<p><strong>ಚಾಮರಾಜನಗರ:</strong> ರಾಷ್ಟ್ರಕವಿ ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಕಾಲೇಜು ಮಕ್ಕಳಿಗೆ ಪರಿಚಯಿಸುವ ಅಭಿಯಾನ ರಾಜ್ಯದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.</p>.<p>‘ರಾಮಾಯಣ ದರ್ಶನಂ–ಓದು’ ಎಂದು ಹೆಸರಿನ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕುವೆಂಪು ಅವರ ಮಹಾಕಾವ್ಯಕ್ಕೆ ‘ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷಗಳ ಸವಿನೆನಪಿಗಾಗಿ ಅಭಿಯಾನ ಆರಂಭವಾಗಿದೆ.2018ರ ನವೆಂಬರ್ನಲ್ಲಿ ಆರಂಭವಾಗಿರುವ ಈ ಅಭಿಯಾನ ಇದುವರೆಗೆ 36 ಕಡೆಗಳಲ್ಲಿ ನಡೆದಿದೆ.</p>.<p>ಕವಯಿತ್ರಿ ಎಚ್.ಆರ್.ಸುಜಾತ ಅವರ ಪರಿಕಲ್ಪನೆಯಲ್ಲಿ ರೂಪು ತಳೆದಿರುವ ಈ ವಿಭಿನ್ನ ಕಾರ್ಯಕ್ರಮವನ್ನು ವಾಚನಾಭಿನಯದ ಮೂಲಕ ಕಾಲೇಜು ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಲಾಗುತ್ತಿದೆ. ರಂಗಕರ್ಮಿ ಎಂ. ಗಣೇಶ್ ಉಡುಪಿ ಅವರು ಇದನ್ನು ನಿರ್ವಹಿಸುತ್ತಾರೆ. ನಂತರ ಕುವೆಂಪು ಸಾಹಿತ್ಯದ ಬಗ್ಗೆ ಉಪನ್ಯಾಸವೂ ಇರುತ್ತದೆ.</p>.<p class="Subhead">ಒಂದೂವರೆ ವರ್ಷ ಹಿಂದಿನ ಕಲ್ಪನೆ: ‘ಹಿಂದೊಮ್ಮೆ ಗಣೇಶ್ ಅವರು ರಾಮಾಯಣ ದರ್ಶನಂ ವಾಚಿಸುವುದನ್ನು ನೋಡಿದ್ದೆ. ಅದು ಗಮನ ಸೆಳೆದಿತ್ತು. ಒಂದೂವರೆ ವರ್ಷದ ಹಿಂದೆ ಈ ಕಲ್ಪನೆ ಬಂದಿತ್ತು. ಅಲ್ಲಿವರೆಗೆ ಕುವೆಂಪು ಅವರ ಎಲ್ಲ ಕೃತಿಗಳನ್ನು ಓದಿದ್ದೆ. ರಾಮಾಯಣ ದರ್ಶನಂ ಅನ್ನು ಓದಿರಲಿಲ್ಲ. ಓದಿದ ಮೇಲೆ ತುಂಬಾ ಇಷ್ಟವಾಯಿತು. ಕಾವ್ಯದಲ್ಲಿ ಅವರು ವರ್ಣಿಸಿರುವ ಕಾಡು, ಕಾಡಿನ ಅನುಭವಗಳು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಈ ಕಾವ್ಯದಲ್ಲಿ ಸಮಾಜಕ್ಕೆ ತಿಳಿಸಬೇಕಾದುದು ತುಂಬಾ ಇದೆ ಎನ್ನಿಸಿತು’ ಎಂದು ಅಭಿಯಾನದ ಕಲ್ಪನೆ ಮೊಳಕೆಯೊಡೆದ ಬಗೆಯನ್ನು ಸುಜಾತ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.</p>.<p>‘ಕುವೆಂಪು ಅವರ ಕೃತಿ, ವಾಲ್ಮೀಕಿ ರಾಮಾಯಣದಿಂದ ವಿಭಿನ್ನವಾಗಿದೆ. ಈ ಕಾವ್ಯವು ರಾಮಾಯಣವನ್ನು ಸಾಕಷ್ಟು ಸುಧಾರಿಸಿದೆ. ಇವುಗಳನ್ನು ಕಾಲೇಜು ಮಕ್ಕಳಿಗೆ ತಿಳಿ ಹೇಳುವ ಕೆಲಸ ಆಗಬೇಕು ಎಂದುಕೊಂಡೆ. ಅದಕ್ಕಾಗಿ ಗಣೇಶ್ ಅವರನ್ನು ಸಂಪರ್ಕಿಸಿದೆ. ಅವರು ಒಪ್ಪಿಕೊಂಡರು’ ಎಂದು ಅವರು ವಿವರಿಸಿದರು.</p>.<p>‘2018ರ ನವೆಂಬರ್ನಲ್ಲಿ ಮೊದಲ ಕಾರ್ಯಕ್ರಮ ಆರಂಭವಾಯಿತು. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕ್ರಮ ನಡೆದಿದೆ. ಇದುವರೆಗೆ 36 ಕಡೆಗಳಲ್ಲಿ ಮಾಡಿದ್ದೇವೆ. ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ’ ಎಂದು ಅವರು ಹೇಳಿದರು.</p>.<p>‘ಮೊದಲ ಮತ್ತು ಎರಡನೇ ಸೆಮಿಸ್ಟರ್ಗಳಲ್ಲಿ ಕಾಲೇಜಿನಲ್ಲಿ ಮಕ್ಕಳು ಲಭ್ಯವಿರುವಾಗ ಕಾರ್ಯಕ್ರಮವನ್ನು ಮಾಡುತ್ತೇವೆ. ಒಂದರಿಂದ ಒಂದೂವರೆ ಗಂಟೆ ಅವಧಿಯ ಕಾರ್ಯಕ್ರಮ. ಮಹಾಕಾವ್ಯದ ಒಂದು ಅಧ್ಯಾಯವನ್ನು ವಾಚನಾಭಿಯನದ ಮೂಲಕ ವಿವರಿಸುತ್ತೇವೆ. ರಾಮಾಯಣದಲ್ಲಿ ಬರುವ ವಿವಿಧ ಪಾತ್ರಗಳನ್ನು ವಿವರಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.</p>.<p>ಮಹಾಕಾವ್ಯದಲ್ಲಿನ ರಾಮ, ರಾವಣ, ಸೀತೆ, ಮಂಡೋದರಿ, ಕೈಕೇಯಿ, ಮಂಥರೆ, ಲಕ್ಷ್ಮಣ, ಮಾರೀಚ, ಚಂದ್ರನಖಿ, ವಿಭೀಷಣನ ಮಗಳು ಅನಲಾ, ವಾಲಿ, ಸುಗ್ರೀವ, ಹನುಮಂತ ಇತ್ಯಾದಿ ಪಾತ್ರಗಳನ್ನು ಕಾರ್ಯಕ್ರಮದಲ್ಲಿ ವಿವರಿಸಲಾಗುತ್ತದೆ.</p>.<p>‘ಇದುವರೆಗೆ ಮಾಡಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಚೆನ್ನಾಗಿದೆ. ಚೆನ್ನಾಗಿ ಸ್ವೀಕರಿಸಿದ್ದಾರೆ. ಎಲ್ಲವೂ, ಎಲ್ಲರೂ ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ವಿದ್ಯಾರ್ಥಿಗಳೂ ಈ ಮಹಾಕಾವ್ಯದ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದಾರೆ. ವಾಚನಾಭಿನಯದ ಮೂಲಕ ವಿವರಿಸುವುದರಿಂದ ಕಾರ್ಯಕ್ರಮ ಆಕರ್ಷಕವಾಗಿರುತ್ತದೆ’ ಎಂದು ಸುಜಾತ ಅವರು ಪ್ರತಿಪಾದಿಸಿದರು.</p>.<p class="Briefhead"><strong>ಚಾಮರಾಜನಗರದಲ್ಲಿ ಇಂದು</strong><br />‘ರಾಮಾಯಣ ದರ್ಶನಂ–ಓದು’ ಎಂದು ಹೆಸರಿನ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕುವೆಂಪು ಅವರ ಮಹಾಕಾವ್ಯಕ್ಕೆ ‘ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷಗಳ ಸವಿನೆನಪಿಗಾಗಿ ಅಭಿಯಾನ ಆರಂಭವಾಗಿದೆ. 2018ರ ನವೆಂಬರ್ನಲ್ಲಿ ಆರಂಭವಾಗಿರುವ ಈ ಅಭಿಯಾನ ಇದುವರೆಗೆ 36 ಕಡೆಗಳಲ್ಲಿ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ರಾಷ್ಟ್ರಕವಿ ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಕಾಲೇಜು ಮಕ್ಕಳಿಗೆ ಪರಿಚಯಿಸುವ ಅಭಿಯಾನ ರಾಜ್ಯದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.</p>.<p>‘ರಾಮಾಯಣ ದರ್ಶನಂ–ಓದು’ ಎಂದು ಹೆಸರಿನ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕುವೆಂಪು ಅವರ ಮಹಾಕಾವ್ಯಕ್ಕೆ ‘ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷಗಳ ಸವಿನೆನಪಿಗಾಗಿ ಅಭಿಯಾನ ಆರಂಭವಾಗಿದೆ.2018ರ ನವೆಂಬರ್ನಲ್ಲಿ ಆರಂಭವಾಗಿರುವ ಈ ಅಭಿಯಾನ ಇದುವರೆಗೆ 36 ಕಡೆಗಳಲ್ಲಿ ನಡೆದಿದೆ.</p>.<p>ಕವಯಿತ್ರಿ ಎಚ್.ಆರ್.ಸುಜಾತ ಅವರ ಪರಿಕಲ್ಪನೆಯಲ್ಲಿ ರೂಪು ತಳೆದಿರುವ ಈ ವಿಭಿನ್ನ ಕಾರ್ಯಕ್ರಮವನ್ನು ವಾಚನಾಭಿನಯದ ಮೂಲಕ ಕಾಲೇಜು ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಲಾಗುತ್ತಿದೆ. ರಂಗಕರ್ಮಿ ಎಂ. ಗಣೇಶ್ ಉಡುಪಿ ಅವರು ಇದನ್ನು ನಿರ್ವಹಿಸುತ್ತಾರೆ. ನಂತರ ಕುವೆಂಪು ಸಾಹಿತ್ಯದ ಬಗ್ಗೆ ಉಪನ್ಯಾಸವೂ ಇರುತ್ತದೆ.</p>.<p class="Subhead">ಒಂದೂವರೆ ವರ್ಷ ಹಿಂದಿನ ಕಲ್ಪನೆ: ‘ಹಿಂದೊಮ್ಮೆ ಗಣೇಶ್ ಅವರು ರಾಮಾಯಣ ದರ್ಶನಂ ವಾಚಿಸುವುದನ್ನು ನೋಡಿದ್ದೆ. ಅದು ಗಮನ ಸೆಳೆದಿತ್ತು. ಒಂದೂವರೆ ವರ್ಷದ ಹಿಂದೆ ಈ ಕಲ್ಪನೆ ಬಂದಿತ್ತು. ಅಲ್ಲಿವರೆಗೆ ಕುವೆಂಪು ಅವರ ಎಲ್ಲ ಕೃತಿಗಳನ್ನು ಓದಿದ್ದೆ. ರಾಮಾಯಣ ದರ್ಶನಂ ಅನ್ನು ಓದಿರಲಿಲ್ಲ. ಓದಿದ ಮೇಲೆ ತುಂಬಾ ಇಷ್ಟವಾಯಿತು. ಕಾವ್ಯದಲ್ಲಿ ಅವರು ವರ್ಣಿಸಿರುವ ಕಾಡು, ಕಾಡಿನ ಅನುಭವಗಳು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಈ ಕಾವ್ಯದಲ್ಲಿ ಸಮಾಜಕ್ಕೆ ತಿಳಿಸಬೇಕಾದುದು ತುಂಬಾ ಇದೆ ಎನ್ನಿಸಿತು’ ಎಂದು ಅಭಿಯಾನದ ಕಲ್ಪನೆ ಮೊಳಕೆಯೊಡೆದ ಬಗೆಯನ್ನು ಸುಜಾತ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.</p>.<p>‘ಕುವೆಂಪು ಅವರ ಕೃತಿ, ವಾಲ್ಮೀಕಿ ರಾಮಾಯಣದಿಂದ ವಿಭಿನ್ನವಾಗಿದೆ. ಈ ಕಾವ್ಯವು ರಾಮಾಯಣವನ್ನು ಸಾಕಷ್ಟು ಸುಧಾರಿಸಿದೆ. ಇವುಗಳನ್ನು ಕಾಲೇಜು ಮಕ್ಕಳಿಗೆ ತಿಳಿ ಹೇಳುವ ಕೆಲಸ ಆಗಬೇಕು ಎಂದುಕೊಂಡೆ. ಅದಕ್ಕಾಗಿ ಗಣೇಶ್ ಅವರನ್ನು ಸಂಪರ್ಕಿಸಿದೆ. ಅವರು ಒಪ್ಪಿಕೊಂಡರು’ ಎಂದು ಅವರು ವಿವರಿಸಿದರು.</p>.<p>‘2018ರ ನವೆಂಬರ್ನಲ್ಲಿ ಮೊದಲ ಕಾರ್ಯಕ್ರಮ ಆರಂಭವಾಯಿತು. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕ್ರಮ ನಡೆದಿದೆ. ಇದುವರೆಗೆ 36 ಕಡೆಗಳಲ್ಲಿ ಮಾಡಿದ್ದೇವೆ. ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ’ ಎಂದು ಅವರು ಹೇಳಿದರು.</p>.<p>‘ಮೊದಲ ಮತ್ತು ಎರಡನೇ ಸೆಮಿಸ್ಟರ್ಗಳಲ್ಲಿ ಕಾಲೇಜಿನಲ್ಲಿ ಮಕ್ಕಳು ಲಭ್ಯವಿರುವಾಗ ಕಾರ್ಯಕ್ರಮವನ್ನು ಮಾಡುತ್ತೇವೆ. ಒಂದರಿಂದ ಒಂದೂವರೆ ಗಂಟೆ ಅವಧಿಯ ಕಾರ್ಯಕ್ರಮ. ಮಹಾಕಾವ್ಯದ ಒಂದು ಅಧ್ಯಾಯವನ್ನು ವಾಚನಾಭಿಯನದ ಮೂಲಕ ವಿವರಿಸುತ್ತೇವೆ. ರಾಮಾಯಣದಲ್ಲಿ ಬರುವ ವಿವಿಧ ಪಾತ್ರಗಳನ್ನು ವಿವರಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.</p>.<p>ಮಹಾಕಾವ್ಯದಲ್ಲಿನ ರಾಮ, ರಾವಣ, ಸೀತೆ, ಮಂಡೋದರಿ, ಕೈಕೇಯಿ, ಮಂಥರೆ, ಲಕ್ಷ್ಮಣ, ಮಾರೀಚ, ಚಂದ್ರನಖಿ, ವಿಭೀಷಣನ ಮಗಳು ಅನಲಾ, ವಾಲಿ, ಸುಗ್ರೀವ, ಹನುಮಂತ ಇತ್ಯಾದಿ ಪಾತ್ರಗಳನ್ನು ಕಾರ್ಯಕ್ರಮದಲ್ಲಿ ವಿವರಿಸಲಾಗುತ್ತದೆ.</p>.<p>‘ಇದುವರೆಗೆ ಮಾಡಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಚೆನ್ನಾಗಿದೆ. ಚೆನ್ನಾಗಿ ಸ್ವೀಕರಿಸಿದ್ದಾರೆ. ಎಲ್ಲವೂ, ಎಲ್ಲರೂ ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ವಿದ್ಯಾರ್ಥಿಗಳೂ ಈ ಮಹಾಕಾವ್ಯದ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದಾರೆ. ವಾಚನಾಭಿನಯದ ಮೂಲಕ ವಿವರಿಸುವುದರಿಂದ ಕಾರ್ಯಕ್ರಮ ಆಕರ್ಷಕವಾಗಿರುತ್ತದೆ’ ಎಂದು ಸುಜಾತ ಅವರು ಪ್ರತಿಪಾದಿಸಿದರು.</p>.<p class="Briefhead"><strong>ಚಾಮರಾಜನಗರದಲ್ಲಿ ಇಂದು</strong><br />‘ರಾಮಾಯಣ ದರ್ಶನಂ–ಓದು’ ಎಂದು ಹೆಸರಿನ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕುವೆಂಪು ಅವರ ಮಹಾಕಾವ್ಯಕ್ಕೆ ‘ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷಗಳ ಸವಿನೆನಪಿಗಾಗಿ ಅಭಿಯಾನ ಆರಂಭವಾಗಿದೆ. 2018ರ ನವೆಂಬರ್ನಲ್ಲಿ ಆರಂಭವಾಗಿರುವ ಈ ಅಭಿಯಾನ ಇದುವರೆಗೆ 36 ಕಡೆಗಳಲ್ಲಿ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>