ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಬಾಬೂಜಿ ಭವನ ಮರೆತ ಆಡಳಿತ: ಭೂಮಿಪೂಜೆಯಾದರೂ ಮೇಲೇಳದ ಭವನ

Published : 7 ಜುಲೈ 2025, 5:44 IST
Last Updated : 7 ಜುಲೈ 2025, 5:44 IST
ಫಾಲೋ ಮಾಡಿ
Comments
‘ದಲಿತರು ಮತಕ್ಕಷ್ಟೇ’
ಚಿಕ್ಕಬಳ್ಳಾಪುರದಲ್ಲಿ ದಲಿತರು ಮತ ನೀಡಲಷ್ಟೇ ಎನ್ನುವ ಸ್ಥಿತಿ ಇದೆ. ನಮ್ಮ ಮತಗಳು ಮಾತ್ರ ಬೇಕು. ಆದರೆ ಅಭಿವೃದ್ಧಿ ವಿಚಾರವಾಗಿ ಮತ್ತು ಬೇಡಿಕೆ ಈಡೇರಿಕೆಯನ್ನು ಪರಿಗಣಿಸುವುದಿಲ್ಲ. ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಿಣಾಮ ಬಾಬೂ ಜಗಜೀವನ ರಾಮ್ ಭವನ ನಿರ್ಮಾಣವಾಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಆಕ್ರೋಶ ವ್ಯಕ್ತಪಡಿಸಿದರು. ಭವನ ನಿರ್ಮಾಣಕ್ಕೆ ಆಗ್ರಹಿಸಿ ಬಾಬೂಜಿ ಅವರ ಜಯಂತಿಯ ದಿನವೇ ಪ್ರತಿಭಟಿಸಿದ್ದೆವು. ಆಗ ಮಾಜಿ ಶಾಸಕರು ಸೇರಿದಂತೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು. ಈಗಲೂ ಭವನ ನಿರ್ಮಾಣದ ವಿಚಾರವಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಷ್ಟ ನಿಲುವು ತಾಳುತ್ತಿಲ್ಲ ಎಂದರು.
ನಾಲ್ಕು ತಿಂಗಳಾದರೂ ಈಡೇರದ ಬೇಡಿಕೆ
ಜಿಲ್ಲೆಯಲ್ಲಿನ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜ.20ರಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳ ಎದುರು ಅನಿರ್ದಿಷ್ಟಾವಧಿ ಧರಣಿ ನಡೆದಿತ್ತು.  ದಸಂಸ ಬೇಡಿಕೆಯ ಪಟ್ಟಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ವಾಲ್ಮೀಕಿ ಭವನ ಮತ್ತು ಬಾಬೂ ಜಗಜೀವನ ರಾಂ ಭವನ ನಿರ್ಮಾಣವೂ ಸೇರಿತ್ತು. ಪ್ರತಿಭಟನ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಎರಡು ತಿಂಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ದಾಟಿದೆ. ಆದರೆ ಈ ಬೇಡಿಕೆಗಳಿಗೆ ಇಂದಿಗೂ ಪರಿಹಾರ ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT