‘ಜಿಲ್ಲಾಡಳಿತದ ಬಹಳಷ್ಟು ಪ್ರಯತ್ನದ ನಂತರವೂ ಕೆಲ ಸಂಘಟನೆಗಳು ಹಟ ಹಿಡಿದು ಈದ್ಗಾ ಮೈದಾನದಲ್ಲಿಪ್ರತ್ಯೇಕ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದವು.ಬೆಂಗಳೂರಿನಿಂದ ಬಂದಿದ್ದ ಒಬ್ಬ ಭಾಷಣಕಾರರು ಹಾಗೂ ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಶಾಸಕ ವಾಟಾಳ್ ನಾಗರಾಜ್ ಭಾಗವಹಿಸಿದ್ದರು. ಸಿಎಎ, ಎನ್ಆರ್ಸಿ, ಜಿಎಸ್ಟಿ ಸೇರಿದಂತೆ ಕೇಂದ್ರ ಸರ್ಕಾರದ ತೀರ್ಮಾನಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಾಟಾಳ್ ನಾಗರಾಜ್ ಅವರು ಟಿಪ್ಪು ಜಯಂತಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.