ ರಾಬರ್ಟ್ ಹಾಗೂ ಸಿ.ಐ.ಐ ಕರ್ನಾಟಕ ರಾಜ್ಯ ಪರಿಷತ್ನ ಷಡಕ್ಷರಿ ಸ್ವಾಮಿ ಉಪಸ್ಥಿತಿಯಲ್ಲಿ ಜಾರಿಗೆ ಬರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಜಿಲ್ಲೆಯಲ್ಲಿ ಮೈಕ್ರೋ ಉದ್ಯಮ ಅಭಿವೃದ್ಧಿ, ಮಾರುಕಟ್ಟೆ ಸಂಶೋಧನೆ, ನೋಂದಣಿ, ವಿಸ್ತರಣೆ, ಹೊಸ ಉದ್ಯಮಿಗಳ ಸೃಷ್ಟಿ, ಸಾಮರ್ಥ್ಯವೃದ್ಧಿ ಗುರಿಯೊಂದಿಗೆ ಜಿಲ್ಲಾಡಳಿತದಿಂದ ‘ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್’ಗೆ ಗುರುವಾರ ಚಾಲನೆ ನೀಡಲಾಯಿತು.</p>.<p>ನಗರದಲ್ಲಿ ಜಿಲ್ಲಾಡಳಿತ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ, ಸೆಂಟರ್ ಆಫ್ ಎಕ್ಸಲೆನ್ಸ್ ಅನ್ ಎಂಪ್ಲಾಯ್ಮೆಂಟ್ ಮತ್ತು ಲಿವ್ಲಿಹುಡ್ ಸಂಸ್ಥೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಉದ್ಯಮಿಗಳು, ಆಸಕ್ತರು ಭಾಗವಹಿಸಿದ್ದರು.</p>.<p>ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆ ನೈಸರ್ಗಿಕ ಸಂಪತ್ತು ಹಾಗೂ ಅಗಾಧ ಮಾನವ ಸಂಪನ್ಮೂಲ ಸಾಮರ್ಥ್ಯ ಹೊಂದಿದೆ. ಸಾರ್ವಜನಿಕರ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಮತ್ತು ಆರ್ಥಿಕತೆಯನ್ನು ಕೇಂದ್ರವಾಗಿಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ ಎಂದರು.</p>.<p>ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಯೋಜನೆಯ ಮೂಲಕ ಸಿ.ಐ.ಐ., ಸಿ.ಇ.ಎಲ್. ಸಂಸ್ಥೆಗಳಿಂದ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಾಮರ್ಥ್ಯ ಅಭಿವೃದ್ಧಿಗೆ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.</p>.<p>ಮೈಸೂರಿನ ಸಿಐಐ ಸಂಸ್ಥೆಯ ಅಧ್ಯಕ್ಷ ನಾಗರಾಜ ಗರ್ಗೇಶ್ವರಿ ಮಾತನಾಡಿ, ಚಾಮರಾಜನಗರದಲ್ಲಿ ಉದ್ಯಮ ಕ್ಷೇತ್ರದ ಅವಕಾಶಗಳು ಹೆಚ್ಚುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್, ಮಾರಾಟ ಮತ್ತು ಉದ್ಯಮ ನಿರ್ವಹಣೆಯಲ್ಲಿ ಉದ್ಯಮಿಗಳು ಕೌಶಲ ವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಸರ್ಕಾರದ ವಿವಿಧ ಉದ್ಯಮ ಸಹಾಯ ಯೋಜನೆಗಳು, ಹಣಕಾಸು, ತೆರಿಗೆ, ಜಿಎಸ್ಟಿ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಿ.ಐ.ಐ-ಸಿ.ಇ.ಎಲ್ ಪ್ರಮುಖ ಪಾತ್ರವಹಿಸಲಿದೆ. ಉದ್ಯಮಿಗಳ ಅಭಿವೃದ್ಧಿ ವೇದಿಕೆಗೆ ಹೆಚ್ಚಿನ ಸಂಖ್ಯೆಯ ಉದ್ಯಮಿಗಳು ಸೇರ್ಪಡೆಯಾಗಬೇಕು ಎಂದು ಅವರು ಸಲಹೆ ನೀಡಿದರು.</p>.<p>ಸಿ.ಐ.ಐ ಕರ್ನಾಟಕ ಎಂ.ಎಸ್.ಎಂ.ಇ ಪ್ಯಾನೆಲ್ ಸದಸ್ಯ ಕಾರ್ಯದರ್ಶಿ ಸ್ಯಾಮ್ ಚೆರಿಯನ್ ಮಾತನಾಡಿ, ‘ ಪ್ರಗತಿಪರ ಆಡಳಿತ ಅನುಷ್ಠಾನ ಹಾಗೂ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳ ಜಾರಿಯಿಂದ ಜಿಲ್ಲೆ ಹೆಚ್ಚಿನ ಕೈಗಾರಿಕೆಗಳನ್ನು ಆಕರ್ಷಿಸುತ್ತಿದೆ ಎಂದರು.</p>.<p>ಜಿಲ್ಲಾಡಳಿತ ಮತ್ತು ಸಿ.ಐ.ಐ-ಸಿ.ಇ.ಎಲ್ ನಡುವಿನ ಬಿಸಿನೆಸ್ 360 ಉದ್ಯಮಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ನಾಗರಾಜ ಗರ್ಗೇಶ್ವರಿ ಸಿ.ಎಸ್.ಆರ್. ಸಹಯೋಗ ಪತ್ರ ಸಲ್ಲಿಸಿದರು.</p>.<p> ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ದೊರೈರಾಜ್, ಸಹಾಯಕ ನಿರ್ದೇಶಕ ವಿಜಯ್ ಕುಮಾರ್, ಸಿ.ಐ.ಐ-ಸಿ.ಇ.ಎಲ್ನ ಶಿವೇಕ ಜಿ, ಜಿಲ್ಲಾ ಸಿ.ಎಸ್.ಆರ್ ಸಮಾಲೋಚಕಿ ರಕ್ಷಿತಾ, ಜಿಲ್ಲಾ ಇ-ಆಡಳಿತ ಸಮಾಲೋಚಕ ಮಧುಕೇಶ್ ಇದ್ದರು.</p>.<p><strong>ವಿವಿಧ ಕಾರ್ಯಕ್ರಮ</strong></p><p>ಯೋಜನೆಯಡಿ ಜಿಲ್ಲೆಯ 200 ಉದ್ಯಮಿಗಳಿಗೆ ತರಬೇತಿ ದೊರೆಯಲಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇಂಟರಾಕ್ಟಿವ್ ಲರ್ನಿಂಗ್ ಉಪಕರಣಗಳ ಕೊಡುಗೆ ಮಹಿಳೆಯರ ಆರೋಗ್ಯ ಸ್ವಚ್ಛತೆಗೆ ಪಿಂಕ್ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು. ಈ ಕಾರ್ಯಕ್ಕೆ ₹ 1.6 ಕೋಟಿ ವ್ಯಯ ಮಾಡುವ ಯೋಜನೆ ರೂಪಿಸಲಾಗಿದ್ದು ಸಿಎಸ್ಆರ್ ಸಹಯೋಗಕ್ಕಾಗಿ ಜಿಲ್ಲಾಧಿಕಾರಿಗೆ ಬದ್ಧತೆಯ ಪತ್ರ ಸಲ್ಲಿಸಲಾಯಿತು. ಯೋಜನೆಯು ರೋಟರಿ ಸಹಭಾಗಿತ್ವದಲ್ಲಿ ಸಿ.ಎಸ್.ಆರ್ ಅಧ್ಯಕ್ಷ ಕಿರಣ್ ರಾಬರ್ಟ್ ಹಾಗೂ ಸಿ.ಐ.ಐ ಕರ್ನಾಟಕ ರಾಜ್ಯ ಪರಿಷತ್ನ ಷಡಕ್ಷರಿ ಸ್ವಾಮಿ ಉಪಸ್ಥಿತಿಯಲ್ಲಿ ಜಾರಿಗೆ ಬರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>