<p><strong>ಗುಂಡ್ಲುಪೇಟೆ</strong>: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿ.ಎ.ಪಿ.ಸಿ.ಎಂ.ಎಸ್)ದ ಅಧ್ಯಕ್ಷರಾಗಿ ಜಿ.ಮಡಿವಾಳಪ್ಪ, ಉಪಾಧ್ಯಕ್ಷರಾಗಿ ಗೋಕುಲಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.</p>.<p> ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಎಸ್.ತನ್ಮಯ್ ಅವಿರೋಧ ಆಯ್ಕೆ ಘೋಷಿಸಿದರು.</p>.<p> 11 ಮಂದಿ ಸದಸ್ಯರು ಮತ್ತು ನಾಮ ನಿರ್ದೇಶನಗೊಂಡ ಒಬ್ಬರು, ಎಆರ್ 1 ಮತ್ತು ಇಬ್ಬರು ಬಿಜೆಪಿ ಬೆಂಬಲಿತರನ್ನು ಒಳಗೊಂಡು 14 ಮಂದಿ ಮತ ಚಲಾಯಿಸುವ ಅವಕಾಶವಿತ್ತು. ಆದರೆ ಎಲ್ಲರೂ ಅವಿರೋಧ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದರಿಂದ ಆಯ್ಕೆ ಸುಗಮವಾಗಿ ನಡೆಯಿತು.</p>.<p>ನಿರ್ದೇಶಕರಾದ ಎನ್.ಪ್ರದೀಪ್ಕುಮಾರ್, ಎಸ್.ಶಿವನಾಗಪ್ಪ, ಕೆ.ಮಹದೇವಸ್ವಾಮಿ, ಶಿವನಂಜಪ್ಪ, ಎಲ್.ಮಹೇಶ್ವರಿ, ಆರ್.ಜಯರಾಮ್, ಎನ್.ರವೀಂದ್ರ, ಎ.ಎಸ್.ಸೋಮಶೇಖರ್, ಚಿಕ್ಕತಾಯಮ್ಮ, ಜಯರಾಜ್, ಪಕ್ಷದ ಮುಖಂಡರಾದ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಮೊಳ್ಳಯ್ಯನಹುಂಡಿ ಬಸವರಾಜು, ಆರ್.ಎಸ್.ನಾಗರಾಜು, ನಾಗೇಶ್ ರಾಘವಾಪುರ, ಮಹೇಶ್ಚಿಕ್ಕಾಟಿ, ಮಂಚಹಳ್ಳಿ ಲೋಕೇಶ್, ಪ್ರಭುಸ್ವಾಮಿ ಕರಕಲಮಾದಹಳ್ಳಿ, ನಾಗಪ್ಪ ವಡ್ಡಗೆರೆ, ಪರಮೇಶ್ವರಪ್ಪ ಅಂಕಹಳ್ಳಿ , ಕಾಂಗ್ರೆಸ್ ಪ್ರಮುಖರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ</strong>: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿ.ಎ.ಪಿ.ಸಿ.ಎಂ.ಎಸ್)ದ ಅಧ್ಯಕ್ಷರಾಗಿ ಜಿ.ಮಡಿವಾಳಪ್ಪ, ಉಪಾಧ್ಯಕ್ಷರಾಗಿ ಗೋಕುಲಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.</p>.<p> ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಎಸ್.ತನ್ಮಯ್ ಅವಿರೋಧ ಆಯ್ಕೆ ಘೋಷಿಸಿದರು.</p>.<p> 11 ಮಂದಿ ಸದಸ್ಯರು ಮತ್ತು ನಾಮ ನಿರ್ದೇಶನಗೊಂಡ ಒಬ್ಬರು, ಎಆರ್ 1 ಮತ್ತು ಇಬ್ಬರು ಬಿಜೆಪಿ ಬೆಂಬಲಿತರನ್ನು ಒಳಗೊಂಡು 14 ಮಂದಿ ಮತ ಚಲಾಯಿಸುವ ಅವಕಾಶವಿತ್ತು. ಆದರೆ ಎಲ್ಲರೂ ಅವಿರೋಧ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದರಿಂದ ಆಯ್ಕೆ ಸುಗಮವಾಗಿ ನಡೆಯಿತು.</p>.<p>ನಿರ್ದೇಶಕರಾದ ಎನ್.ಪ್ರದೀಪ್ಕುಮಾರ್, ಎಸ್.ಶಿವನಾಗಪ್ಪ, ಕೆ.ಮಹದೇವಸ್ವಾಮಿ, ಶಿವನಂಜಪ್ಪ, ಎಲ್.ಮಹೇಶ್ವರಿ, ಆರ್.ಜಯರಾಮ್, ಎನ್.ರವೀಂದ್ರ, ಎ.ಎಸ್.ಸೋಮಶೇಖರ್, ಚಿಕ್ಕತಾಯಮ್ಮ, ಜಯರಾಜ್, ಪಕ್ಷದ ಮುಖಂಡರಾದ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಮೊಳ್ಳಯ್ಯನಹುಂಡಿ ಬಸವರಾಜು, ಆರ್.ಎಸ್.ನಾಗರಾಜು, ನಾಗೇಶ್ ರಾಘವಾಪುರ, ಮಹೇಶ್ಚಿಕ್ಕಾಟಿ, ಮಂಚಹಳ್ಳಿ ಲೋಕೇಶ್, ಪ್ರಭುಸ್ವಾಮಿ ಕರಕಲಮಾದಹಳ್ಳಿ, ನಾಗಪ್ಪ ವಡ್ಡಗೆರೆ, ಪರಮೇಶ್ವರಪ್ಪ ಅಂಕಹಳ್ಳಿ , ಕಾಂಗ್ರೆಸ್ ಪ್ರಮುಖರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>