<p><strong>ಯಳಂದೂರು:</strong>ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಪಟ್ಟಣದ ಹಲವು ಭಾಗ ಮಂಗಳವಾರ ಬೆಳಿಗ್ಗೆ ಜಲಾವೃತವಾಗಿದೆ.</p>.<p>ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಅವಕ್ಕಾದರು. ರಾಜ ಕಾಲುವೆ, ಕಚೇರಿಗಳು, ಜಲಾವೃತವಾಗಿದ್ದು ಬಸ್ ಗಳು ವಾಹನಗಳು ತುಂಬಿ ಹರಿಯುತ್ತಿದ್ದ ನೀರಿನ ನಡುವೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>'ನೆರೆ 50 ವರ್ಷಗಳ ನಂತರ ಪಟ್ಟಣವನ್ನು ಆವರಿಸಿದೆ. ಬಹುತೇಕ ಬಳೆಪೇಟೆ ಮತ್ತು ಪಟ್ಟಣದ ಗೌತಮ್ ಬಡಾವಣೆಯ ಮನೆಗಳ ಸುತ್ತ ನೀರು ತುಂಬಿ ಹರಿಯುತ್ತಿದೆ' ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ಹೇಳಿದರು.<br /><br />'ಕಂದಹಳ್ಳಿ ಸಮೀಪ ಸುವರ್ಣಾವತಿ ನದಿ ಸಮೀಪ ಹೆಚ್ಚಿನ ನೀರು ರಭಸವಾಗಿ ಹರಿಯುತ್ತಿದೆ. ನೀರು ಪಟ್ಟಣದ ಹಲವು ಬಡಾವಣೆಗೆ ನುಗ್ಗಲು ಕಾರಣವಾಗಿದೆ' ಎಂದು ಪಟ್ಟಣದ ಸುರೇಶ್ ಮಾಹಿತಿ ನೀಡಿದರು.</p>.<p>'ತಾಲ್ಲೂಕು ಆಡಳಿತದ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ನೆರೆ ಪೀಡಿತ ಗ್ರಾಮಗಳ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಆತಂಕ ಬೇಡ' ಎಂದು ತಹಶೀಲ್ದಾರ್ ಕೆ. ಬಿ. ಆನಂದಪ್ಪ ನಾಯಕ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong>ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಪಟ್ಟಣದ ಹಲವು ಭಾಗ ಮಂಗಳವಾರ ಬೆಳಿಗ್ಗೆ ಜಲಾವೃತವಾಗಿದೆ.</p>.<p>ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಅವಕ್ಕಾದರು. ರಾಜ ಕಾಲುವೆ, ಕಚೇರಿಗಳು, ಜಲಾವೃತವಾಗಿದ್ದು ಬಸ್ ಗಳು ವಾಹನಗಳು ತುಂಬಿ ಹರಿಯುತ್ತಿದ್ದ ನೀರಿನ ನಡುವೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>'ನೆರೆ 50 ವರ್ಷಗಳ ನಂತರ ಪಟ್ಟಣವನ್ನು ಆವರಿಸಿದೆ. ಬಹುತೇಕ ಬಳೆಪೇಟೆ ಮತ್ತು ಪಟ್ಟಣದ ಗೌತಮ್ ಬಡಾವಣೆಯ ಮನೆಗಳ ಸುತ್ತ ನೀರು ತುಂಬಿ ಹರಿಯುತ್ತಿದೆ' ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ಹೇಳಿದರು.<br /><br />'ಕಂದಹಳ್ಳಿ ಸಮೀಪ ಸುವರ್ಣಾವತಿ ನದಿ ಸಮೀಪ ಹೆಚ್ಚಿನ ನೀರು ರಭಸವಾಗಿ ಹರಿಯುತ್ತಿದೆ. ನೀರು ಪಟ್ಟಣದ ಹಲವು ಬಡಾವಣೆಗೆ ನುಗ್ಗಲು ಕಾರಣವಾಗಿದೆ' ಎಂದು ಪಟ್ಟಣದ ಸುರೇಶ್ ಮಾಹಿತಿ ನೀಡಿದರು.</p>.<p>'ತಾಲ್ಲೂಕು ಆಡಳಿತದ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ನೆರೆ ಪೀಡಿತ ಗ್ರಾಮಗಳ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಆತಂಕ ಬೇಡ' ಎಂದು ತಹಶೀಲ್ದಾರ್ ಕೆ. ಬಿ. ಆನಂದಪ್ಪ ನಾಯಕ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>