<p><strong>ಚಿಂತಾಮಣಿ: </strong>ನಗರದ ಜೆ.ಎಂ.ಎಫ್. ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ 1,500 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರಕುಮಾರ್ ತಿಳಿಸಿದರು.</p>.<p>ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ನಡೆದ ಅದಾಲತ್ಗೆ 1,840 ಪ್ರಕರಣ ದಾಖಲಾಗಿದ್ದವು. ಬ್ಯಾಂಕ್ನ 23 ಪ್ರಕರಣಗಳಲ್ಲಿ<br />₹ 1,51,15,586, ಸಿವಿಲ್ ವ್ಯಾಜ್ಯಗಳ 20 ಪ್ರಕರಣಗಳಲ್ಲಿ ₹ 42,22,744, ವಾಹನ ಅಪಘಾತಗಳ 3 ಪ್ರಕರಣಗಳಲ್ಲಿ ₹ 6.25 ಲಕ್ಷ ಪಿಟಿ ಕೇಸ್ಗಳ 1,343 ಪ್ರಕರಣಗಳಲ್ಲಿ ₹ 37.80 ಲಕ್ಷ, ಬೆಸ್ಕಾಂನ 29 ಪ್ರಕರಣಗಳಲ್ಲಿ ₹ 3,63,532, ಚೆಕ್ ಬೌನ್ಸ್ 6 ಪ್ರಕರಣಗಳಲ್ಲಿ ₹ 15.75 ಲಕ್ಷ ಹಾಗೂ ಇತರೆ 76 ಪ್ರಕರಣಗಳಲ್ಲಿ ₹ 3,18 ಲಕ್ಷ ರಾಜೀ ಸಂಧಾನದಿಂದ ಇತ್ಯರ್ಥವಾಗಿದೆ ಎಂದು ವಿವರಿಸಿದರು.</p>.<p>ಲೋಕ ಅದಾಲತ್ಗಳಲ್ಲಿ ಕಾನೂನು ಸೇವಾ ಸಮಿತಿಯಿಂದ ಮಾರ್ಗದರ್ಶನ, ನುರಿತ ವಕೀಲರ ಸಹಾಯ ದೊರೆಯುತ್ತದೆ. ರಾಜೀ ಮೂಲಕ ಇತ್ಯರ್ಥವಾದರೆ ಉತ್ತಮ ಬಾಂಧವ್ಯ, ಸೌಹಾರ್ದ ಇರುತ್ತದೆ. ನ್ಯಾಯಾಲಯಗಳಿಗೆ ಅಲೆಯುವ ಸಮಯ ಹಾಗೂ ಖರ್ಚು ಉಳಿತಾಯವಾಗುತ್ತದೆ ಎಂದರು.</p>.<p>ಸಣ್ಣಪುಟ್ಟ ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಂಡರೆ ನ್ಯಾಯಾಲಯಗಳ ಮೇಲಿನ ಹೊರೆಯು ಕಡಿಮೆಯಾಗುತ್ತದೆ. ಶೀಘ್ರವಾಗಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರವಾಗುತ್ತದೆ ಎಂದು ತಿಳಿಸಿದರು.</p>.<p>ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್. ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ. ಶಿವಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ನಗರದ ಜೆ.ಎಂ.ಎಫ್. ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ 1,500 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರಕುಮಾರ್ ತಿಳಿಸಿದರು.</p>.<p>ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ನಡೆದ ಅದಾಲತ್ಗೆ 1,840 ಪ್ರಕರಣ ದಾಖಲಾಗಿದ್ದವು. ಬ್ಯಾಂಕ್ನ 23 ಪ್ರಕರಣಗಳಲ್ಲಿ<br />₹ 1,51,15,586, ಸಿವಿಲ್ ವ್ಯಾಜ್ಯಗಳ 20 ಪ್ರಕರಣಗಳಲ್ಲಿ ₹ 42,22,744, ವಾಹನ ಅಪಘಾತಗಳ 3 ಪ್ರಕರಣಗಳಲ್ಲಿ ₹ 6.25 ಲಕ್ಷ ಪಿಟಿ ಕೇಸ್ಗಳ 1,343 ಪ್ರಕರಣಗಳಲ್ಲಿ ₹ 37.80 ಲಕ್ಷ, ಬೆಸ್ಕಾಂನ 29 ಪ್ರಕರಣಗಳಲ್ಲಿ ₹ 3,63,532, ಚೆಕ್ ಬೌನ್ಸ್ 6 ಪ್ರಕರಣಗಳಲ್ಲಿ ₹ 15.75 ಲಕ್ಷ ಹಾಗೂ ಇತರೆ 76 ಪ್ರಕರಣಗಳಲ್ಲಿ ₹ 3,18 ಲಕ್ಷ ರಾಜೀ ಸಂಧಾನದಿಂದ ಇತ್ಯರ್ಥವಾಗಿದೆ ಎಂದು ವಿವರಿಸಿದರು.</p>.<p>ಲೋಕ ಅದಾಲತ್ಗಳಲ್ಲಿ ಕಾನೂನು ಸೇವಾ ಸಮಿತಿಯಿಂದ ಮಾರ್ಗದರ್ಶನ, ನುರಿತ ವಕೀಲರ ಸಹಾಯ ದೊರೆಯುತ್ತದೆ. ರಾಜೀ ಮೂಲಕ ಇತ್ಯರ್ಥವಾದರೆ ಉತ್ತಮ ಬಾಂಧವ್ಯ, ಸೌಹಾರ್ದ ಇರುತ್ತದೆ. ನ್ಯಾಯಾಲಯಗಳಿಗೆ ಅಲೆಯುವ ಸಮಯ ಹಾಗೂ ಖರ್ಚು ಉಳಿತಾಯವಾಗುತ್ತದೆ ಎಂದರು.</p>.<p>ಸಣ್ಣಪುಟ್ಟ ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಂಡರೆ ನ್ಯಾಯಾಲಯಗಳ ಮೇಲಿನ ಹೊರೆಯು ಕಡಿಮೆಯಾಗುತ್ತದೆ. ಶೀಘ್ರವಾಗಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರವಾಗುತ್ತದೆ ಎಂದು ತಿಳಿಸಿದರು.</p>.<p>ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್. ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ. ಶಿವಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>