‘ಇಂತಹ ಸಮಸ್ಯೆಗಳು ಗ್ರಾಮದ ಮೇಲ್ವರ್ಗದ ಜನಾಂಗದವರು ಇರುವ ಬಡಾವಣೆಯಲ್ಲಿ ಇಲ್ಲ. ಅಲ್ಲಿಗೆ ಎರಡು ದಿನಗಳಿಗೊಮ್ಮೆಯಾದರೂ ನೀರು ಬಿಡುತ್ತಾರೆ. ನಮ್ಮ ಬಡಾವಣೆಗೆ ಬುಧವಾರ ನೀರು ಬಿಡದಿದ್ದಲ್ಲಿ ರಸ್ತೆ ತಡೆ ನಡೆಸಲಾಗುವುದು, ಅಲ್ಲದೇ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.