ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅವರು, ‘ಕೇಂದ್ರ ಸರ್ಕಾರವು ಎಲ್ಲ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಆ ಮೂಲಕ ರೈತ ಜಮೀನುಗಳನ್ನು ಕಿತ್ತು ಕಾರ್ಪೊರೇಟ್ ವಲಯಕ್ಕೆ ಕೊಡುವ ಹುನ್ನಾರ ಅಡಗಿದೆ. ಇದನ್ನು ವಿರೋಧಿಸಿ ಎರಡು ಹಂತಗಳಲ್ಲಿ ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಮೊದಲ ಹಂತದಲ್ಲಿ ಅಸಹಕಾರ ಚಳವಳಿ, ಎರಡನೇ ಹಂತದಲ್ಲಿ ಎಲ್ಲ ಶಾಸಕರ ಮನೆ ಮುಂದೆ ಕುಳಿತು ಚಳವಳಿ ಮಾಡಲಾಗುವುದು’ ಎಂದರು.