‘ತಿಂಗಳುಗಳು ಕಾದರೂ ಸಿಗದ ಇ–ಸ್ವತ್ತು’
‘ಗುಂಡ್ಲುಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಎಂಬ ಕಾರಣಕ್ಕೆ ಕೆಎಸ್ಎನ್ ಮತ್ತು ಅಶ್ವಿನಿ ಬಡಾವಣೆಗಳ ನಿವೇಶನ ಕಟ್ಟಡ ಮನೆಗಳಿಗೆ ಇ–ಸ್ವತ್ತು ನೀಡಲಾಗತ್ತಿಲ್ಲ. ಉಳಿದ ಬಡಾವಣೆಗಳಲ್ಲೂ ಜನರು ಇ–ಸ್ವತ್ತಿಗೆ ಅರ್ಜಿ ಹಾಕಿ ತಿಂಗಳಾದರು ಸಿಗುವುದಿಲ್ಲ. ಅಧಿಕಾರಿಗಳು ಹಣಕ್ಕೆ ಬೇಡಿಕೆ ಇರಿಸುತ್ತಾರೆ. ಕೊಡದಿದ್ದರೆ ತಿಂಗಳುಗಳ ಅಲೆಯ ಬೇಕಾದ ಪರಿಸ್ಥಿತಿ ಇದೆ’ ಎಂದು ಪಟ್ಟಣದ ಮಂಜು ದೂರುತ್ತಾರೆ.