<p><strong>ಚಾಮರಾಜನಗರ:</strong> ಜಿಲ್ಲೆಯಾದ್ಯಂತ ಬುಧವಾರ ಸಹಸ್ರಾರು ಅಭಿಮಾನಿಗಳು ಹಾಗೂ ಸಂಘಟನೆಗಳು ನಟ ದಿ.ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಆಚರಿಸಿದವು. ನಗರ, ಪಟ್ಟಣಗಳ ಪ್ರಮುಖ ಬಡಾವಣೆಗಳಲ್ಲಿ ವೃತ್ತಗಳಲ್ಲಿ ಅಪ್ಪು ಕೌಟೌಟ್ಗಳನ್ನು ನಿಲ್ಲಿಸಿ ಹೂವಿನ ಮಾಲೆಗಳನ್ನು ಹಾಕಿದರು.</p>.<p>ನಗರದ ಮಾರಿಗುಡಿ ಸಮೀಪದಲ್ಲಿರುವ ಕಾಮಧೇನು ಮಿಲ್ಕ್ ಪಾರ್ಲರ್ ಎದುರು ರಾಜರತ್ನ ಅಪ್ಪು ಯುವ ಸೇನಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ನಡೆಯಿತು. ಪವರ್ಸ್ಟಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಮಾನಿಗಳು ಗುಣಗಾನ ಮಾಡಿದರು.</p>.<p>ರಾಜರತ್ನ ಅಪ್ಪು ಯುವಸೇನಾ ಸಮಿತಿ ಅಧ್ಯಕ್ಷ ಕ್ಯಾಂಟೀನ್ ಮಂಜು ಮಾತನಾಡಿ, ಯುವಕರ ಕಣ್ಮಣಿಯಾಗಿದ್ದ ಪುನೀತ್ ರಾಜಕುಮಾರ್ ದೈಹಿಕವಾಗಿ ಅಗಲಿದ್ದರೂ ಯುವಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ವಿಶಿಷ್ಟ ವ್ಯಕ್ತಿತ್ವ, ಅತ್ಯುತ್ತಮ ನಟನೆ, ಸ್ನೇಹಪರ ಗುಣಗಳಿಂದ ಅಭಿಮಾನಿಗಳ ಪಾಲಿಗೆ ಸದಾ ಸ್ಫೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು.</p>.<p>ಕಾರ್ಯಕ್ರಮದಲ್ಲಿ ಸಮಿತಿಯ ಮಂಜು ಮಿಲನ್, ಕಾರ್ತಿಕ್, ಮದನ, ರವಿ, ಮನು, ಮಧು, ರಮೇಶ್, ಮಂಗಲ ಮಾದೇಶ್, ಕುಮಾರ್, ಹರದನಹಳ್ಳಿ ಮಹೇಶ್, ವಿಷ್ಣು, ಮಣಿ, ಚಂದ್ರು, ಆಟೋ ಮಹೇಶ್, ಆದರ್ಶ, ಅಂಕಶೆಟ್ಟಿ, ಸಿ.ಆರ್.ಕೃಷ್ಣ, ರಾಜು, ಶಿವು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಜಿಲ್ಲೆಯಾದ್ಯಂತ ಬುಧವಾರ ಸಹಸ್ರಾರು ಅಭಿಮಾನಿಗಳು ಹಾಗೂ ಸಂಘಟನೆಗಳು ನಟ ದಿ.ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಆಚರಿಸಿದವು. ನಗರ, ಪಟ್ಟಣಗಳ ಪ್ರಮುಖ ಬಡಾವಣೆಗಳಲ್ಲಿ ವೃತ್ತಗಳಲ್ಲಿ ಅಪ್ಪು ಕೌಟೌಟ್ಗಳನ್ನು ನಿಲ್ಲಿಸಿ ಹೂವಿನ ಮಾಲೆಗಳನ್ನು ಹಾಕಿದರು.</p>.<p>ನಗರದ ಮಾರಿಗುಡಿ ಸಮೀಪದಲ್ಲಿರುವ ಕಾಮಧೇನು ಮಿಲ್ಕ್ ಪಾರ್ಲರ್ ಎದುರು ರಾಜರತ್ನ ಅಪ್ಪು ಯುವ ಸೇನಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ನಡೆಯಿತು. ಪವರ್ಸ್ಟಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಮಾನಿಗಳು ಗುಣಗಾನ ಮಾಡಿದರು.</p>.<p>ರಾಜರತ್ನ ಅಪ್ಪು ಯುವಸೇನಾ ಸಮಿತಿ ಅಧ್ಯಕ್ಷ ಕ್ಯಾಂಟೀನ್ ಮಂಜು ಮಾತನಾಡಿ, ಯುವಕರ ಕಣ್ಮಣಿಯಾಗಿದ್ದ ಪುನೀತ್ ರಾಜಕುಮಾರ್ ದೈಹಿಕವಾಗಿ ಅಗಲಿದ್ದರೂ ಯುವಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ವಿಶಿಷ್ಟ ವ್ಯಕ್ತಿತ್ವ, ಅತ್ಯುತ್ತಮ ನಟನೆ, ಸ್ನೇಹಪರ ಗುಣಗಳಿಂದ ಅಭಿಮಾನಿಗಳ ಪಾಲಿಗೆ ಸದಾ ಸ್ಫೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು.</p>.<p>ಕಾರ್ಯಕ್ರಮದಲ್ಲಿ ಸಮಿತಿಯ ಮಂಜು ಮಿಲನ್, ಕಾರ್ತಿಕ್, ಮದನ, ರವಿ, ಮನು, ಮಧು, ರಮೇಶ್, ಮಂಗಲ ಮಾದೇಶ್, ಕುಮಾರ್, ಹರದನಹಳ್ಳಿ ಮಹೇಶ್, ವಿಷ್ಣು, ಮಣಿ, ಚಂದ್ರು, ಆಟೋ ಮಹೇಶ್, ಆದರ್ಶ, ಅಂಕಶೆಟ್ಟಿ, ಸಿ.ಆರ್.ಕೃಷ್ಣ, ರಾಜು, ಶಿವು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>