<p><strong>ಚಿಕ್ಕಬಳ್ಳಾಪುರ</strong>: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗಿ ಮತ್ತೆ ಲ್ಯಾಂಡ್ ಆದ ಪ್ರಸಂಗ ಸೋಮವಾರ ನಡೆಯಿತು.</p>.<p>ಚಿಕ್ಕಬಳ್ಳಾಪುರದ ಎಸ್ಜೆಸಿಐಟಿ ಕಾಲೇಜು ಆವರಣದ ಹೆಲಿಪ್ಯಾಡ್ಗೆ ಬಂದಿಳಿದ ಬೊಮ್ಮಾಯಿ ಅವರು ಸೂಲಾಲಪ್ಪನದಿಣ್ಣೆಯ ಕಾರ್ಯಕ್ರಮ ಪೂರ್ಣಗೊಳಿಸಿ ಅರೂರು ಬಳಿ ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟಿಸಲು ಕಾರಿನಲ್ಲಿ ತೆರಳಿದರು. ಅಲ್ಲಿಂದ ವಾಪಸ್ ಹೆಲಿಪ್ಯಾಡ್ಗೆ ಬಂದರು.</p>.<p>ಈ ವೇಳೆ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ದೊಡ್ಡ ಪ್ರಮಾಣದಲ್ಲಿ ದೂಳು ಎದ್ದಿತ್ತು. ಹಾಗಾಗಿ ಹೆಲಿಕಾಪ್ಟರ್ ಮತ್ತೆ ಲ್ಯಾಂಡ್ ಆಗಬೇಕಾಯಿತು. ಈ ವೇಳೆ ಹೆಲಿಕಾಪ್ಟರ್ನಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ ನವೀನ್ ರಾಜ್ ಸಿಂಗ್ ಕೆಳಕ್ಕಿಳಿದರು. ನಂತರ ಹೆಲಿಕಾಪ್ಟರ್ ಆಗಸಕ್ಕೆ ಹಾರಿತು.</p>.<p>ನಿಗದಿಗಿಂದ ಹೆಚ್ಚು ಜನರು ಪ್ರಯಾಣಿಸಿದ ಕಾರಣ ಮತ್ತೆ ಹೆಲಿಕಾಪ್ಟರ್ ಲ್ಯಾಂಡ್ ಆಯಿತು ಎನ್ನಲಾಗುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗಿ ಮತ್ತೆ ಲ್ಯಾಂಡ್ ಆದ ಪ್ರಸಂಗ ಸೋಮವಾರ ನಡೆಯಿತು.</p>.<p>ಚಿಕ್ಕಬಳ್ಳಾಪುರದ ಎಸ್ಜೆಸಿಐಟಿ ಕಾಲೇಜು ಆವರಣದ ಹೆಲಿಪ್ಯಾಡ್ಗೆ ಬಂದಿಳಿದ ಬೊಮ್ಮಾಯಿ ಅವರು ಸೂಲಾಲಪ್ಪನದಿಣ್ಣೆಯ ಕಾರ್ಯಕ್ರಮ ಪೂರ್ಣಗೊಳಿಸಿ ಅರೂರು ಬಳಿ ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟಿಸಲು ಕಾರಿನಲ್ಲಿ ತೆರಳಿದರು. ಅಲ್ಲಿಂದ ವಾಪಸ್ ಹೆಲಿಪ್ಯಾಡ್ಗೆ ಬಂದರು.</p>.<p>ಈ ವೇಳೆ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ದೊಡ್ಡ ಪ್ರಮಾಣದಲ್ಲಿ ದೂಳು ಎದ್ದಿತ್ತು. ಹಾಗಾಗಿ ಹೆಲಿಕಾಪ್ಟರ್ ಮತ್ತೆ ಲ್ಯಾಂಡ್ ಆಗಬೇಕಾಯಿತು. ಈ ವೇಳೆ ಹೆಲಿಕಾಪ್ಟರ್ನಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ ನವೀನ್ ರಾಜ್ ಸಿಂಗ್ ಕೆಳಕ್ಕಿಳಿದರು. ನಂತರ ಹೆಲಿಕಾಪ್ಟರ್ ಆಗಸಕ್ಕೆ ಹಾರಿತು.</p>.<p>ನಿಗದಿಗಿಂದ ಹೆಚ್ಚು ಜನರು ಪ್ರಯಾಣಿಸಿದ ಕಾರಣ ಮತ್ತೆ ಹೆಲಿಕಾಪ್ಟರ್ ಲ್ಯಾಂಡ್ ಆಯಿತು ಎನ್ನಲಾಗುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>