ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ, ರಾತ್ರಿ ವಾಸ್ತವ್ಯಕ್ಕೆ ಅವಕಾಶ

ಸೋಮವಾರದಿಂದ ಬೆಳಿಗ್ಗೆ 4ರಿಂದ ರಾತ್ರಿ 10ರವರೆಗೆ ದೇಗುಲ ಭಕ್ತರಿಗೆ ಮುಕ್ತ
Last Updated 2 ಆಗಸ್ಟ್ 2020, 7:43 IST
ಅಕ್ಷರ ಗಾತ್ರ

ಚಾಮರಾಜನಗರ: ಲಾಕ್‌ಡೌನ್‌ನ ಬಹುತೇಕ ನಿಯಮಗಳನ್ನು ಸಡಿಲಿಕೆ ಮಾಡಿರುವುರಿಂದ, ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯವುಭಾನುವಾರದಿಂದ ವಾರದ ಎಲ್ಲ ದಿನಗಳೂ ಭಕ್ತರಿಗೆ ತೆರೆದಿರಲಿದೆ.

ಸೋಮವಾರದಿಂದ ಬೆಳಿಗ್ಗೆ 4ರಿಂದ ರಾತ್ರಿ‌‌ 10ರವರೆಗೆ ದೇವಸ್ಥಾನವನ್ನು ತೆರೆಯಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಭಾನುವಾರ (ಆಗಸ್ಟ್‌ 2) ಸಂಜೆ‌ 5ರಿಂದ ನಾಗಮಲೆ ಭವನದಲ್ಲಿ ಮಾತ್ರ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಪ್ರಾಯೋಗಿಕವಾಗಿ ಭಕ್ತರಿಗೆ ರಾತ್ರಿ‌ ತಂಗಲು ಕೊಠಡಿಗಳನ್ನು ನೀಡಲಾಗುವುದು.ಎ.ಸಿ ಕೊಠಡಿಗೆ ₹950 ಹಾಗೂ ಸಾಮಾನ್ಯ ಕೊಠಡಿಗೆ ₹500 ದರ ಇರಲಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

‘ದಾಸೋಹದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ‌ ಉಪಾಹಾರ ಪ್ರಸಾದ ವಿತರಣೆ ವ್ಯವಸ್ಥೆಯೂ ಇರಲಿದೆ. ಸದ್ಯದ ಮಟ್ಟಿಗೆ ಯಾವುದೇ ಉತ್ಸವಗಳು ಇರುವುದಿಲ್ಲ. ಭಕ್ತರು ಮಾಸ್ಕ್ ಧರಿಸಿಯೇ ಬರಬೇಕು. ಪ್ಲಾಸ್ಟಿಕ್ ಬಾಟಲಿ ತರುವುದಕ್ಕೆ ಅವಕಾಶ ಇಲ್ಲ. ಅಂತರ ಕಾಪಾಡಿಕೊಂಡು ದರ್ಶನ‌ ಪಡೆಯಬಹುದು. ಪೂಜೆ ಮಾಡಿಸಬಹುದು. ಸೋಮವಾರದಿಂದ ಬೆಳಿಗ್ಗೆ 4 ಕ್ಕೆ,‌ ಬೆಳಿಗ್ಗೆ‌ 10.30ಕ್ಕೆ, ಸಂಜೆ 6ಕ್ಕೆ ಅಭಿಷೇಕ ನಡೆಯಲಿದ್ದು, ಅಭಿಷೇಕ ಮಾಡಿಸುವವರು ಮಾಡಿಸಬಹುದು ಆದರೆ, ದೇವಾಲಯದ‌ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ ದೇವಾಲಯದ ಪಾರುಪತ್ತೇಗಾರರಾದ ಮಹದೇವಸ್ವಾಮಿ ಅವರನ್ನು (9449490095) ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ. ‘ರಾತ್ರಿಯ ಲಾಕ್‌ಡೌನ್‌ (ನಿಷೇದಾಜ್ಞೆ) ವಾಪಸ್‌ ಪಡೆದಿರುವುದರಿಂದ, ರಾತ್ರಿವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಬಹುದಕ್ಕೆ ಅವಕಾಶ ಇದೆ. ಹೀಗಾಗಿ, ಅದಕ್ಕೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ’ ಎಂದು ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT