ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ | ಇ–ಸ್ವತ್ತು ಪಡೆಯಲು ನಾಗರಿಕರು ಸುಸ್ತು: ಗ್ರಾಮೀಣ ಜನರ ಅಲೆದಾಟ

Published : 9 ಸೆಪ್ಟೆಂಬರ್ 2024, 6:38 IST
Last Updated : 9 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments
ಚಾಮರಾಜನಗರ ನಗರಸಭಾ ಕಚೇರಿ
ಚಾಮರಾಜನಗರ ನಗರಸಭಾ ಕಚೇರಿ
ಸರ್ವರ್ ಸಮಸ್ಯೆಗೆ ಜನರು ಹೈರಾಣ
ಇ-ಸ್ವತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಆಸ್ತಿಗಳ ಮಾಲೀಕತ್ವದ ಹಕ್ಕು ಖಾತ್ರಿಪಡಿಸುತ್ತದೆ. ಯಾವುದೇ ಸಹಿ ಇಲ್ಲದ ಅನನ್ಯ ಡಿಜಿಟಲ್ ಪ್ರಮಾಣ ಪತ್ರ ಇದಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಆಲ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯಾದಾಗ ಸರ್ವರ್ ಸಮಸ್ಯೆ ಗಂಭೀರವಾಗಿ ಕಾಡುತ್ತದೆ. ಕೆಲವೊಮ್ಮೆ ಇ-ಸ್ವತ್ತು ಪ್ರಕ್ರಿಯೆ ಹಂತದಲ್ಲಿ ನೆಟ್‌ವರ್ಕ್ ಕಡಿತವಾದರೆ ಮತ್ತೆ ಮೊದಲಿನಿಂದಲೇ ಅರ್ಜಿಗೆ ದತ್ತಾಂಶ ನಮೂದಿಸಬೇಕು. ಇದು ಹೆಚ್ಚಿನ ಸಮಯವನ್ನು ಬೇಡುವುದರಿಂದ ಗ್ರಾಮಸ್ಥರು ಹೈರಾಣಾಗುತ್ತಿದ್ದಾರೆ.
ಇ–ಸ್ವತ್ತು ಕಾರ್ಯ ನಿರ್ವಹಣೆ ಹೇಗೆ
ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಇ–ಸ್ವತ್ತು ಪಡೆಯಲು ಸಕಾಲದ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿದಾಗ ಅರ್ಜಿಯ ವಿವರ ಆಸ್ತಿ ತೆರಿಗೆ ಮಾಹಿತಿ ಆಸ್ತಿಗಳ ಮಾಹಿತಿ ದಾಖಲಿಸಿ ಪೌರಾಯುಕ್ತರ ಅಥವಾ ಮುಖ್ಯಾಧಿಕಾರಿಗಳ ಅನುಮೋದನೆ ಪಡೆದು ಡಿಜಿಟಲ್ ಸಹಿಯುಳ್ಳ ನಮೂನೆ–3 ಸೃಜಿಸಲಾಗುತ್ತದೆ. ನಂತರ ಕರ ವಸೂಲಿಗಾರರು ಆಸ್ತಿ ಮಾಹಿತಿಯುಳ್ಳ ಚೆಕ್‌ಲಿಸ್ಟ್ ಸೃಜಿಸಿ ಕಂದಾಯ ನಿರೀಕ್ಷಕರಿಗೆ ಕಳಿಸುತ್ತಾರೆ. ಕಂದಾಯ ನಿರೀಕ್ಷಕರು ಆಸ್ತಿಗಳ ಮಹಜರು ಮಾಡಿ ಮಾಹಿತಿ ದಾಖಲಿಸುತ್ತಾರೆ. ಕರ ವಸೂಲಿಗಾರರು ನಿರ್ವಹಿಸಿದ ಆಸ್ತಿಗಳ ಮಾಹಿತಿ ಪರಿಶೀಲಿಸಿ ಕಂದಾಯ ಅಧಿಕಾರಿಗಳಿಗೆ ಕಡತವನ್ನು ರವಾನಿಸುತ್ತಾರೆ. ಕಂದಾಯ ನಿರೀಕ್ಷಕರ ವರದಿಯನ್ನು ಪರಿಶೀಲಿಸಿ ಸರಿಯಾಗಿದ್ದರೆ ಆಯುಕ್ತರು ಪೌರಾಯುಕ್ತರು ಅಥವಾ ಮುಖ್ಯಾಧಿಕಾರಿಗೆ ಕಳುಹಿಸುತ್ತಾರೆ. ಈ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಎಂಜಿನಿಯರ್‌ಗಳು ಹೊಸದಾಗಿ ಸೇರ್ಪಡೆಗೊಂಡ ಆಸ್ತಿಗಳಿಗೆ ಇ–ಸ್ವತ್ತು ಆಸ್ತಿ ಗುರುತಿನ ಸಂಖ್ಯೆಯನ್ನು ನೀಡುತ್ತಾರೆ. ಅಂತಿಮವಾಗಿ ಪೌರಾಯುಕ್ತರು ಆಸ್ತಿಗಳಿಗೆ ಡಿಜಿಟಲ್ ಸಹಿಯೊಂದಿಗೆ ಅನುಮೋದನೆ ನೀಡುತ್ತಾರೆ.
‘ತಿಂಗಳುಗಳು ಕಾದರೂ ಸಿಗದ ಇ–ಸ್ವತ್ತು’
‘ಗುಂಡ್ಲುಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಎಂಬ ಕಾರಣಕ್ಕೆ ಕೆಎಸ್ಎನ್ ಮತ್ತು ಅಶ್ವಿನಿ ಬಡಾವಣೆಗಳ ನಿವೇಶನ ಕಟ್ಟಡ ಮನೆಗಳಿಗೆ ಇ–ಸ್ವತ್ತು ನೀಡಲಾಗತ್ತಿಲ್ಲ. ಉಳಿದ ಬಡಾವಣೆಗಳಲ್ಲೂ ಜನರು ಇ–ಸ್ವತ್ತಿಗೆ ಅರ್ಜಿ ಹಾಕಿ ತಿಂಗಳಾದರು ಸಿಗುವುದಿಲ್ಲ. ಅಧಿಕಾರಿಗಳು ಹಣಕ್ಕೆ ಬೇಡಿಕೆ ಇರಿಸುತ್ತಾರೆ. ಕೊಡದಿದ್ದರೆ ತಿಂಗಳುಗಳ ಅಲೆಯ ಬೇಕಾದ ಪರಿಸ್ಥಿತಿ ಇದೆ’ ಎಂದು ಪಟ್ಟಣದ ಮಂಜು ದೂರುತ್ತಾರೆ.
ಸಾರ್ವಜನಿಕರ ಪರದಾಟ
‘ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಾಮಾನ್ಯರು ನಿವೇಶನಗಳ ಇ-ಸ್ವತ್ತು ಮಾಡಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ನಿವೇಶನದ ಇ-ಸ್ವತ್ತು ಮಾಡಿಸಿಕೊಳ್ಳಲು ದಾಖಲಾತಿ ನೀಡಿ ವರ್ಷಗಳಾದರೂ ಕೆಲಸ ಆಗಿಲ್ಲ. ದಾಖಲಾತಿ ಸಮರ್ಪಕವಾಗಿದ್ದರೂ ಇ-ಸ್ವತ್ತು ಕೊಡಲು ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು ಕಡಿವಾಣ ಹಾಕಬೇಕು. 13ನೇ ವಾರ್ಡಿನಲ್ಲಿರುವ ನಿವೇಶನಕ್ಕೆ ಇ-ಸ್ವತ್ತು ನಕಲು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿ 9 ತಿಂಗಳಾದರೂ ನೀಡಿಲ್ಲ’ ಎನ್ನುತ್ತಾರೆ ನಾಗರಿಕ ಸೂರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT