‘ಗುರುಸ್ವಾಮಿ ಅವರು ಈ ಹಿಂದೆ ನಾಗೇಂದ್ರ ಎಂಬುವವರ ಹೆಸರಿಗೆ ಉಯಿಲು ಮಾಡಿದ್ದನ್ನು ಖಂಡಿಸಿದ ನಂತರ, ಅದನ್ನು ರದ್ದುಗೊಳಿಸಿದ್ದರು. ಅವರನ್ನು ಮಠದಿಂದ ದೂರ ಇಡಬೇಕು, ಉತ್ತರಾಧಿಕಾರಿ ಮಾಡಬಾರದು. ಮೂರನೇ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು ಎಂದು ಭಕ್ತರು ಒತ್ತಾಯ ಮಾಡಿದ್ದಾಗ, ಅದಕ್ಕೆ ಮಠದ ಪ್ರಮುಖರು ಒಪ್ಪಿಗೆ ನೀಡಿದ್ದರು. ಆದರೆ, ಈಗ ನಾಗೇಂದ್ರ ಅವರನ್ನೇ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲು ಹೊರಟಿರುವುದು ಭಕ್ತ ಸಮುದಾಯಕ್ಕೆ ಮಾಡಿರುವ ದ್ರೋಹ’ ಎಂದು ಸಾಲೂರು ಮಠದ ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.