ಖಾಸಗಿಯವರಿಂದ ಜಮೀನು ಖರೀದಿಸಿದರೆ, ಈ ವಲಯದಲ್ಲಿರುವಕಣಿಯನಪುರ–ಮೊಯಾರ್ ಆನೆ ಕಾರಿಡಾರ್ ವಿಸ್ತರಿಸಲು ಸಾಧ್ಯ. ಇದರಿಂದಬಂಡೀಪುರ ಹಾಗೂ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಗಳ ನಡುವೆ ಆನೆ ಹಾಗೂ ಇತರ ಪ್ರಾಣಿಗಳ ಓಡಾಟಕ್ಕೆ ಅನುಕೂಲ ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳಿದ್ದಾರೆ. ಬಂಡೀಪುರ ಹುಲಿ ಯೋಜನೆ ನಿರ್ದೇಶಕಟಿ.ಬಾಲಚಂದ್ರ ಅವರು, ಈ ಸಂಬಂಧ ಇಲಾಖೆಗೆ ಪತ್ರವನ್ನೂ ಬರೆದಿದ್ದಾರೆ.