ಮಧ್ಯಾಹ್ನ ಶುಚಿಭೂತರಾಗಿ ಕಜ್ಜಾಯ, ಬಟ್ಟಲಡಿಕೆ, ಎಲೆ-ಅಡಿಕೆ, ಅರಿಸಿನ ಕೊಂಬು, ಹೂ, ಹಣ್ಣು ಹಿಂದಿನ ವರ್ಷದ ಹಾಗೂ ಈ ವರ್ಷದ ಹೊಸ ನೋಮುದಾರಗಳನ್ನು ತೆಗೆದುಕೊಂಡು ದೇವಾಲಯಗಳಲ್ಲಿ, ಸಿರಿಗೌರಿ ಪ್ರತಿಷ್ಠಾಪಿಸಿದ್ದ ಮನೆಗಳಿಗೆ ತೆರಳಿ ಬಾಗಿನ ಅರ್ಪಿಸಿದರು. ಮೊರದಲ್ಲಿ ಬಾಗಿನ ತೆಗೆದುಕೊಂಡು ಹೋಗಿರುವ ಪದಾರ್ಥಗಳನ್ನು ತಟ್ಟೆ ಹಾಗೂ ಬಾಳೆ ಎಲೆಯಲ್ಲಿ ದೇವಿಯ ಮುಂದಿಟ್ಟು ಪೂಜೆ ಸಲ್ಲಿಸಿದರು.