ಬಾಗೇಪಲ್ಲಿ: ತಾಲ್ಲೂಕಿಗೆ ಮುಂಬೈನಿಂದ ಬಂದ 30 ಮಂದಿಯ ಗಂಟಲು ಸ್ರಾವದ ವರದಿಗಳು ನೆಗೆಟಿವ್ ಬಂದಿವೆ. ತಾಲ್ಲೂಕಿಗೆ 58 ಮಂದಿ ಮಂಬೈನಿಂದ ಬಂದಿದ್ದಾರೆ. ಎಲ್ಲರನ್ನೂ ಜಿ.ಮದ್ದೇಪಲ್ಲಿ ಕ್ರಾಸ್ನ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ 26 ಮಂದಿಯಲ್ಲಿ ಸೋಂಕು ದೃಢವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 16 ಮಂದಿ ಗುಣಮುಖರಾಗಿದ್ದಾರೆ.