ಸೋಮವಾರ ‘ಪ್ರಜಾವಾಣಿ’ ಪ್ರತಿನಿಧಿ ಇಲ್ಲಿಗೆ ಭೇಟಿ ನೀಡಿದಾಗ, ಫಲಕ ಕಾಣದ ಸ್ಥಿತಿಯಲ್ಲಿ ಇತ್ತು. ನಗರಸಭೆ ಆವರಣದಲ್ಲಿದ್ದ ಎಚ್.ಎಸ್.ಗಾರ್ಡನ್ನ ಮುಖಂಡ ಮಂಜುನಾಥ್ ಅವರ ಗಮನಕ್ಕೆ ತಂದಾಗ ತಕ್ಷಣವೇ ಅವರು, ಪೌರ ಕಾರ್ಮಿಕರ ನೆರವಿನಲ್ಲಿ ಫಲಕಕ್ಕೆ ಅಡ್ಡಲಾಗಿದ್ದ ಶ್ರದ್ಧಾಂಜಲಿ ಫ್ಲೆಕ್ಸ್ಗಳನ್ನು ತೆರವುಗೊಳಿಸಿದರು. ಒಂದೆಡೆ ಜ.30ರಂದು ಗಾಂಧೀಜಿ ಅವರ ಪುಣ್ಯ ಸ್ಮರಣೆ ನಡೆಯುತ್ತಿದ್ದರೆ ನಗರಸಭೆ ಆವರಣದಲ್ಲಿನ ಫಲಕ ದೂಳು ಹಿಡಿದಿದೆ. ಕಸದಿಂದ ಆವೃತವಾಗಿದೆ.