<p>ಚಾಮರಾಜನಗರ: ಜ್ಞಾನದೀಪ ಟ್ರಸ್ಟ್ ವತಿಯಿಂದ ನಗರದ ವರನಟ ಡಾ. ರಾಜ್ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾವಗೀತೆ ವಿಭಾಗದಲ್ಲಿ ಬ್ರೈಟ್ ಕಾಲೇಜಿನ ಅಭಿಷೇಕ್, ಜಾನಪದ ಗೀತೆಗಳ ವಿಭಾಗದಲ್ಲಿ ಕೊಳ್ಳೇಗಾಲದ ಜೆಎಸ್ಎಸ್ ಕಾಲೇಜಿನ ಎಂ.ಭವಾನಿ ಪ್ರಥಮ ಸ್ಥಾನ ಪಡೆದುಕೊಂಡರು.</p>.<p>ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾವಗೀತೆ ವಿಭಾಗದಲ್ಲಿ ಪ್ರಜೀತಾ ದ್ವಿತೀಯ, ಪೂರ್ಣಶ್ರೀ ತೃತೀಯ ಸ್ಥಾನ ಹಾಗೂ ಬೋರಮ್ಮ ಗು.ಹಂಗರಗಿ, ಎಸ್.ದೀಪ, ಮೇಘನಾ, ನಿಂಗರಾಜು, ಸ್ಪಂದನ ಸಮಾಧಾನಕಾರ ಬಹುಮಾನ ಪಡೆದರು. <br>ಜಾನಪದಗೀತೆ ವಿಭಾಗದಲ್ಲಿ ತಸ್ಲೀಮ್ ದ್ವಿತೀಯ, ನಯನಾ ತೃತೀಯ, ಐಶ್ವರ್ಯ, ಎಂ.ಸುಗಂಧ, ಕೆ.ಅರ್ಷಿಯ, ಅಂಜಲಿ, ಪೂರ್ಣಿಮಾ ಸಮಾಧಾನಕಾರ ಬಹುಮಾನ ಪಡೆದರು.</p>.<p>ಬಹುಮಾನ ವಿತರಿಸಿದ ಗ್ರೀನ್ ಪ್ಯಾಲೇಸ್ ಹೆರಿಟೇಜ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಹೆಚ್.ಆರ್.ನಾರಾಯಣ್ ಮಾತನಾಡಿ, ಜಿಲ್ಲಾ ಮಟ್ಟದ ಭಾವಗೀತೆ, ಜಾನಪದ ಗೀತೆಗಳ ಸ್ಪರ್ಧೆ ಅಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಭಿನಂದನೀಯ ಎಂದರು.</p>.<p>ಜ್ಞಾನದೀಪ ಟ್ರಸ್ಟ್ ಅಧ್ಯಕ್ಷ ಆರ್.ಪಿ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಶ್ರೀಕಂಠಮೂರ್ತಿ, ನಗರಸಭಾ ಸದಸ್ಯ ಎಂ.ಮಹೇಶ್, ಕಾಂಗ್ರೆಸ್ ಮುಖಂಡ ಆರ್.ಮಹದೇವು ಮಾತನಾಡಿದರು.</p>.<p>ಮೈಸೂರಿನ ಶ್ರೀಧರ್ಮಸ್ಥಳ ಮಂಜುನಾಥ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಅನಿತಾ ಪಿ.ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಜಯಲಕ್ಷ್ಮಿ, ಸಂಯೋಜಕ ಜೆ.ವಿ.ವೀರಭದ್ರಪ್ಪ, ನಗರಸಭಾ ಸದಸ್ಯ ಬಸವಣ್ಣ, ಆರ್.ಎಸ್.ರಾಘವೇಂದ್ರ, ಶಿಕ್ಷಕ ನಟರಾಜು, ವರ್ತಕರ ಸಂಘದ ಅಧ್ಯಕ್ಷ ಶಂಕರ್, ಮಾದೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಜ್ಞಾನದೀಪ ಟ್ರಸ್ಟ್ ವತಿಯಿಂದ ನಗರದ ವರನಟ ಡಾ. ರಾಜ್ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾವಗೀತೆ ವಿಭಾಗದಲ್ಲಿ ಬ್ರೈಟ್ ಕಾಲೇಜಿನ ಅಭಿಷೇಕ್, ಜಾನಪದ ಗೀತೆಗಳ ವಿಭಾಗದಲ್ಲಿ ಕೊಳ್ಳೇಗಾಲದ ಜೆಎಸ್ಎಸ್ ಕಾಲೇಜಿನ ಎಂ.ಭವಾನಿ ಪ್ರಥಮ ಸ್ಥಾನ ಪಡೆದುಕೊಂಡರು.</p>.<p>ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾವಗೀತೆ ವಿಭಾಗದಲ್ಲಿ ಪ್ರಜೀತಾ ದ್ವಿತೀಯ, ಪೂರ್ಣಶ್ರೀ ತೃತೀಯ ಸ್ಥಾನ ಹಾಗೂ ಬೋರಮ್ಮ ಗು.ಹಂಗರಗಿ, ಎಸ್.ದೀಪ, ಮೇಘನಾ, ನಿಂಗರಾಜು, ಸ್ಪಂದನ ಸಮಾಧಾನಕಾರ ಬಹುಮಾನ ಪಡೆದರು. <br>ಜಾನಪದಗೀತೆ ವಿಭಾಗದಲ್ಲಿ ತಸ್ಲೀಮ್ ದ್ವಿತೀಯ, ನಯನಾ ತೃತೀಯ, ಐಶ್ವರ್ಯ, ಎಂ.ಸುಗಂಧ, ಕೆ.ಅರ್ಷಿಯ, ಅಂಜಲಿ, ಪೂರ್ಣಿಮಾ ಸಮಾಧಾನಕಾರ ಬಹುಮಾನ ಪಡೆದರು.</p>.<p>ಬಹುಮಾನ ವಿತರಿಸಿದ ಗ್ರೀನ್ ಪ್ಯಾಲೇಸ್ ಹೆರಿಟೇಜ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಹೆಚ್.ಆರ್.ನಾರಾಯಣ್ ಮಾತನಾಡಿ, ಜಿಲ್ಲಾ ಮಟ್ಟದ ಭಾವಗೀತೆ, ಜಾನಪದ ಗೀತೆಗಳ ಸ್ಪರ್ಧೆ ಅಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಭಿನಂದನೀಯ ಎಂದರು.</p>.<p>ಜ್ಞಾನದೀಪ ಟ್ರಸ್ಟ್ ಅಧ್ಯಕ್ಷ ಆರ್.ಪಿ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಶ್ರೀಕಂಠಮೂರ್ತಿ, ನಗರಸಭಾ ಸದಸ್ಯ ಎಂ.ಮಹೇಶ್, ಕಾಂಗ್ರೆಸ್ ಮುಖಂಡ ಆರ್.ಮಹದೇವು ಮಾತನಾಡಿದರು.</p>.<p>ಮೈಸೂರಿನ ಶ್ರೀಧರ್ಮಸ್ಥಳ ಮಂಜುನಾಥ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಅನಿತಾ ಪಿ.ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಜಯಲಕ್ಷ್ಮಿ, ಸಂಯೋಜಕ ಜೆ.ವಿ.ವೀರಭದ್ರಪ್ಪ, ನಗರಸಭಾ ಸದಸ್ಯ ಬಸವಣ್ಣ, ಆರ್.ಎಸ್.ರಾಘವೇಂದ್ರ, ಶಿಕ್ಷಕ ನಟರಾಜು, ವರ್ತಕರ ಸಂಘದ ಅಧ್ಯಕ್ಷ ಶಂಕರ್, ಮಾದೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>