<p><strong>ಚಿಕ್ಕಬಳ್ಳಾಪುರ:</strong> ತಾಲ್ಲೂಕಿನ ಆವಲಗುರ್ಕಿ ಬಳಿ ಈಶ ಯೋಗ ಕೇಂದ್ರಕ್ಕೆ ಸೇರಿದ ವಾಹನ ನಿಲುಗಡೆ ಸ್ಥಳದಲ್ಲಿ ಚಿಕನ್ ಬಿರಿಯಾನಿ ತಯಾರಿಸಿದವರ ವಿರುದ್ಧ ಈಶ ಫೌಂಡೇಶನ್ ಪ್ರತಿನಿಧಿ ಪ್ರಣವ ರಾಜನಾಳ ಎಂಬುವವರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p><p><strong>ದೂರಿನಲ್ಲಿ ಏನಿದೆ:</strong> ಸೆ.8ರ ಬೆಳಿಗ್ಗೆ 11.14ರ ಸಮಯದಲ್ಲಿ ನಮ್ಮ ಭದ್ರತಾ ವ್ಯವಸ್ಥಾಪಕ ಸುರೇಂದ್ರ ನಾಯ್ಡು ನನಗೆ ಕರೆ ಮಾಡಿ, ಐದಾರು ಮಂದಿ ಈಶ ಫೌಂಡೇಶನ್ ವಾಹನ ನಿಲುಗಡೆ ಸ್ಥಳಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು. </p><p>ಹೀಗೆ ಪ್ರವೇಶಿಸಿದವರನ್ನು ಅವರು ವಿಚಾರಿಸಿದ್ದಾರೆ. ‘ನಮ್ಮನ್ನು ಸೂಸೇಪಾಳ್ಯ ಗ್ರಾಮದ ಜೋಸೆಫ್ ಮತ್ತು ಸೂಲಿಕುಂಟೆ ಗ್ರಾಮದ ಆರ್.ಎಸ್. ವೆಂಕಟರೆಡ್ಡಿ ಕಳುಹಿಸಿದ್ದಾರೆ’ ಎಂದು ಅತಿಕ್ರಮವಾಗಿ ಪ್ರವೇಶಿಸಿದವರು ತಿಳಿಸಿದ್ದಾರೆ.</p><p>ಈ ವಿಚಾರವನ್ನು ತಕ್ಷಣ ಪೊಲೀಸರಿಗೆ ತಿಳಿಸಿದ್ದು ಅವರು ಸ್ಥಳಕ್ಕೆ ಬಂದರು. ‘ನಾವು ಪಕ್ಕದ ಗ್ರಾಮದವರು. ಸ್ವಲ್ಪ ಸಮಯದ ನಂತರ ಹೋಗುತ್ತೇವೆ’ ಎಂದು ಆ ಐದಾರು ಮಂದಿ ತಿಳಿಸಿದ್ದಾರೆ. ಆ ನಂತರವೂ ಸ್ಥಳದಿಂದ ಹೋಗದ ಕಾರಣ ನಮ್ಮ ಭದ್ರತಾ ಸಿಬ್ಬಂದಿ ಮೊಬೈಲ್ನಲ್ಲಿ ಅವರ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಲು ಹೋದಾಗ ಅವಾಚ್ಯವಾಗಿ ಬೈದು, ಬೆದರಿಕೆ ಹಾಕಿದ್ದಾರೆ.</p><p>ಮಧ್ಯಾಹ್ನ 2.30ರಲ್ಲಿ ಸೂಸೇಪಾಳ್ಯದ ಜೋಸೆಫ್ ಮತ್ತು ಸೂಲಿಕುಂಟೆ ಗ್ರಾಮದ ಆರ್.ಎಸ್. ವೆಂಕಟರೆಡ್ಡಿ ಈಶ ಯೋಗ ಕೇಂದ್ರದ ವಾಹನ ನಿಲುಗಡೆ ಸ್ಥಳದಿಂದ ಸುಮಾರು 20 ಮೀಟರ್ ದೂರದಲ್ಲಿನ ಸರ್ವೆ ನಂಬರ್ 284, 285ರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. </p><p>ಈ ಹಿಂದೆ ಬಂದವರ ಜೊತೆ ಸೇರಿ ದೇವಸ್ಥಾನದ ಆವರಣದಲ್ಲಿದ್ದ ಕಸ, ಕಡ್ಡಿಗಳಿಂದ ಬೆಂಕಿ ಹಾಕಿದ್ದಾರೆ. ಚಿಕನ್ ಬಿರಿಯಾನಿ ತಯಾರಿಸಿದ್ದಾರೆ. ಈ ಸಮಯದಲ್ಲಿ ಬಹಳಷ್ಟು ಕಾರುಗಳು ನಿಂತಿದ್ದವು. ಈ ಸ್ಥಳ ಪ್ರತಿಷ್ಠಾಪಿತ ಯೋಗೇಶ್ವರಲಿಂಗ, ಆದಿಯೋಗಿ, ನಂದಿ, ಮಹಾಶೂಲ ಮತ್ತು ನಾಗಮಂಟಪವನ್ನು ಹೊಂದಿದೆ. </p><p>ಭಕ್ತರಿಗೆ ಪವಿತ್ರ ಸ್ಥಳವಾಗಿದೆ. ನಮ್ಮ ಸಂಸ್ಕೃತಿ ಮತ್ತು ನಂಬಿಕೆ ಪ್ರಕಾರ, ಇಂತಹ ಪವಿತ್ರ ಸ್ಥಳದಲ್ಲಿ ಮಾಂಸದ ಆಹಾರ ತಯಾರಿಸುವುದು ಮತ್ತು ತಿನ್ನುವುದು ಅಪವಿತ್ರ. ಕೆಲವು ಭಕ್ತರು ಇದನ್ನು ನೋಡಿ ನೋವು ಮತ್ತು ಅವಮಾನ ಅನುಭವಿಸಿದರು. </p><p>ಸ್ಥಳದಲ್ಲಿ ಜನರು ಜಮಾಯಿಸಿದರು. ಹಿಂಸಾಚಾರಕ್ಕೆ ತಿರುಗುವ ಸಂಭವವಿತ್ತು. ಮತ್ತೆ ನಾವು ಪೊಲೀಸರಿಗೆ ವಿಚಾರ ತಿಳಿಸಿದೆವು. ಪೊಲೀಸರ ಜೊತೆ ನಾವು ಹೋಗಿ ಈ ವ್ಯಕ್ತಿಗಳನ್ನು ಓಡಿಸಬೇಕಾಯಿತು.</p><p>ಸದರಿ ವ್ಯಕ್ತಿಗಳು ಈ ಹಿಂದೆಯೂ ಹಲವು ಬಾರಿ ಅತಿಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡಿದ್ದಾರೆ. ಈ ವ್ಯಕ್ತಿಗಳು ನಿರಂತರವಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದು, ಸಮುದಾಯಗಳ ನಡುವೆ ದ್ವೇಷ ಉಂಟು ಮಾಡುತ್ತಿದ್ದಾರೆ. ಇವರ ಚಟುವಟಿಕೆಯಿಂದ ಕೋಮುಗಲಭೆ ಸಾಧ್ಯತೆಯಿದೆ. ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಆದ್ದರಿಂದ ಇವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು.</p><p>ನಮ್ಮ ಆಸ್ತಿಗಳಿಗೆ ಸಮಾಜಘಾತುಕ ಶಕ್ತಿಗಳಿಂದ ರಕ್ಷಣೆ ನೀಡಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದನ್ನು ತಡೆಯಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ತಾಲ್ಲೂಕಿನ ಆವಲಗುರ್ಕಿ ಬಳಿ ಈಶ ಯೋಗ ಕೇಂದ್ರಕ್ಕೆ ಸೇರಿದ ವಾಹನ ನಿಲುಗಡೆ ಸ್ಥಳದಲ್ಲಿ ಚಿಕನ್ ಬಿರಿಯಾನಿ ತಯಾರಿಸಿದವರ ವಿರುದ್ಧ ಈಶ ಫೌಂಡೇಶನ್ ಪ್ರತಿನಿಧಿ ಪ್ರಣವ ರಾಜನಾಳ ಎಂಬುವವರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p><p><strong>ದೂರಿನಲ್ಲಿ ಏನಿದೆ:</strong> ಸೆ.8ರ ಬೆಳಿಗ್ಗೆ 11.14ರ ಸಮಯದಲ್ಲಿ ನಮ್ಮ ಭದ್ರತಾ ವ್ಯವಸ್ಥಾಪಕ ಸುರೇಂದ್ರ ನಾಯ್ಡು ನನಗೆ ಕರೆ ಮಾಡಿ, ಐದಾರು ಮಂದಿ ಈಶ ಫೌಂಡೇಶನ್ ವಾಹನ ನಿಲುಗಡೆ ಸ್ಥಳಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು. </p><p>ಹೀಗೆ ಪ್ರವೇಶಿಸಿದವರನ್ನು ಅವರು ವಿಚಾರಿಸಿದ್ದಾರೆ. ‘ನಮ್ಮನ್ನು ಸೂಸೇಪಾಳ್ಯ ಗ್ರಾಮದ ಜೋಸೆಫ್ ಮತ್ತು ಸೂಲಿಕುಂಟೆ ಗ್ರಾಮದ ಆರ್.ಎಸ್. ವೆಂಕಟರೆಡ್ಡಿ ಕಳುಹಿಸಿದ್ದಾರೆ’ ಎಂದು ಅತಿಕ್ರಮವಾಗಿ ಪ್ರವೇಶಿಸಿದವರು ತಿಳಿಸಿದ್ದಾರೆ.</p><p>ಈ ವಿಚಾರವನ್ನು ತಕ್ಷಣ ಪೊಲೀಸರಿಗೆ ತಿಳಿಸಿದ್ದು ಅವರು ಸ್ಥಳಕ್ಕೆ ಬಂದರು. ‘ನಾವು ಪಕ್ಕದ ಗ್ರಾಮದವರು. ಸ್ವಲ್ಪ ಸಮಯದ ನಂತರ ಹೋಗುತ್ತೇವೆ’ ಎಂದು ಆ ಐದಾರು ಮಂದಿ ತಿಳಿಸಿದ್ದಾರೆ. ಆ ನಂತರವೂ ಸ್ಥಳದಿಂದ ಹೋಗದ ಕಾರಣ ನಮ್ಮ ಭದ್ರತಾ ಸಿಬ್ಬಂದಿ ಮೊಬೈಲ್ನಲ್ಲಿ ಅವರ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಲು ಹೋದಾಗ ಅವಾಚ್ಯವಾಗಿ ಬೈದು, ಬೆದರಿಕೆ ಹಾಕಿದ್ದಾರೆ.</p><p>ಮಧ್ಯಾಹ್ನ 2.30ರಲ್ಲಿ ಸೂಸೇಪಾಳ್ಯದ ಜೋಸೆಫ್ ಮತ್ತು ಸೂಲಿಕುಂಟೆ ಗ್ರಾಮದ ಆರ್.ಎಸ್. ವೆಂಕಟರೆಡ್ಡಿ ಈಶ ಯೋಗ ಕೇಂದ್ರದ ವಾಹನ ನಿಲುಗಡೆ ಸ್ಥಳದಿಂದ ಸುಮಾರು 20 ಮೀಟರ್ ದೂರದಲ್ಲಿನ ಸರ್ವೆ ನಂಬರ್ 284, 285ರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. </p><p>ಈ ಹಿಂದೆ ಬಂದವರ ಜೊತೆ ಸೇರಿ ದೇವಸ್ಥಾನದ ಆವರಣದಲ್ಲಿದ್ದ ಕಸ, ಕಡ್ಡಿಗಳಿಂದ ಬೆಂಕಿ ಹಾಕಿದ್ದಾರೆ. ಚಿಕನ್ ಬಿರಿಯಾನಿ ತಯಾರಿಸಿದ್ದಾರೆ. ಈ ಸಮಯದಲ್ಲಿ ಬಹಳಷ್ಟು ಕಾರುಗಳು ನಿಂತಿದ್ದವು. ಈ ಸ್ಥಳ ಪ್ರತಿಷ್ಠಾಪಿತ ಯೋಗೇಶ್ವರಲಿಂಗ, ಆದಿಯೋಗಿ, ನಂದಿ, ಮಹಾಶೂಲ ಮತ್ತು ನಾಗಮಂಟಪವನ್ನು ಹೊಂದಿದೆ. </p><p>ಭಕ್ತರಿಗೆ ಪವಿತ್ರ ಸ್ಥಳವಾಗಿದೆ. ನಮ್ಮ ಸಂಸ್ಕೃತಿ ಮತ್ತು ನಂಬಿಕೆ ಪ್ರಕಾರ, ಇಂತಹ ಪವಿತ್ರ ಸ್ಥಳದಲ್ಲಿ ಮಾಂಸದ ಆಹಾರ ತಯಾರಿಸುವುದು ಮತ್ತು ತಿನ್ನುವುದು ಅಪವಿತ್ರ. ಕೆಲವು ಭಕ್ತರು ಇದನ್ನು ನೋಡಿ ನೋವು ಮತ್ತು ಅವಮಾನ ಅನುಭವಿಸಿದರು. </p><p>ಸ್ಥಳದಲ್ಲಿ ಜನರು ಜಮಾಯಿಸಿದರು. ಹಿಂಸಾಚಾರಕ್ಕೆ ತಿರುಗುವ ಸಂಭವವಿತ್ತು. ಮತ್ತೆ ನಾವು ಪೊಲೀಸರಿಗೆ ವಿಚಾರ ತಿಳಿಸಿದೆವು. ಪೊಲೀಸರ ಜೊತೆ ನಾವು ಹೋಗಿ ಈ ವ್ಯಕ್ತಿಗಳನ್ನು ಓಡಿಸಬೇಕಾಯಿತು.</p><p>ಸದರಿ ವ್ಯಕ್ತಿಗಳು ಈ ಹಿಂದೆಯೂ ಹಲವು ಬಾರಿ ಅತಿಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡಿದ್ದಾರೆ. ಈ ವ್ಯಕ್ತಿಗಳು ನಿರಂತರವಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದು, ಸಮುದಾಯಗಳ ನಡುವೆ ದ್ವೇಷ ಉಂಟು ಮಾಡುತ್ತಿದ್ದಾರೆ. ಇವರ ಚಟುವಟಿಕೆಯಿಂದ ಕೋಮುಗಲಭೆ ಸಾಧ್ಯತೆಯಿದೆ. ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಆದ್ದರಿಂದ ಇವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು.</p><p>ನಮ್ಮ ಆಸ್ತಿಗಳಿಗೆ ಸಮಾಜಘಾತುಕ ಶಕ್ತಿಗಳಿಂದ ರಕ್ಷಣೆ ನೀಡಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದನ್ನು ತಡೆಯಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>