ದೂರುದಾರ ನಂಜುಂಡಸ್ವಾಮಿ ಮಾತನಾಡಿ, ‘ಗ್ರಾಮಸ್ಥರು ನನಗೆ ₹25 ಸಾವಿರ ದಂಡ ವಿಧಿಸಿದ್ದಾರೆ. ಅದನ್ನು ನಾನು ಪಾವತಿಸುವುದಿಲ್ಲ. ಬಹಿಷ್ಕಾರ ವಾಪಸ್ ಪಡೆದು ಕುಲಸ್ಥರು ನನ್ನನ್ನು ಒಟ್ಟಿಗೆಸೇರಿಸಿಕೊಳ್ಳಬೇಕು. ಕೂಲಿ ಕೆಲಸಕ್ಕೆ ಕರೆಯಬೇಕು. ನನ್ನ ಜಮೀನಿನ ಸುತ್ತಲೂಒಡ್ಡು ನಿರ್ಮಾಣ ಮಾಡಿಕೊಂಡು, ಕೊಳಚೆ ನೀರನ್ನು ಸರ್ಕಾರಿ ಕಾಲುವೆಗೆ ತಿರುಗಿಸುತ್ತೇನೆ. ಪೊಲೀಸರು ಸೋಮವಾರದ ತನಕ ಗಡವು ನೀಡಿದ್ದು, ವಿವಾದಬಗೆಹರಿಸಿಕೊಳ್ಳಲು ಯಜಮಾನರಿಗೆ ಸೂಚಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ, ದೂರು ವಾಪಸ್ ಹಿಂಪಡೆಯುವುದಿಲ್ಲ’ ಎಂದು ಹೇಳಿದರು.