<p><strong>ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ):</strong> ‘ವಿಶ್ವದಲ್ಲಿರುವ ಹುಲಿಗಳಲ್ಲಿ ಶೇ 70ರಷ್ಟು ಭಾರತದಲ್ಲಿಯೇ ಇವೆ’ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ನಿರ್ದೇಶಕ ಡಾ.ಎಸ್.ಪಿ.ಯಾದವ್ ತಿಳಿಸಿದರು.</p>.<p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿಯಲ್ಲಿ ಸೋಮವಾರ ಆರಂಭವಾದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯಲ್ಲಿ ಅವರು ಮಾತನಾಡಿದರು. </p>.<p>‘ವಿಶ್ವದಲ್ಲಿರುವ ಬಿಗ್ ಕ್ಯಾಟ್ಸ್ ಪ್ರಬೇಧಗಳಾದ ಹುಲಿ, ಸಿಂಹ, ಚಿರತೆ, ಚೀತಾ, ಹಿಮ ಚಿರತೆ, ಜಾಗ್ವಾರ್ ಹಾಗೂ ಪ್ಯೂಮಾಗಳನ್ನು ರಕ್ಷಣೆ ಈ ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ’ ಎಂದು ಹೇಳಿದರು.</p>.<p>‘ದೇಶದಲ್ಲಿ 14,000ದಿಂದ 15,000ದಷ್ಟು ಚಿರತೆಗಳಿವೆ. ಸಿಂಹಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದು ಬಿಗ್ ಕ್ಯಾಟ್ಸ್ಗಳ ಸಂತತಿಯನ್ನು ಸಂರಕ್ಷಿಸುವಲ್ಲಿ ಭಾರತವು ಮಾದರಿಯಾಗಿದೆ’ ಎಂದರು. </p>.<p>‘1952ರಲ್ಲಿ ದೇಶದಲ್ಲಿ ಚೀತಾ ಸಂತತಿ ಸಂಪೂರ್ಣ ನಶಿಸಿತ್ತು. ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಂಡು ಪೋಷಿಸಿದ ಫಲವಾಗಿ ಪ್ರಸ್ತುತ 35 ಚೀತಾಗಳಿವೆ’ ಎಂದು ಹೇಳಿದರು.</p>.<p>‘ಶೃಂಗಸಭೆಯಲ್ಲಿ ವಿಶ್ವದ 23 ದೇಶಗಳ 39 ಪ್ರತಿನಿಧಿಗಳು ಭಾಗವಹಿಸಿದ್ದು, ಬಿಗ್ ಕ್ಯಾಟ್ಸ್ ಪ್ರಭೇದಗಳ ಸಂತತಿ ಉಳಿವಿನ ಸಂಬಂಧ ವಿಚಾರ ವಿನಿಮಯ, ಸಂವಾದ ಜರುಗಲಿದೆ’ ಎಂದು ಮಾಹಿತಿ ನೀಡಿದರು.</p>.<p>ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಎಪಿಪಿಸಿಎಫ್ ಮನೋರಂಜನ್, ಬಿಸ್ವಜಿತ್ ಮಿಶ್ರಾ, ಹುಲಿ ಯೋಜನೆ ನಿರ್ದೇಶಕ ರಮೇಶ್ಕುಮಾರ್, ಚಾಮರಾಜನಗರ ಸಿಸಿಎಫ್ ಮಾಲತಿ ಪ್ರಿಯಾ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಪ್ರಭಾಕರನ್, ಎಸಿಎಫ್ ನವೀನ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ):</strong> ‘ವಿಶ್ವದಲ್ಲಿರುವ ಹುಲಿಗಳಲ್ಲಿ ಶೇ 70ರಷ್ಟು ಭಾರತದಲ್ಲಿಯೇ ಇವೆ’ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ನಿರ್ದೇಶಕ ಡಾ.ಎಸ್.ಪಿ.ಯಾದವ್ ತಿಳಿಸಿದರು.</p>.<p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿಯಲ್ಲಿ ಸೋಮವಾರ ಆರಂಭವಾದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯಲ್ಲಿ ಅವರು ಮಾತನಾಡಿದರು. </p>.<p>‘ವಿಶ್ವದಲ್ಲಿರುವ ಬಿಗ್ ಕ್ಯಾಟ್ಸ್ ಪ್ರಬೇಧಗಳಾದ ಹುಲಿ, ಸಿಂಹ, ಚಿರತೆ, ಚೀತಾ, ಹಿಮ ಚಿರತೆ, ಜಾಗ್ವಾರ್ ಹಾಗೂ ಪ್ಯೂಮಾಗಳನ್ನು ರಕ್ಷಣೆ ಈ ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ’ ಎಂದು ಹೇಳಿದರು.</p>.<p>‘ದೇಶದಲ್ಲಿ 14,000ದಿಂದ 15,000ದಷ್ಟು ಚಿರತೆಗಳಿವೆ. ಸಿಂಹಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದು ಬಿಗ್ ಕ್ಯಾಟ್ಸ್ಗಳ ಸಂತತಿಯನ್ನು ಸಂರಕ್ಷಿಸುವಲ್ಲಿ ಭಾರತವು ಮಾದರಿಯಾಗಿದೆ’ ಎಂದರು. </p>.<p>‘1952ರಲ್ಲಿ ದೇಶದಲ್ಲಿ ಚೀತಾ ಸಂತತಿ ಸಂಪೂರ್ಣ ನಶಿಸಿತ್ತು. ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಂಡು ಪೋಷಿಸಿದ ಫಲವಾಗಿ ಪ್ರಸ್ತುತ 35 ಚೀತಾಗಳಿವೆ’ ಎಂದು ಹೇಳಿದರು.</p>.<p>‘ಶೃಂಗಸಭೆಯಲ್ಲಿ ವಿಶ್ವದ 23 ದೇಶಗಳ 39 ಪ್ರತಿನಿಧಿಗಳು ಭಾಗವಹಿಸಿದ್ದು, ಬಿಗ್ ಕ್ಯಾಟ್ಸ್ ಪ್ರಭೇದಗಳ ಸಂತತಿ ಉಳಿವಿನ ಸಂಬಂಧ ವಿಚಾರ ವಿನಿಮಯ, ಸಂವಾದ ಜರುಗಲಿದೆ’ ಎಂದು ಮಾಹಿತಿ ನೀಡಿದರು.</p>.<p>ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಎಪಿಪಿಸಿಎಫ್ ಮನೋರಂಜನ್, ಬಿಸ್ವಜಿತ್ ಮಿಶ್ರಾ, ಹುಲಿ ಯೋಜನೆ ನಿರ್ದೇಶಕ ರಮೇಶ್ಕುಮಾರ್, ಚಾಮರಾಜನಗರ ಸಿಸಿಎಫ್ ಮಾಲತಿ ಪ್ರಿಯಾ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಪ್ರಭಾಕರನ್, ಎಸಿಎಫ್ ನವೀನ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>