‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದಾಗ, ಕಬಿನಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸಿದರೆ ಅಂಜರ್ತಲ ಮಟ್ಟ ಹೆಚ್ಚುತ್ತದೆ ಎಂದು 2008ರಲ್ಲಿ ಕಾರ್ಯಾಚರಣೆ ಆರಂಭಿಸಿದೆವು. ಸುತ್ತೂರು ಶ್ರೀಗಳ ಸೂಚನೆ, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬದ್ಧತೆ, ಅಂದಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರ ಕಾಳಜಿ ಹಾಗೂ ವಸತಿ ಸಚಿವರಾಗಿದ್ದ ವಿ. ಸೋಮಣ್ಣನವರ ಆಸಕ್ತಿಯಿಂದ ಕಾಮಗಾರಿ ಆರಂಭವಾಗಿ 2014ರ ಆಗಸ್ಟ್ 15ರಂದು ಕೆರೆಗಳಿಗೆ ನೀರು ಹರಿಯಿತು’ ಎಂದು ಸ್ಮರಿಸಿದರು.