<p><strong>ಚಾಮರಾಜನಗರ</strong>: ಜಿಲ್ಲೆಯಲ್ಲಿ ಬುಧವಾರ ಕೋವಿಡ್ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿದೆ. ಹೊಸದಾಗಿ 49 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಸಂಖ್ಯೆ 900ಕ್ಕೆ ತಲುಪಿದೆ.</p>.<p>ಬುಧವಾರ 21 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಮುಕ್ತರಾದರ ಒಟ್ಟು ಸಂಖ್ಯೆ 568ಕ್ಕೆ ಏರಿದೆ. 318 ಸಕ್ರಿಯ ಪ್ರಕರಣಗಳಿವೆ. 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಸೋಂಕಿನಿಂದಾಗಿ ಮೃತಪಟ್ಟವರು ಕೊಳ್ಳೇಗಾಲದ ಕಾಂಗ್ರೆಸ್ ಮುಖಂಡ ಡಿ.ಸಿದ್ದರಾಜು. 71 ವರ್ಷದ ಅವರಿಗೆ ಜುಲೈ 29ರಂದು ಕೋವಿಡ್–19 ಇರುವುದು ಪತ್ತೆಯಾಗಿತ್ತು. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ತಡರಾತ್ರಿ 2.15ರ ಸುಮಾರಿಗೆ ಮೃತಪಟ್ಟರು.</p>.<p>ಕೊಳ್ಳೇಗಾಲ ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ದಲಿತರ ಸ್ಮಶಾನದಲ್ಲಿ ಅವರ ಜಮೀನಿನಲ್ಲಿ ಸರ್ಕಾರದ ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರ ನಡೆಯಿತು. ಅವರ ಕುಟುಂಬಸ್ಥರು, ಸ್ನೇಹಿತರು ದೂರದಲ್ಲೇ ನಿಂತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.</p>.<p>ಜಿಲ್ಲೆಯಲ್ಲಿ ಬುಧವಾರ 695 ಕೋವಿಡ್–19 ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್ಟಿಪಿಸಿಆರ್ ಪ್ರಯೋಗಾಲಯದಲ್ಲಿ 453, ರ್ಯಾಪಿಡ್ ಆ್ಯಂಟಿಜೆನ್ 236 ಹಾಗೂ ಟ್ರುನಾಟ್ ವಿಧಾನದಲ್ಲಿ ಆರುಪರೀಕ್ಷೆಗಳನ್ನು ನಡೆಸಲಾಗಿದೆ. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ 28 ಮಂದಿಗೆ, ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ 21 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.</p>.<p>ಜಿಲ್ಲೆಯಲ್ಲಿ ಈವರೆಗೆ 25,128 ಗಂಟಲುದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, 24,215 ಮಂದಿಯ ವರದಿ ನೆಗೆಟಿವ್ ಬಂದಿದೆ.</p>.<p>ಬುಧವಾರ ಸೋಂಕು ದೃಢಪಟ್ಟ 49 ಪ್ರಕರಣಗಳಲ್ಲಿ ಚಾಮರಾನಗರ ತಾಲ್ಲೂಕಿನಲ್ಲಿ 16, ಕೊಳ್ಳೇಗಾಲದಲ್ಲಿ 14, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂಬತ್ತು, ಹನೂರು ತಾಲ್ಲೂಕಿನಲ್ಲಿ ಆರು, ಯಳಂದೂರು ನಾಲ್ಕು ಪ್ರಕರಣಗಳು ವರದಿಯಾಗಿವೆ.</p>.<p>ಗುಣಮುಖರಾದ 21 ಮಂದಿಯ ಪೈಕಿ ಚಾಮರಾಜನಗರ ತಾಲ್ಲೂಕಿನ ಏಳು, ಕೊಳ್ಳೇಗಾಲ ತಾಲ್ಲೂಕಿನ ಆರು, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕಿನ ಮೂವರು, ಹನೂರು ತಾಲ್ಲೂಕಿನ ಒಬ್ಬರು, ಹೊರ ಜಿಲ್ಲೆಯ ಒಬ್ಬರು ಇದ್ದಾರೆ.</p>.<p>ಸಕ್ರಿಯ 318 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 90, ಕೊಳ್ಳೇಗಾಲ ತಾಲ್ಲೂಕಿನ 86, ಗುಂಡ್ಲುಪೇಟೆ ತಾಲ್ಲೂಕಿನ 69, ಯಳಂದೂರು ತಾಲ್ಲೂಕಿನ 50 ಹಾಗೂ ಹನೂರು ತಾಲ್ಲೂಕಿನ 23 ಪ್ರಕರಣಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಜಿಲ್ಲೆಯಲ್ಲಿ ಬುಧವಾರ ಕೋವಿಡ್ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿದೆ. ಹೊಸದಾಗಿ 49 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಸಂಖ್ಯೆ 900ಕ್ಕೆ ತಲುಪಿದೆ.</p>.<p>ಬುಧವಾರ 21 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಮುಕ್ತರಾದರ ಒಟ್ಟು ಸಂಖ್ಯೆ 568ಕ್ಕೆ ಏರಿದೆ. 318 ಸಕ್ರಿಯ ಪ್ರಕರಣಗಳಿವೆ. 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಸೋಂಕಿನಿಂದಾಗಿ ಮೃತಪಟ್ಟವರು ಕೊಳ್ಳೇಗಾಲದ ಕಾಂಗ್ರೆಸ್ ಮುಖಂಡ ಡಿ.ಸಿದ್ದರಾಜು. 71 ವರ್ಷದ ಅವರಿಗೆ ಜುಲೈ 29ರಂದು ಕೋವಿಡ್–19 ಇರುವುದು ಪತ್ತೆಯಾಗಿತ್ತು. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ತಡರಾತ್ರಿ 2.15ರ ಸುಮಾರಿಗೆ ಮೃತಪಟ್ಟರು.</p>.<p>ಕೊಳ್ಳೇಗಾಲ ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ದಲಿತರ ಸ್ಮಶಾನದಲ್ಲಿ ಅವರ ಜಮೀನಿನಲ್ಲಿ ಸರ್ಕಾರದ ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರ ನಡೆಯಿತು. ಅವರ ಕುಟುಂಬಸ್ಥರು, ಸ್ನೇಹಿತರು ದೂರದಲ್ಲೇ ನಿಂತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.</p>.<p>ಜಿಲ್ಲೆಯಲ್ಲಿ ಬುಧವಾರ 695 ಕೋವಿಡ್–19 ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್ಟಿಪಿಸಿಆರ್ ಪ್ರಯೋಗಾಲಯದಲ್ಲಿ 453, ರ್ಯಾಪಿಡ್ ಆ್ಯಂಟಿಜೆನ್ 236 ಹಾಗೂ ಟ್ರುನಾಟ್ ವಿಧಾನದಲ್ಲಿ ಆರುಪರೀಕ್ಷೆಗಳನ್ನು ನಡೆಸಲಾಗಿದೆ. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ 28 ಮಂದಿಗೆ, ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ 21 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.</p>.<p>ಜಿಲ್ಲೆಯಲ್ಲಿ ಈವರೆಗೆ 25,128 ಗಂಟಲುದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, 24,215 ಮಂದಿಯ ವರದಿ ನೆಗೆಟಿವ್ ಬಂದಿದೆ.</p>.<p>ಬುಧವಾರ ಸೋಂಕು ದೃಢಪಟ್ಟ 49 ಪ್ರಕರಣಗಳಲ್ಲಿ ಚಾಮರಾನಗರ ತಾಲ್ಲೂಕಿನಲ್ಲಿ 16, ಕೊಳ್ಳೇಗಾಲದಲ್ಲಿ 14, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂಬತ್ತು, ಹನೂರು ತಾಲ್ಲೂಕಿನಲ್ಲಿ ಆರು, ಯಳಂದೂರು ನಾಲ್ಕು ಪ್ರಕರಣಗಳು ವರದಿಯಾಗಿವೆ.</p>.<p>ಗುಣಮುಖರಾದ 21 ಮಂದಿಯ ಪೈಕಿ ಚಾಮರಾಜನಗರ ತಾಲ್ಲೂಕಿನ ಏಳು, ಕೊಳ್ಳೇಗಾಲ ತಾಲ್ಲೂಕಿನ ಆರು, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕಿನ ಮೂವರು, ಹನೂರು ತಾಲ್ಲೂಕಿನ ಒಬ್ಬರು, ಹೊರ ಜಿಲ್ಲೆಯ ಒಬ್ಬರು ಇದ್ದಾರೆ.</p>.<p>ಸಕ್ರಿಯ 318 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 90, ಕೊಳ್ಳೇಗಾಲ ತಾಲ್ಲೂಕಿನ 86, ಗುಂಡ್ಲುಪೇಟೆ ತಾಲ್ಲೂಕಿನ 69, ಯಳಂದೂರು ತಾಲ್ಲೂಕಿನ 50 ಹಾಗೂ ಹನೂರು ತಾಲ್ಲೂಕಿನ 23 ಪ್ರಕರಣಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>