ನಗರದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿದ್ದವರು ಯಾರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧಿಸಿದ್ದರು. ಮೈಸೂರಿನಲ್ಲಿ ಮಾತ್ರ ನಿಂತು ಸೋತಿದ್ದರೆ ಸಿದ್ದರಾಮಯ್ಯ ಅವರು ಕೂಡ ಎಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ ಅವರಂತೆ ಅವಿತುಕೊಂಡಿರುತ್ತಿದ್ದರು. ಪತ್ತೆನೇ ಇರುತ್ತಿರಲಿಲ್ಲ. ಏನೋ, ಬಾದಾಮಿಗೆ ಹೋಗಿ ಗೆದ್ದುಕೊಂಡಿದ್ದಾರೆ. ಅತ್ತು ಕರೆದು ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ. ಅವರು ಈಗ ತಮಗಿರುವ ಜವಾಬ್ದಾರಿಯಷ್ಟು ಕೆಲಸ ಮಾಡಿಕೊಂಡು ಹೋಗಲಿ’ ಎಂದು ಕುಟುಕಿದರು.