<p><span style="font-size: 26px;">ಶಿಡ್ಲಘಟ್ಟ: ಶಾಸ್ತ್ರ ನಂಬಿಕೊಂಡು ಭಗವಂತನ ಮೇಲೆ ಭಕ್ತಿ ಮೂಡದಿದ್ದರೆ ಅಧ್ಯಾತ್ಮ ತತ್ವಕ್ಕೆ ಅರ್ಥವಿಲ್ಲ ಎಂದು ಸಾರಿದ ಶಂಕರಾಚಾರ್ಯರ ಬೋಧನೆ ಸರ್ವಕಾಲಿಕ ಸತ್ಯ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.</span><br /> <br /> ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರ ದೇವಾಲಯದಲ್ಲಿ ಶಂಕರ ಜಯಂತಿ ಅಂಗವಾಗಿ ಸೋಮವಾರ `ಶಂಕರರ ಚಿಂತನೆಗಳು' ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.<br /> <br /> ಶಂಕರಾಚಾರ್ಯರ ಜೀವನ ಸಾಧನೆ ಹಿಮಾಲಯದಂತೆ ಮಹೋನ್ನತವಾದುವು. ನಶಿಸಿ ಹೋಗುತ್ತಿದ್ದ ಹಿಂದೂ ಧರ್ಮದ ಜಾಗೃತಿಗಾಗಿ ಅವರ ಸೇವೆ ಅನನ್ಯ. ಕಡಿಮೆ ವಯಸ್ಸಿನಲ್ಲಿ ಅವರು ಮನುಕುಲಕ್ಕೆ ಬೋಧಿಸಿದ ಉಪದೇಶ, ಚಿಂತನೆಗಳು ಹೃದಯ ಮನಸ್ಸುಗಳನ್ನು ತಣಿಸಿ, ಭಾವಬುದ್ದಿಗಳಿಗೆ ಪ್ರಚೋದನೆ ನೀಡುವಂತಹವು ಎಂದರು.<br /> <br /> ಭೋಗ ವಸ್ತುಗಳಿಂದ ಆನಂದವಿಲ್ಲ. ಮಾನವ ಹುಟ್ಟಿರುವುದು ಸಂಕಟಪಡಲಿಕ್ಕಲ್ಲ - ಸಂತೋಷ ಪಡಲಿಕ್ಕೆ. ನಶ್ವರ ಶರೀರ ನಂಬಬೇಡಿ. ಮನಸ್ಸೇ ದೊಡ್ಡ ಸಂಪತ್ತು ಎಂದು ಬೋಧಿಸಿದ ಶಂಕರಾಚಾರ್ಯರ ಜೀವನ ಸಾಧನೆ ಅಪಾರ. ಅವರು ರಚಿಸಿರುವ ಭಜಗೋವಿಂದಂ, ಭಜಗೋವಿಂದಂ ಜನಪ್ರಿಯ ಗೀತ ರಚನೆಯಾಗಿದ್ದು, ಮಾನವ ಹುಟ್ಟಿನಿಂದ ಸಾಯುವವರೆಗೆ ಮಾಡುವ ಕರ್ತವ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.<br /> <br /> ತಾಲ್ಲೂಕು ಬ್ರಾಹ್ಮಣಸಭಾ ಅಧ್ಯಕ್ಷ ಎ.ಎಸ್.ರವಿ, ಯುವಕ ಸಂಘದ ಅಧ್ಯಕ್ಷರಾದ ವಿ.ಕೃಷ್ಣ, ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿ ಎಸ್.ವಿ.ನಾಗರಾಜರಾವ್, ವಲಯ ಕಾರ್ಯದರ್ಶಿ ಎನ್.ಶ್ರೀಕಾಂತ್, ಬಿ.ಆರ್.ಅನಂತಕೃಷ್ಣ, ವಕೀಲ ಎಸ್.ಆರ್.ಶ್ರೀನಿವಾಸಮೂರ್ತಿ, ಪಿಟೀಲು ವಿದ್ವಾನ್ ಶ್ಯಾಮಸುಂದರ್ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಶಿಡ್ಲಘಟ್ಟ: ಶಾಸ್ತ್ರ ನಂಬಿಕೊಂಡು ಭಗವಂತನ ಮೇಲೆ ಭಕ್ತಿ ಮೂಡದಿದ್ದರೆ ಅಧ್ಯಾತ್ಮ ತತ್ವಕ್ಕೆ ಅರ್ಥವಿಲ್ಲ ಎಂದು ಸಾರಿದ ಶಂಕರಾಚಾರ್ಯರ ಬೋಧನೆ ಸರ್ವಕಾಲಿಕ ಸತ್ಯ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.</span><br /> <br /> ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರ ದೇವಾಲಯದಲ್ಲಿ ಶಂಕರ ಜಯಂತಿ ಅಂಗವಾಗಿ ಸೋಮವಾರ `ಶಂಕರರ ಚಿಂತನೆಗಳು' ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.<br /> <br /> ಶಂಕರಾಚಾರ್ಯರ ಜೀವನ ಸಾಧನೆ ಹಿಮಾಲಯದಂತೆ ಮಹೋನ್ನತವಾದುವು. ನಶಿಸಿ ಹೋಗುತ್ತಿದ್ದ ಹಿಂದೂ ಧರ್ಮದ ಜಾಗೃತಿಗಾಗಿ ಅವರ ಸೇವೆ ಅನನ್ಯ. ಕಡಿಮೆ ವಯಸ್ಸಿನಲ್ಲಿ ಅವರು ಮನುಕುಲಕ್ಕೆ ಬೋಧಿಸಿದ ಉಪದೇಶ, ಚಿಂತನೆಗಳು ಹೃದಯ ಮನಸ್ಸುಗಳನ್ನು ತಣಿಸಿ, ಭಾವಬುದ್ದಿಗಳಿಗೆ ಪ್ರಚೋದನೆ ನೀಡುವಂತಹವು ಎಂದರು.<br /> <br /> ಭೋಗ ವಸ್ತುಗಳಿಂದ ಆನಂದವಿಲ್ಲ. ಮಾನವ ಹುಟ್ಟಿರುವುದು ಸಂಕಟಪಡಲಿಕ್ಕಲ್ಲ - ಸಂತೋಷ ಪಡಲಿಕ್ಕೆ. ನಶ್ವರ ಶರೀರ ನಂಬಬೇಡಿ. ಮನಸ್ಸೇ ದೊಡ್ಡ ಸಂಪತ್ತು ಎಂದು ಬೋಧಿಸಿದ ಶಂಕರಾಚಾರ್ಯರ ಜೀವನ ಸಾಧನೆ ಅಪಾರ. ಅವರು ರಚಿಸಿರುವ ಭಜಗೋವಿಂದಂ, ಭಜಗೋವಿಂದಂ ಜನಪ್ರಿಯ ಗೀತ ರಚನೆಯಾಗಿದ್ದು, ಮಾನವ ಹುಟ್ಟಿನಿಂದ ಸಾಯುವವರೆಗೆ ಮಾಡುವ ಕರ್ತವ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.<br /> <br /> ತಾಲ್ಲೂಕು ಬ್ರಾಹ್ಮಣಸಭಾ ಅಧ್ಯಕ್ಷ ಎ.ಎಸ್.ರವಿ, ಯುವಕ ಸಂಘದ ಅಧ್ಯಕ್ಷರಾದ ವಿ.ಕೃಷ್ಣ, ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿ ಎಸ್.ವಿ.ನಾಗರಾಜರಾವ್, ವಲಯ ಕಾರ್ಯದರ್ಶಿ ಎನ್.ಶ್ರೀಕಾಂತ್, ಬಿ.ಆರ್.ಅನಂತಕೃಷ್ಣ, ವಕೀಲ ಎಸ್.ಆರ್.ಶ್ರೀನಿವಾಸಮೂರ್ತಿ, ಪಿಟೀಲು ವಿದ್ವಾನ್ ಶ್ಯಾಮಸುಂದರ್ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>