2020ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದ ಬಂಗಾರ ಆಚಾರ್, ‘ಕಲೆಗೆ ಅದಕ್ಕೆ ಆದ ಗೌರವ ಇದೆ. ಅದಕ್ಕೆ ಇರುವ ಬೆಲೆಯಿಂದಲೇ ಈ ವಯಸ್ಸಿನಲ್ಲೂ ಗೌರವ ಸಿಕ್ಕಿದೆ. ಜನರಲ್ಲಿ ಕಲೆಗಳ ಬಗೆಗೆ ಹಾಗೂ ಅವುಗಳನ್ನು ಕಲಿಯುವ ಆಸಕ್ತಿ ಕಡಿಮೆಯಾಗಿದೆ. ಹಾಗಿದ್ದರೂ, ಕಲೆಗೆ ಎಂದೂ ಸಾವಿಲ್ಲ.ಆರ್ಥಿಕ ಸಂಕಷ್ಟದಿಂದಾಗಿ ಕಲೆಯಿಂದ ದೂರವಾಗುವವರು ಇದ್ದಾರೆ. ಕಲೆಯಲ್ಲಿ ತೊಡಗಿಸಿಕೊಂಡಿರುವವರನ್ನು ಸರ್ಕಾರಗಳು ಪ್ರೋತ್ಸಾಹಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದರು.