‘ಯರಕನಗದ್ದೆಯ ಅತಿಥಿ ಗೃಹ ಜಾಗ ಸೂಕ್ತವಾಗಿದೆ. ಉತ್ತಮ ವ್ಯವಸ್ಥೆಗೆ ಸಿದ್ಧತೆ ಆರಂಭಿಸಬೇಕು. ಭದ್ರತೆ ದೃಷ್ಠಿಯಿಂದ ರಂಗನಾಥನ ಸನ್ನಿಧಿಯಲ್ಲಿ ಕೆಲವೊಂದು
ವಸ್ತುಗಳನ್ನು ತೆಗೆಯಬೇಕಿದೆ. ದರ್ಶನಕ್ಕೆ ರಾಷ್ಟ್ರಪತಿ ಆಗಮಿಸುವ ಮಾರ್ಗ ಯಾವುದುಇರಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು. ರಸ್ತೆ ಇಲ್ಲವೇ ಮೆಟ್ಟಿಲಿನ ಸ್ಥಳ ಪರಿಶೀಲನೆ, ಅರ್ಚಕರ ಮಾಹಿತಿ ಮತ್ತು ಸುತ್ತಮುತ್ತಲಪ್ರದೇಶವನ್ನು ಸ್ವಚ್ಛತೆ, ದೇವಳದ ಒಳಾಂಗಣದಲ್ಲಿ ಸ್ಯಾನಿಟೈಸರ್ ಮಾಡಿಸುವಂತೆಸೂಚಿಸಲಾಗಿದೆ’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಮೋಹನ್ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.