‘ದಾಸೋಹದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಉಪಾಹಾರ ಪ್ರಸಾದ ವಿತರಣೆ ವ್ಯವಸ್ಥೆಯೂ ಇರಲಿದೆ. ಸದ್ಯದ ಮಟ್ಟಿಗೆ ಯಾವುದೇ ಉತ್ಸವಗಳು ಇರುವುದಿಲ್ಲ. ಭಕ್ತರು ಮಾಸ್ಕ್ ಧರಿಸಿಯೇ ಬರಬೇಕು. ಪ್ಲಾಸ್ಟಿಕ್ ಬಾಟಲಿ ತರುವುದಕ್ಕೆ ಅವಕಾಶ ಇಲ್ಲ. ಅಂತರ ಕಾಪಾಡಿಕೊಂಡು ದರ್ಶನ ಪಡೆಯಬಹುದು. ಪೂಜೆ ಮಾಡಿಸಬಹುದು. ಸೋಮವಾರದಿಂದ ಬೆಳಿಗ್ಗೆ 4 ಕ್ಕೆ, ಬೆಳಿಗ್ಗೆ 10.30ಕ್ಕೆ, ಸಂಜೆ 6ಕ್ಕೆ ಅಭಿಷೇಕ ನಡೆಯಲಿದ್ದು, ಅಭಿಷೇಕ ಮಾಡಿಸುವವರು ಮಾಡಿಸಬಹುದು ಆದರೆ, ದೇವಾಲಯದ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.