<p><strong>ಗುಂಡ್ಲುಪೇಟೆ:</strong> ವಿದ್ಯುತ್ ವ್ಯತ್ಯಯದ ಬಗ್ಗೆ ಸೆಸ್ಕ್ ನೌಕರನಿಗೆ ಕರೆ ಮಾಡಿದ್ದ ಸಂದರ್ಭ ರೈತನಿಗೆ ನೌಕರ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ ರೈತರು ವೀರನಪುರ ಗೇಟ್ ಬಳಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.</p>.<p>ಪಟ್ಟಣದ ಹೊರ ವಲಯದ ಕಚೇರಿ ಮುಂದೆ ಸಮಾವೇಶಗೊಂಡ ರೈತ ಮುಖಂಡರು ಧಿಕ್ಕಾರ, ಘೋಷಣೆ ಕೂಗಿ ನೌಕರನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.</p>.<p>ಈ ವೇಳೆ ಕೆಪಿಟಿಸಿಎಲ್ ಜೆಇ ವಾಸಂತಿ ರೈತರ ಸಮಸ್ಯೆ ಆಲಿಸಿದರು. ಏ.26ರಂದು ವಿದ್ಯುತ್ ವ್ಯತ್ಯಯ ಆಗಿದ್ದ ಬಗ್ಗೆ ತಿಳಿಯಲು ನೌಕರರೊಬ್ಬರ ಮೊಬೈಲ್ಗೆ ನೇನೇಕಟ್ಟೆ ಗ್ರಾಮದ ರೈತ ವಿಶ್ವ ಕರೆ ಮಾಡಿದ್ದರು. ಈ ಸಂದರ್ಭ ಪದೇ ಪದೇ ಕರೆ ಮಾಡಿದರು ಎಂಬ ಕಾರಣಕ್ಕೆ ರೈತರನ್ನು ನಿಮ್ಮ ಇಲಾಖೆ ನೌಕರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಪಟ್ಟು ಹಿಡಿದರು.</p>.<p>ಈ ಬಗ್ಗೆ ನೌಕರನಿಂದ ವಿವರಣೆ ಪಡೆದ ಜೆ.ಇ, ಅವರನ್ನು ಬದಲಿ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ನಿಯೋಜಿಸುವ ಸಂಬಂಧ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ನೌಕರ ರೈತರ ಕ್ಷಮಾಪಣೆ ಕೇಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟರು. ನಂತರ ಪ್ರತಿಭಟನೆ ಕೈಬಿಡಲಾಯಿತು.</p>.<p>ಈ ಸಂದರ್ಭ ಅರಿಶಿಣ ಬೆಳೆಗಾರರ ರಾಜ್ಯ ಸಂಘಟನೆ ಸಂಚಾಲಕ ಎಂ.ನಾಗಾರ್ಜುನಕುಮಾರ್, ರೈತ ಮುಖಂಡರಾದ ವೀರನಪುರ ನಾಗರಾಜಪ್ಪ, ದೊಡ್ಡತುಪ್ಪೂರು ಶಶಿಕುಮಾರ್, ಮಂಜುನಾಥ್, ವಿಶ್ವ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ:</strong> ವಿದ್ಯುತ್ ವ್ಯತ್ಯಯದ ಬಗ್ಗೆ ಸೆಸ್ಕ್ ನೌಕರನಿಗೆ ಕರೆ ಮಾಡಿದ್ದ ಸಂದರ್ಭ ರೈತನಿಗೆ ನೌಕರ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ ರೈತರು ವೀರನಪುರ ಗೇಟ್ ಬಳಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.</p>.<p>ಪಟ್ಟಣದ ಹೊರ ವಲಯದ ಕಚೇರಿ ಮುಂದೆ ಸಮಾವೇಶಗೊಂಡ ರೈತ ಮುಖಂಡರು ಧಿಕ್ಕಾರ, ಘೋಷಣೆ ಕೂಗಿ ನೌಕರನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.</p>.<p>ಈ ವೇಳೆ ಕೆಪಿಟಿಸಿಎಲ್ ಜೆಇ ವಾಸಂತಿ ರೈತರ ಸಮಸ್ಯೆ ಆಲಿಸಿದರು. ಏ.26ರಂದು ವಿದ್ಯುತ್ ವ್ಯತ್ಯಯ ಆಗಿದ್ದ ಬಗ್ಗೆ ತಿಳಿಯಲು ನೌಕರರೊಬ್ಬರ ಮೊಬೈಲ್ಗೆ ನೇನೇಕಟ್ಟೆ ಗ್ರಾಮದ ರೈತ ವಿಶ್ವ ಕರೆ ಮಾಡಿದ್ದರು. ಈ ಸಂದರ್ಭ ಪದೇ ಪದೇ ಕರೆ ಮಾಡಿದರು ಎಂಬ ಕಾರಣಕ್ಕೆ ರೈತರನ್ನು ನಿಮ್ಮ ಇಲಾಖೆ ನೌಕರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಪಟ್ಟು ಹಿಡಿದರು.</p>.<p>ಈ ಬಗ್ಗೆ ನೌಕರನಿಂದ ವಿವರಣೆ ಪಡೆದ ಜೆ.ಇ, ಅವರನ್ನು ಬದಲಿ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ನಿಯೋಜಿಸುವ ಸಂಬಂಧ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ನೌಕರ ರೈತರ ಕ್ಷಮಾಪಣೆ ಕೇಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟರು. ನಂತರ ಪ್ರತಿಭಟನೆ ಕೈಬಿಡಲಾಯಿತು.</p>.<p>ಈ ಸಂದರ್ಭ ಅರಿಶಿಣ ಬೆಳೆಗಾರರ ರಾಜ್ಯ ಸಂಘಟನೆ ಸಂಚಾಲಕ ಎಂ.ನಾಗಾರ್ಜುನಕುಮಾರ್, ರೈತ ಮುಖಂಡರಾದ ವೀರನಪುರ ನಾಗರಾಜಪ್ಪ, ದೊಡ್ಡತುಪ್ಪೂರು ಶಶಿಕುಮಾರ್, ಮಂಜುನಾಥ್, ವಿಶ್ವ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>