<p>ಚಾಮರಾಜನಗರ: ಸುತ್ತಮುತ್ತಲೂ ಹಸಿರು ಕಾನನ. ಪಕ್ಕದಲ್ಲಿಯೇ ಹರಿಯುವ `ಭಾರ್ಗವಿ~ ತೊರೆ. ದೂರದ ಬೇಡಗುಳಿ, ಮೊಣಕೈಪೋಡು, ನೆಲ್ಲಿಕತ್ರಿ ಸೇರಿದಂತೆ 30ಕ್ಕೂ ಹೆಚ್ಚು ಪೋಡುಗಳಿಂದ ಬಂದಿದ್ದ ಸೋಲಿಗರು ಮನದಲ್ಲಿಯೇ ಮಾದೇಶ್ವರನ ಜಪ ಮಾಡುತ್ತಿದ್ದರು. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ `ಗೋರುಕಾನ~ ಹಾಡು ಕಾಡಿನಲ್ಲಿ ಅನುರಣಿಸಿತು. ಹಾಡಿನೊಂದಿಗೆ ಸೋಲಿಗರ ನೃತ್ಯವೂ ಆರಂಭಗೊಂಡಿತು. <br /> <br /> ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ ಕೆರೆದಿಂಬ ಪೋಡಿಗೆ ಅಂಟಿಕೊಂಡಿರುವ ದೊಡ್ಡಸಂಪಿಗೆಯಲ್ಲಿ ಸೋಮವಾರ ರಾತ್ರಿ ಸೋಲಿಗರ `ರೊಟ್ಟಿ ಹಬ್ಬ~ದ ಸಂಭ್ರಮ ಮೇಳೈಸಿತ್ತು. ವಿವಿಧ ಪೋಡುಗಳಿಂದ ಬಂದಿದ್ದ ಸೋಲಿಗರು ಮಾದೇಶ್ವರಸ್ವಾಮಿ, ಜಡೆಸ್ವಾಮಿ, ಕಡವಿನ ಬಸಪ್ಪ, ಕುಂಭೇಶ್ವರ, ಕೇತಪ್ಪ, ಕಾಡಯ್ಯ ಸ್ವಾಮಿಗೆ ಪೂಜೆ ಸಲ್ಲಿಸಿದರು. <br /> <br /> ರಾಗಿ ರೊಟ್ಟಿ, ತಾಜಾ ಕಾಯಿಪಲ್ಲೆ, ಕುಂಬಳಕಾಯಿ ಗೊಜ್ಜು, ಅನ್ನ-ಸಾಂಬಾರು, ಹಲಸಿನ ಪಲ್ಯ, ಪಾಯಸ ಸೇರಿದಂತೆ ಸಾಂಪ್ರದಾಯಿಕ ಅಡಿಗೆಯ ಸಂಭ್ರಮವಿತ್ತು. ಗೋರುಕಾನ ಹಾಡಿನೊಂದಿಗೆ ಸೋಲಿಗರು ಕಾಡು, ಪ್ರಾಣಿಗಳ ವರ್ಣನೆ ಮಾಡಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ನೃತ್ಯ ಪ್ರದರ್ಶಿಸಿದರು. ಮಂಗಳವಾರ ಮುಂಜಾನೆವರೆಗೂ ನೃತ್ಯ ಮುಂದುವರಿಯಿತು. <br /> <br /> ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿಲ್ಲ. ದೊಡ್ಡಸಂಪಿಗೆ ಪಕ್ಕದಲ್ಲಿ ಹರಿಯುವ `ಭಾರ್ಗವಿ~ ತೊರೆಯಲ್ಲೂ ನೀರಿನ ಹರಿವು ಕಡಿಮೆ ಇತ್ತು. ಇದರ ಪರಿಣಾಮ ಸೋಲಿಗರು ಕುಡಿಯುವ ನೀರಿಗಾಗಿ ಪಕ್ಕದ ಕೆರೆದಿಂಬ ಪೋಡಿನ ಬಳಿಯ ತೆರೆದ ಗುಂಡಿಗಳನ್ನೇ ಆಶ್ರಯಿಸಬೇಕಾಯಿತು.<br /> <br /> ಕೆರೆದಿಂಬದ ಬಳಿ ಸಂಪಿಗೆ ಮರವಿದೆ. ಇದು ಸೋಲಿಗರ ಪವಿತ್ರ ವೃಕ್ಷ. ಹೀಗಾಗಿ, ಈ ಪ್ರದೇಶಕ್ಕೆ `ದೊಡ್ಡಸಂಪಿಗೆ~ ಎಂದು ಕರೆಯಲಾಗುತ್ತಿದ್ದು, 101 ಕಲ್ಲಿನ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.<br /> <br /> <strong>ಹಬ್ಬದಲ್ಲೇ ವಿವಾಹ</strong><br /> ರೊಟ್ಟಿ ಹಬ್ಬದಲ್ಲಿಯೇ ಸೋಲಿಗರ ವಿವಾಹ ನಡೆಯುವುದು ವಿಶೇಷ. ದೊಡ್ಡಸಂಪಿಗೆಗೆ ವಿವಿಧ ಪೋಡುಗಳಿಂದ ಹೆಣ್ಣುಮಕ್ಕಳು ಕುಟುಂಬದ ಸದಸ್ಯರೊಟ್ಟಿಗೆ ಬರುತ್ತಾರೆ. ಸೋಲಿಗ ಯುವಕರು ತಮಗೆ ಇಷ್ಟವಾದ ಯುವತಿಯನ್ನು ವಿವಾಹಕ್ಕೆ ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯ ಈಗಲೂ ಇದೆ. <br /> <br /> ಪರಸ್ಪರ ಒಪ್ಪಿಗೆಯಾದ ಬಳಿಕ ಒಟ್ಟಾಗಿ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಪೋಷಕರ ಅರಿವಿಗೆ ಬಾರದಂತೆ ಕಾಡಿನೊಳಕ್ಕೆ ಹೋಗುತ್ತಾರೆ. ಹಬ್ಬದ ರಾತ್ರಿಯಂದು ಅಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಬಳಿಕ ಪೋಡುಗಳಿಗೆ ಮರಳುತ್ತಾರೆ. ಆಗ ಅವರಿಬ್ಬರು ಸತಿ-ಪತಿಯೆಂದು ಪೋಡಿನ ಯಜಮಾನರಿಂದ ಅಧಿಕೃತ ತೀರ್ಮಾನ ಹೊರಬೀಳುತ್ತದೆ. <br /> <br /> `ಪ್ರಸ್ತುತ ಆಧುನಿಕತೆಯ ಪ್ರಭಾವ ಗಿರಿಜನರ ಮೇಲೂ ಬೀರಿದೆ. ಇದರಿಂದ ಬುಡಕಟ್ಟು ಸಂಸ್ಕೃತಿಗೆ ತೊಡಕಾಗುತ್ತಿದೆ. ರೊಟ್ಟಿ ಹಬ್ಬದಲ್ಲಿ ಪರಸ್ಪರ ಒಪ್ಪಿಕೊಂಡ ಹೆಣ್ಣು-ಗಂಡು ಹತ್ತಿರದ ಪೋಡುಗಳು ಹಾಗೂ ಕಾಡಿನೊಳಕ್ಕೆ ಹೋಗುತ್ತಾರೆ. <br /> <br /> ಅವರು ಪುನಃ ಸ್ವಂತ ಪೋಡುಗಳಿಗೆ ಮರಳುವಾಗ ಕೆಲವೊಮ್ಮೆ ಒಂದು ವಾರ ಕಳೆದಿರುತ್ತದೆ. ಅವರು ಪೋಡಿಗೆ ಬಂದಾಗಲಷ್ಟೇ ವಿವಾಹವಾಗಿರುವುದು ಬೆಳಕಿಗೆ ಬರುತ್ತದೆ~ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಕಾರ್ಯದರ್ಶಿ ಸಿ. ಮಾದೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಸುತ್ತಮುತ್ತಲೂ ಹಸಿರು ಕಾನನ. ಪಕ್ಕದಲ್ಲಿಯೇ ಹರಿಯುವ `ಭಾರ್ಗವಿ~ ತೊರೆ. ದೂರದ ಬೇಡಗುಳಿ, ಮೊಣಕೈಪೋಡು, ನೆಲ್ಲಿಕತ್ರಿ ಸೇರಿದಂತೆ 30ಕ್ಕೂ ಹೆಚ್ಚು ಪೋಡುಗಳಿಂದ ಬಂದಿದ್ದ ಸೋಲಿಗರು ಮನದಲ್ಲಿಯೇ ಮಾದೇಶ್ವರನ ಜಪ ಮಾಡುತ್ತಿದ್ದರು. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ `ಗೋರುಕಾನ~ ಹಾಡು ಕಾಡಿನಲ್ಲಿ ಅನುರಣಿಸಿತು. ಹಾಡಿನೊಂದಿಗೆ ಸೋಲಿಗರ ನೃತ್ಯವೂ ಆರಂಭಗೊಂಡಿತು. <br /> <br /> ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ ಕೆರೆದಿಂಬ ಪೋಡಿಗೆ ಅಂಟಿಕೊಂಡಿರುವ ದೊಡ್ಡಸಂಪಿಗೆಯಲ್ಲಿ ಸೋಮವಾರ ರಾತ್ರಿ ಸೋಲಿಗರ `ರೊಟ್ಟಿ ಹಬ್ಬ~ದ ಸಂಭ್ರಮ ಮೇಳೈಸಿತ್ತು. ವಿವಿಧ ಪೋಡುಗಳಿಂದ ಬಂದಿದ್ದ ಸೋಲಿಗರು ಮಾದೇಶ್ವರಸ್ವಾಮಿ, ಜಡೆಸ್ವಾಮಿ, ಕಡವಿನ ಬಸಪ್ಪ, ಕುಂಭೇಶ್ವರ, ಕೇತಪ್ಪ, ಕಾಡಯ್ಯ ಸ್ವಾಮಿಗೆ ಪೂಜೆ ಸಲ್ಲಿಸಿದರು. <br /> <br /> ರಾಗಿ ರೊಟ್ಟಿ, ತಾಜಾ ಕಾಯಿಪಲ್ಲೆ, ಕುಂಬಳಕಾಯಿ ಗೊಜ್ಜು, ಅನ್ನ-ಸಾಂಬಾರು, ಹಲಸಿನ ಪಲ್ಯ, ಪಾಯಸ ಸೇರಿದಂತೆ ಸಾಂಪ್ರದಾಯಿಕ ಅಡಿಗೆಯ ಸಂಭ್ರಮವಿತ್ತು. ಗೋರುಕಾನ ಹಾಡಿನೊಂದಿಗೆ ಸೋಲಿಗರು ಕಾಡು, ಪ್ರಾಣಿಗಳ ವರ್ಣನೆ ಮಾಡಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ನೃತ್ಯ ಪ್ರದರ್ಶಿಸಿದರು. ಮಂಗಳವಾರ ಮುಂಜಾನೆವರೆಗೂ ನೃತ್ಯ ಮುಂದುವರಿಯಿತು. <br /> <br /> ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿಲ್ಲ. ದೊಡ್ಡಸಂಪಿಗೆ ಪಕ್ಕದಲ್ಲಿ ಹರಿಯುವ `ಭಾರ್ಗವಿ~ ತೊರೆಯಲ್ಲೂ ನೀರಿನ ಹರಿವು ಕಡಿಮೆ ಇತ್ತು. ಇದರ ಪರಿಣಾಮ ಸೋಲಿಗರು ಕುಡಿಯುವ ನೀರಿಗಾಗಿ ಪಕ್ಕದ ಕೆರೆದಿಂಬ ಪೋಡಿನ ಬಳಿಯ ತೆರೆದ ಗುಂಡಿಗಳನ್ನೇ ಆಶ್ರಯಿಸಬೇಕಾಯಿತು.<br /> <br /> ಕೆರೆದಿಂಬದ ಬಳಿ ಸಂಪಿಗೆ ಮರವಿದೆ. ಇದು ಸೋಲಿಗರ ಪವಿತ್ರ ವೃಕ್ಷ. ಹೀಗಾಗಿ, ಈ ಪ್ರದೇಶಕ್ಕೆ `ದೊಡ್ಡಸಂಪಿಗೆ~ ಎಂದು ಕರೆಯಲಾಗುತ್ತಿದ್ದು, 101 ಕಲ್ಲಿನ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.<br /> <br /> <strong>ಹಬ್ಬದಲ್ಲೇ ವಿವಾಹ</strong><br /> ರೊಟ್ಟಿ ಹಬ್ಬದಲ್ಲಿಯೇ ಸೋಲಿಗರ ವಿವಾಹ ನಡೆಯುವುದು ವಿಶೇಷ. ದೊಡ್ಡಸಂಪಿಗೆಗೆ ವಿವಿಧ ಪೋಡುಗಳಿಂದ ಹೆಣ್ಣುಮಕ್ಕಳು ಕುಟುಂಬದ ಸದಸ್ಯರೊಟ್ಟಿಗೆ ಬರುತ್ತಾರೆ. ಸೋಲಿಗ ಯುವಕರು ತಮಗೆ ಇಷ್ಟವಾದ ಯುವತಿಯನ್ನು ವಿವಾಹಕ್ಕೆ ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯ ಈಗಲೂ ಇದೆ. <br /> <br /> ಪರಸ್ಪರ ಒಪ್ಪಿಗೆಯಾದ ಬಳಿಕ ಒಟ್ಟಾಗಿ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಪೋಷಕರ ಅರಿವಿಗೆ ಬಾರದಂತೆ ಕಾಡಿನೊಳಕ್ಕೆ ಹೋಗುತ್ತಾರೆ. ಹಬ್ಬದ ರಾತ್ರಿಯಂದು ಅಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಬಳಿಕ ಪೋಡುಗಳಿಗೆ ಮರಳುತ್ತಾರೆ. ಆಗ ಅವರಿಬ್ಬರು ಸತಿ-ಪತಿಯೆಂದು ಪೋಡಿನ ಯಜಮಾನರಿಂದ ಅಧಿಕೃತ ತೀರ್ಮಾನ ಹೊರಬೀಳುತ್ತದೆ. <br /> <br /> `ಪ್ರಸ್ತುತ ಆಧುನಿಕತೆಯ ಪ್ರಭಾವ ಗಿರಿಜನರ ಮೇಲೂ ಬೀರಿದೆ. ಇದರಿಂದ ಬುಡಕಟ್ಟು ಸಂಸ್ಕೃತಿಗೆ ತೊಡಕಾಗುತ್ತಿದೆ. ರೊಟ್ಟಿ ಹಬ್ಬದಲ್ಲಿ ಪರಸ್ಪರ ಒಪ್ಪಿಕೊಂಡ ಹೆಣ್ಣು-ಗಂಡು ಹತ್ತಿರದ ಪೋಡುಗಳು ಹಾಗೂ ಕಾಡಿನೊಳಕ್ಕೆ ಹೋಗುತ್ತಾರೆ. <br /> <br /> ಅವರು ಪುನಃ ಸ್ವಂತ ಪೋಡುಗಳಿಗೆ ಮರಳುವಾಗ ಕೆಲವೊಮ್ಮೆ ಒಂದು ವಾರ ಕಳೆದಿರುತ್ತದೆ. ಅವರು ಪೋಡಿಗೆ ಬಂದಾಗಲಷ್ಟೇ ವಿವಾಹವಾಗಿರುವುದು ಬೆಳಕಿಗೆ ಬರುತ್ತದೆ~ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಕಾರ್ಯದರ್ಶಿ ಸಿ. ಮಾದೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>