ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಕಾಫ್ ವೇಳೆ ದೂಳು: ಮತ್ತೆ ಲ್ಯಾಂಡ್ ಆದ ಸಿ.ಎಂ ಹೆಲಿಕಾಪ್ಟರ್

Last Updated 28 ಮಾರ್ಚ್ 2023, 6:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್‌ ಆಗಿ ಮತ್ತೆ ಲ್ಯಾಂಡ್ ಆದ ಪ್ರಸಂಗ ಸೋಮವಾರ ನಡೆಯಿತು.

ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿ ಕಾಲೇಜು ಆವರಣದ ಹೆಲಿಪ್ಯಾಡ್‌ಗೆ ಬಂದಿಳಿದ ಬೊಮ್ಮಾಯಿ ಅವರು ಸೂಲಾಲಪ್ಪನದಿಣ್ಣೆಯ ಕಾರ್ಯಕ್ರಮ ಪೂರ್ಣಗೊಳಿಸಿ ಅರೂರು ಬಳಿ ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟಿಸಲು ಕಾರಿನಲ್ಲಿ ತೆರಳಿದರು. ಅಲ್ಲಿಂದ ವಾಪಸ್ ಹೆಲಿಪ್ಯಾಡ್‌ಗೆ ಬಂದರು.

ಈ ವೇಳೆ ಹೆಲಿಕಾಪ್ಟರ್‌ ಟೇಕಾಫ್‌ ಆಗುವ ವೇಳೆ ದೊಡ್ಡ ಪ್ರಮಾಣದಲ್ಲಿ ದೂಳು ಎದ್ದಿತ್ತು. ಹಾಗಾಗಿ ಹೆಲಿಕಾಪ್ಟರ್‌ ಮತ್ತೆ ಲ್ಯಾಂಡ್ ಆಗಬೇಕಾಯಿತು. ಈ ವೇಳೆ ಹೆಲಿಕಾಪ್ಟರ್‌ನಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ ನವೀನ್ ರಾಜ್ ಸಿಂಗ್ ಕೆಳಕ್ಕಿಳಿದರು. ನಂತರ ಹೆಲಿಕಾಪ್ಟರ್‌ ಆಗಸಕ್ಕೆ ಹಾರಿತು.

ನಿಗದಿಗಿಂದ ಹೆಚ್ಚು ಜನರು ಪ್ರಯಾಣಿಸಿದ ಕಾರಣ ಮತ್ತೆ ಹೆಲಿಕಾಪ್ಟರ್ ಲ್ಯಾಂಡ್ ಆಯಿತು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT