ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲ ವಾದಗಳನ್ನು ಕೆಲವರು ಒಪ್ಪುವುದಿಲ್ಲ. ಹಾಗೆಂದು ಕಾನೂನು ಕೈಗೆತ್ತಿಕೊಂಡು ಮತ್ತೊಬ್ಬರ ಪ್ರಾಣಹಾನಿ ಮಾಡುವ ಆಲೋಚನೆ ಮಾಡಿ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಶಾಂತಿಯ ತೋಟದಂತಿರುವ ರಾಜ್ಯದಲ್ಲಿ ವಿಕೃತ ಮನಸ್ಸಿನವರು ಕ್ರೌರ್ಯ ಮೆರೆಯುತ್ತಾರೆ’ ಎಂದು ತಿಳಿಸಿದರು.