<p>ಚಾಮರಾಜನಗರ: `ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸೋಲಿಗರನ್ನು ಮೂಲ ಆದಿವಾಸಿಗಳ ಪಟ್ಟಿಗೆ ಸೇರಿಸಿ ಸವಲತ್ತು ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು~ ಎಂದು ಸಂಸದ ಆರ್. ಧ್ರುವನಾರಾಯಣ ಒತ್ತಾಯಿಸಿದ್ದಾರೆ.<br /> <br /> ಸಂಸತ್ ಅಧಿವೇಶನದಲ್ಲಿ ಮಂಗಳವಾರ ಮ್ಯೋಟರ್ ಅಂಡರ್ ರೂಲ್-377 ಅಡಿ ಮಾತನಾಡಿದ ಅವರು, 1975ರಲ್ಲಿ ಕೇಂದ್ರ ಸರ್ಕಾರ ಪರಿಶಿಷ್ಟ ವರ್ಗದ ಗುಂಪಿನಲ್ಲಿ ಅತ್ಯಂತ ಹಿಂದುಳಿದ ಗಿರಿಜನರನ್ನು `ಮೂಲ ಆದಿವಾಸಿಗಳ ಗುಂಪು~ ಎಂದು ವರ್ಗೀಕರಿಸಿದೆ. ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿ 75 ಗಿರಿಜನ ಗುಂಪುಗಳನ್ನು ಗುರುತಿಸಲಾಗಿದೆ ಎಂದರು.<br /> <br /> ರಾಜ್ಯದಲ್ಲಿ ಜೇನು ಕುರುಬ ಮತ್ತು ಕೊರಗ ಜನಾಂಗವನ್ನು ಮಾತ್ರ ಮೂಲ ಆದಿವಾಸಿಗಳ ಗುಂಪಿಗೆ ಸೇರಿಸಲಾಗಿದೆ. ಆದರೆ, ಸೋಲಿಗರನ್ನು ಈ ಗುಂಪಿನಿಂದ ಕೈಬಿಡಲಾಗಿದೆ. ಈ ಕಾರಣದಿಂದ ಪರಿಶಿಷ್ಟ ವರ್ಗದ ಇತರೇ ಗುಂಪಿನ ಸದಸ್ಯರು ಕೇಂದ್ರ ಸರ್ಕಾರದ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.<br /> <br /> ಚಾಮರಾಜನಗರ ಜಿಲ್ಲೆಯಲ್ಲಿ ಜೇನು ಕುರುಬ, ಕಾಡು ಕುರುಬ ಮತ್ತು ಸೋಲಿಗ ಎಂಬ ಪರಿಶಿಷ್ಟ ವರ್ಗದ ವಿವಿಧ ಗುಂಪುಗಳಿವೆ. 2001ನೇ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಸೋಲಿಗರಿದ್ದಾರೆ. <br /> <br /> ಅವರ ಜೀವನ ಶೈಲಿ, ಸಂಸ್ಕೃತಿ ವಿಭಿನ್ನವಾಗಿದೆ. ಸೋಲಿಗರನ್ನು ಮೂಲ ಆದಿವಾಸಿಗಳ ಪಟ್ಟಿಯಲ್ಲಿ ಸೇರಿಸದಿರುವ ಪರಿಣಾಮ ಗಿರಿಜನರ ವಿವಿಧ ಗುಂಪುಗಳಲ್ಲಿ ಸಮಸ್ಯೆ ಉಂಟಾಗಿದೆ. <br /> <br /> ಜತೆಗೆ, ಗೊಂದಲ ಏರ್ಪಡಲಿದೆ. ಕೂಡಲೇ, ಸೋಲಿಗರನ್ನು ಮೂಲ ಆದಿವಾಸಿಗಳ ಗುಂಪಿನ ಪಟ್ಟಿಗೆ ಸೇರಿಸಬೇಕು. ಆ ಮೂಲಕ ಕೇಂದ್ರ ಗಿರಿಜನ ಕಲ್ಯಾಣ ಇಲಾಖೆಯ ಸವಲತ್ತು ಕಲ್ಪಿಸಿಕೊಡಬೇಕು ಎಂದು ಸಂಸದರು ಸರ್ಕಾರದ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: `ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸೋಲಿಗರನ್ನು ಮೂಲ ಆದಿವಾಸಿಗಳ ಪಟ್ಟಿಗೆ ಸೇರಿಸಿ ಸವಲತ್ತು ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು~ ಎಂದು ಸಂಸದ ಆರ್. ಧ್ರುವನಾರಾಯಣ ಒತ್ತಾಯಿಸಿದ್ದಾರೆ.<br /> <br /> ಸಂಸತ್ ಅಧಿವೇಶನದಲ್ಲಿ ಮಂಗಳವಾರ ಮ್ಯೋಟರ್ ಅಂಡರ್ ರೂಲ್-377 ಅಡಿ ಮಾತನಾಡಿದ ಅವರು, 1975ರಲ್ಲಿ ಕೇಂದ್ರ ಸರ್ಕಾರ ಪರಿಶಿಷ್ಟ ವರ್ಗದ ಗುಂಪಿನಲ್ಲಿ ಅತ್ಯಂತ ಹಿಂದುಳಿದ ಗಿರಿಜನರನ್ನು `ಮೂಲ ಆದಿವಾಸಿಗಳ ಗುಂಪು~ ಎಂದು ವರ್ಗೀಕರಿಸಿದೆ. ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿ 75 ಗಿರಿಜನ ಗುಂಪುಗಳನ್ನು ಗುರುತಿಸಲಾಗಿದೆ ಎಂದರು.<br /> <br /> ರಾಜ್ಯದಲ್ಲಿ ಜೇನು ಕುರುಬ ಮತ್ತು ಕೊರಗ ಜನಾಂಗವನ್ನು ಮಾತ್ರ ಮೂಲ ಆದಿವಾಸಿಗಳ ಗುಂಪಿಗೆ ಸೇರಿಸಲಾಗಿದೆ. ಆದರೆ, ಸೋಲಿಗರನ್ನು ಈ ಗುಂಪಿನಿಂದ ಕೈಬಿಡಲಾಗಿದೆ. ಈ ಕಾರಣದಿಂದ ಪರಿಶಿಷ್ಟ ವರ್ಗದ ಇತರೇ ಗುಂಪಿನ ಸದಸ್ಯರು ಕೇಂದ್ರ ಸರ್ಕಾರದ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.<br /> <br /> ಚಾಮರಾಜನಗರ ಜಿಲ್ಲೆಯಲ್ಲಿ ಜೇನು ಕುರುಬ, ಕಾಡು ಕುರುಬ ಮತ್ತು ಸೋಲಿಗ ಎಂಬ ಪರಿಶಿಷ್ಟ ವರ್ಗದ ವಿವಿಧ ಗುಂಪುಗಳಿವೆ. 2001ನೇ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಸೋಲಿಗರಿದ್ದಾರೆ. <br /> <br /> ಅವರ ಜೀವನ ಶೈಲಿ, ಸಂಸ್ಕೃತಿ ವಿಭಿನ್ನವಾಗಿದೆ. ಸೋಲಿಗರನ್ನು ಮೂಲ ಆದಿವಾಸಿಗಳ ಪಟ್ಟಿಯಲ್ಲಿ ಸೇರಿಸದಿರುವ ಪರಿಣಾಮ ಗಿರಿಜನರ ವಿವಿಧ ಗುಂಪುಗಳಲ್ಲಿ ಸಮಸ್ಯೆ ಉಂಟಾಗಿದೆ. <br /> <br /> ಜತೆಗೆ, ಗೊಂದಲ ಏರ್ಪಡಲಿದೆ. ಕೂಡಲೇ, ಸೋಲಿಗರನ್ನು ಮೂಲ ಆದಿವಾಸಿಗಳ ಗುಂಪಿನ ಪಟ್ಟಿಗೆ ಸೇರಿಸಬೇಕು. ಆ ಮೂಲಕ ಕೇಂದ್ರ ಗಿರಿಜನ ಕಲ್ಯಾಣ ಇಲಾಖೆಯ ಸವಲತ್ತು ಕಲ್ಪಿಸಿಕೊಡಬೇಕು ಎಂದು ಸಂಸದರು ಸರ್ಕಾರದ ಗಮನ ಸೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>