<p><strong>ಚಿಕ್ಕಬಳ್ಳಾಪುರ:</strong> ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ರಸ್ತೆಗಳು ಗುಂಡಿಮಯವಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಗುಂಡಿಗಳಿಗೆ ಮುಕ್ತಿ ನೀಡುವ ಇಚ್ಛಾಶಕ್ತಿ ತೋರುತ್ತಿಲ್ಲ. ಕೆಲವು ಕಡೆ ಗುಂಡಿಗಳನ್ನು ಮುಚ್ಚಿದ್ದರೂ ಅದು ಬೇಕಾ ಬಿಟ್ಟಿ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.</p>.<p>ನಗರವನ್ನು ಸುತ್ತಿದರೆ ರಸ್ತೆಯ ಗುಂಡಿಗಳ ದರ್ಶನವಾಗುತ್ತದೆ. ದ್ವಿಚಕ್ರ ವಾಹನ ಸವಾರರ ವೇಗಕ್ಕೆ ಬ್ರೇಕ್ ಹಾಕುವಲ್ಲಿಯೂ ಇವು ಯಶಸ್ವಿಯಾಗಿವೆ. ನಗರದ ಎಂ.ಜಿ ರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆ ಕಾರಣದಿಂದ ಈ ಒಂದು ರಸ್ತೆ ಹೊರಗಿಟ್ಟು ಉಳಿದವು ಗಮನಿಸಿದರೂ ಗುಂಡಿಗಳ ಗಂಡಾ ಗುಂಡಿ ಜೋರಾಗಿದೆ.</p>.<p>ನಗರದ ಬಿ.ಬಿ ರಸ್ತೆ, ಗಂಗಮ್ಮನ ಗುಡಿ ರಸ್ತೆ, ಬಜಾರ್ ರಸ್ತೆ, ಕೆಎಸ್ಆರ್ಟಿಸಿ ಡಿಪೊ ರಸ್ತೆ, ದೊಡ್ಡಬಳ್ಳಾಪುರ ಮಾರ್ಗದ ರಸ್ತೆ, ಲಕ್ಕಮ್ಮ ಕಲ್ಯಾಣ ಮಂಟಪದ ಎದುರಿನ ರಸ್ತೆ, ಸಾಧುಮಠ ರಸ್ತೆ–ಹೀಗೆ ನಗರದ ಬಹುತೇಕ ಹಾದಿಗಳಲ್ಲಿ ಗುಂಡಿಗಳು ದರ್ಶನವಾಗುತ್ತದೆ.</p>.<p>ಕೆಲವು ರಸ್ತೆಗಳಲ್ಲಿ ಸಣ್ಣ ಪುಟ್ಟ ಗುಂಡಿಗಳು ಇದ್ದರೆ ಕೆಲವು ಕಡೆಗಳಲ್ಲಿ ದೊಡ್ಡ ಗುಂಡಿಗಳನ್ನು ಕಾಣಬಹುದು. ಚಾಲಕರು ಬೈಕ್ಗಳನ್ನು, ಕಾರುಗಳನ್ನು ಸರಾಗವಾಗಿ ಚಲಾಯಿಸಿಕೊಂಡು ಹೋಗುವಾಗ ತಟ್ಟನೆ ಗುಂಡಿಗಳಿಗೆ ಇಳಿಯುವ ಸನ್ನಿವೇಶಗಳು ಹೇರಳವಾಗಿ ಕಾಣಬಹುದು. ನಗರದ ಪ್ರಮುಖ ಬಡಾವಣೆಗಳ ರಸ್ತೆಗಳೇ ಗುಂಡಿ ಮುಕ್ತವಾಗಿಲ್ಲ. </p>.<p>ಚಿಕ್ಕಬಳ್ಳಾಪುರದಿಂದ ಮುಷ್ಟೂರು ಕಡೆ ಸಾಗುವ ರಸ್ತೆಯ ಸ್ಥಿತಿಯದ್ದು ಮತ್ತೊಂದು ಕಥೆ. ಇಲ್ಲಿ ಬೃಹತ್ ಗುಂಡಿಗಳಿವೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಮುಷ್ಟೂರು ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ಸಹ ನಡೆಸಿದ್ದರು.</p>.<p>ನಗರದ ಪ್ರಮುಖ ರಸ್ತೆಗಳು ಮತ್ತು ಬಡಾವಣೆಗಳಲ್ಲಿ ಅಷ್ಟೇ ಅಲ್ಲ ನಗರವನ್ನು ಹೊರವಲಯದಲ್ಲಿರುವ ರಸ್ತೆಗಳು ಸಹ ತಗ್ಗು ದಿಣ್ಣೆಗಳಿಂದ ಕೂಡಿವೆ. ನಗರವನ್ನು ಪ್ರವೇಶಿಸುವ ವಾಹನ ಸವಾರರು ಸರ್ಕಸ್ ಮಾಡಲೇಬೇಕು. </p>.<p>ಚಿಕ್ಕಬಳ್ಳಾಪುರದಲ್ಲಿ ಗುಂಡಿಗಳನ್ನು ಮುಚ್ಚಲು ನಗರಸಭೆ ಪ್ರತಿ ವರ್ಷ ಹಣ ಸಹ ಖರ್ಚು ಮಾಡುತ್ತದೆ. ಆದರೆ ಗುಂಡಿಗಳು ಮಾತ್ರ ಅಪಾಯಕ್ಕೆ ಬಾಯಿ ತೆರೆದೇ ಇವೆ. ಯಾವ ರಸ್ತೆಯು ಗುಂಡಿ ಮುಕ್ತವಾಗಿದೆ, ಜಲ್ಲಿಕಲ್ಲುಗಳು ಮೇಲೆ ಎದ್ದಿಲ್ಲ, ಡಾಂಬರ್ ಕಿತ್ತು ಬಂದಿಲ್ಲ ಎಂದು ನಗರದಲ್ಲಿ ಹುಡುಕಬೇಕು.</p>.<p>ಚಿಕ್ಕಬಳ್ಳಾಪುರದ ವಿಶಾಲ್ ಮಾರ್ಟ್ ಮುಂಭಾಗದಿಂದ ಶನೈಶ್ವರ ದೇಗುಲದವರೆಗಿನ ಬಿ.ಬಿ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ಬಂದರೆ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. </p>.<p><strong>ಮೇಲೆದ್ದ ಜಲ್ಲಿಕಲ್ಲುಗಳು:</strong> ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ಕೆಲವು ರಸ್ತೆಗಳಲ್ಲಿನ ದೊಡ್ಡ ಗುಂಡಿಗಳಿಗೆ ಜಲ್ಲಿಕಲ್ಲು, ಸಿಮೆಂಟ್ ಹಾಕಿ ಮುಚ್ಚಲಾಗಿದೆ. ಆದರೆ ಇಲ್ಲಿ ಕಾಟಾಚಾರಕ್ಕೆ ಮುಚ್ಚಲಾಗಿದೆ ಎನ್ನುವುದನ್ನು ಮೇಲೆದ್ದಿರುವ ಜಲ್ಲಿಕಲ್ಲುಗಳೇ ಸಾರಿ ಹೇಳುತ್ತವೆ.</p>.<p>ನಂದಿಗಿರಿಧಾಮ, ಈಶಾ ಯೋಗ ಕೇಂದ್ರದ ಕಾರಣದಿಂದ ವಾರಾಂತ್ಯದ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯ ಜನರು ದೊಡ್ಡ ಸಂಖ್ಯೆಯಲ್ಲಿಯೇ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವರು. ಚಿಕ್ಕಬಳ್ಳಾಪುರ ಅಭಿವೃದ್ಧಿ ಮತ್ತು ಗುಂಡಿಗಳ ಅಧ್ವಾನದ ಬಗ್ಗೆ ಪ್ರವಾಸಿಗರು ಅಣಕದ ಮಾತುಗಳನ್ನೇ ಆಡುತ್ತಿದ್ದಾರೆ. </p>.<p><strong>ಮಳೆಗಾಲದಲ್ಲಿ ಮತ್ತಷ್ಟು ಅಧ್ವಾನ:</strong></p><p> ಮಳೆಗಾಲದಲ್ಲಿ ಈ ಗುಂಡಿಗಳು ನೀರಿನಿಂದ ತುಂಬಿ ಮತ್ತಷ್ಟು ಅಧ್ವಾನಕ್ಕೆ ಕಾರಣವಾಗುತ್ತವೆ. ಈ ಗುಂಡಿಗಳಿಗೆ ಬೈಕ್ ಕಾರುಗಳನ್ನು ಇಳಿಸಬೇಕಾದ ಅನಿವಾರ್ಯ ಚಾಲಕರದ್ದು. ಆದರೆ ಪಕ್ಕದಲ್ಲಿಯೇ ಪಾದಚಾರಿಗಳು ಸಹ ನಡೆದು ಹೋಗುವರು. ವಾಹನಗಳು ಗುಂಡಿಗಿಳಿದರೆ ಕೆಸರು ಪಿಚಕ್ಕನೆ ಪಾದಚಾರಿಗಳಿಗೆ ಸಿಡಿಯುತ್ತದೆ. ಗುಂಡಿಗಳಲ್ಲಿ ನೀರು ತುಂಬಿದ ಕಾರಣ ಹಲವು ಬೈಕ್ ಸವಾರರು ಭಯದಲ್ಲಿಯೇ ವಾಹನಗಳು ಚಲಾಯಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ರಸ್ತೆಗಳು ಗುಂಡಿಮಯವಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಗುಂಡಿಗಳಿಗೆ ಮುಕ್ತಿ ನೀಡುವ ಇಚ್ಛಾಶಕ್ತಿ ತೋರುತ್ತಿಲ್ಲ. ಕೆಲವು ಕಡೆ ಗುಂಡಿಗಳನ್ನು ಮುಚ್ಚಿದ್ದರೂ ಅದು ಬೇಕಾ ಬಿಟ್ಟಿ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.</p>.<p>ನಗರವನ್ನು ಸುತ್ತಿದರೆ ರಸ್ತೆಯ ಗುಂಡಿಗಳ ದರ್ಶನವಾಗುತ್ತದೆ. ದ್ವಿಚಕ್ರ ವಾಹನ ಸವಾರರ ವೇಗಕ್ಕೆ ಬ್ರೇಕ್ ಹಾಕುವಲ್ಲಿಯೂ ಇವು ಯಶಸ್ವಿಯಾಗಿವೆ. ನಗರದ ಎಂ.ಜಿ ರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆ ಕಾರಣದಿಂದ ಈ ಒಂದು ರಸ್ತೆ ಹೊರಗಿಟ್ಟು ಉಳಿದವು ಗಮನಿಸಿದರೂ ಗುಂಡಿಗಳ ಗಂಡಾ ಗುಂಡಿ ಜೋರಾಗಿದೆ.</p>.<p>ನಗರದ ಬಿ.ಬಿ ರಸ್ತೆ, ಗಂಗಮ್ಮನ ಗುಡಿ ರಸ್ತೆ, ಬಜಾರ್ ರಸ್ತೆ, ಕೆಎಸ್ಆರ್ಟಿಸಿ ಡಿಪೊ ರಸ್ತೆ, ದೊಡ್ಡಬಳ್ಳಾಪುರ ಮಾರ್ಗದ ರಸ್ತೆ, ಲಕ್ಕಮ್ಮ ಕಲ್ಯಾಣ ಮಂಟಪದ ಎದುರಿನ ರಸ್ತೆ, ಸಾಧುಮಠ ರಸ್ತೆ–ಹೀಗೆ ನಗರದ ಬಹುತೇಕ ಹಾದಿಗಳಲ್ಲಿ ಗುಂಡಿಗಳು ದರ್ಶನವಾಗುತ್ತದೆ.</p>.<p>ಕೆಲವು ರಸ್ತೆಗಳಲ್ಲಿ ಸಣ್ಣ ಪುಟ್ಟ ಗುಂಡಿಗಳು ಇದ್ದರೆ ಕೆಲವು ಕಡೆಗಳಲ್ಲಿ ದೊಡ್ಡ ಗುಂಡಿಗಳನ್ನು ಕಾಣಬಹುದು. ಚಾಲಕರು ಬೈಕ್ಗಳನ್ನು, ಕಾರುಗಳನ್ನು ಸರಾಗವಾಗಿ ಚಲಾಯಿಸಿಕೊಂಡು ಹೋಗುವಾಗ ತಟ್ಟನೆ ಗುಂಡಿಗಳಿಗೆ ಇಳಿಯುವ ಸನ್ನಿವೇಶಗಳು ಹೇರಳವಾಗಿ ಕಾಣಬಹುದು. ನಗರದ ಪ್ರಮುಖ ಬಡಾವಣೆಗಳ ರಸ್ತೆಗಳೇ ಗುಂಡಿ ಮುಕ್ತವಾಗಿಲ್ಲ. </p>.<p>ಚಿಕ್ಕಬಳ್ಳಾಪುರದಿಂದ ಮುಷ್ಟೂರು ಕಡೆ ಸಾಗುವ ರಸ್ತೆಯ ಸ್ಥಿತಿಯದ್ದು ಮತ್ತೊಂದು ಕಥೆ. ಇಲ್ಲಿ ಬೃಹತ್ ಗುಂಡಿಗಳಿವೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಮುಷ್ಟೂರು ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ಸಹ ನಡೆಸಿದ್ದರು.</p>.<p>ನಗರದ ಪ್ರಮುಖ ರಸ್ತೆಗಳು ಮತ್ತು ಬಡಾವಣೆಗಳಲ್ಲಿ ಅಷ್ಟೇ ಅಲ್ಲ ನಗರವನ್ನು ಹೊರವಲಯದಲ್ಲಿರುವ ರಸ್ತೆಗಳು ಸಹ ತಗ್ಗು ದಿಣ್ಣೆಗಳಿಂದ ಕೂಡಿವೆ. ನಗರವನ್ನು ಪ್ರವೇಶಿಸುವ ವಾಹನ ಸವಾರರು ಸರ್ಕಸ್ ಮಾಡಲೇಬೇಕು. </p>.<p>ಚಿಕ್ಕಬಳ್ಳಾಪುರದಲ್ಲಿ ಗುಂಡಿಗಳನ್ನು ಮುಚ್ಚಲು ನಗರಸಭೆ ಪ್ರತಿ ವರ್ಷ ಹಣ ಸಹ ಖರ್ಚು ಮಾಡುತ್ತದೆ. ಆದರೆ ಗುಂಡಿಗಳು ಮಾತ್ರ ಅಪಾಯಕ್ಕೆ ಬಾಯಿ ತೆರೆದೇ ಇವೆ. ಯಾವ ರಸ್ತೆಯು ಗುಂಡಿ ಮುಕ್ತವಾಗಿದೆ, ಜಲ್ಲಿಕಲ್ಲುಗಳು ಮೇಲೆ ಎದ್ದಿಲ್ಲ, ಡಾಂಬರ್ ಕಿತ್ತು ಬಂದಿಲ್ಲ ಎಂದು ನಗರದಲ್ಲಿ ಹುಡುಕಬೇಕು.</p>.<p>ಚಿಕ್ಕಬಳ್ಳಾಪುರದ ವಿಶಾಲ್ ಮಾರ್ಟ್ ಮುಂಭಾಗದಿಂದ ಶನೈಶ್ವರ ದೇಗುಲದವರೆಗಿನ ಬಿ.ಬಿ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ಬಂದರೆ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. </p>.<p><strong>ಮೇಲೆದ್ದ ಜಲ್ಲಿಕಲ್ಲುಗಳು:</strong> ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ಕೆಲವು ರಸ್ತೆಗಳಲ್ಲಿನ ದೊಡ್ಡ ಗುಂಡಿಗಳಿಗೆ ಜಲ್ಲಿಕಲ್ಲು, ಸಿಮೆಂಟ್ ಹಾಕಿ ಮುಚ್ಚಲಾಗಿದೆ. ಆದರೆ ಇಲ್ಲಿ ಕಾಟಾಚಾರಕ್ಕೆ ಮುಚ್ಚಲಾಗಿದೆ ಎನ್ನುವುದನ್ನು ಮೇಲೆದ್ದಿರುವ ಜಲ್ಲಿಕಲ್ಲುಗಳೇ ಸಾರಿ ಹೇಳುತ್ತವೆ.</p>.<p>ನಂದಿಗಿರಿಧಾಮ, ಈಶಾ ಯೋಗ ಕೇಂದ್ರದ ಕಾರಣದಿಂದ ವಾರಾಂತ್ಯದ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯ ಜನರು ದೊಡ್ಡ ಸಂಖ್ಯೆಯಲ್ಲಿಯೇ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವರು. ಚಿಕ್ಕಬಳ್ಳಾಪುರ ಅಭಿವೃದ್ಧಿ ಮತ್ತು ಗುಂಡಿಗಳ ಅಧ್ವಾನದ ಬಗ್ಗೆ ಪ್ರವಾಸಿಗರು ಅಣಕದ ಮಾತುಗಳನ್ನೇ ಆಡುತ್ತಿದ್ದಾರೆ. </p>.<p><strong>ಮಳೆಗಾಲದಲ್ಲಿ ಮತ್ತಷ್ಟು ಅಧ್ವಾನ:</strong></p><p> ಮಳೆಗಾಲದಲ್ಲಿ ಈ ಗುಂಡಿಗಳು ನೀರಿನಿಂದ ತುಂಬಿ ಮತ್ತಷ್ಟು ಅಧ್ವಾನಕ್ಕೆ ಕಾರಣವಾಗುತ್ತವೆ. ಈ ಗುಂಡಿಗಳಿಗೆ ಬೈಕ್ ಕಾರುಗಳನ್ನು ಇಳಿಸಬೇಕಾದ ಅನಿವಾರ್ಯ ಚಾಲಕರದ್ದು. ಆದರೆ ಪಕ್ಕದಲ್ಲಿಯೇ ಪಾದಚಾರಿಗಳು ಸಹ ನಡೆದು ಹೋಗುವರು. ವಾಹನಗಳು ಗುಂಡಿಗಿಳಿದರೆ ಕೆಸರು ಪಿಚಕ್ಕನೆ ಪಾದಚಾರಿಗಳಿಗೆ ಸಿಡಿಯುತ್ತದೆ. ಗುಂಡಿಗಳಲ್ಲಿ ನೀರು ತುಂಬಿದ ಕಾರಣ ಹಲವು ಬೈಕ್ ಸವಾರರು ಭಯದಲ್ಲಿಯೇ ವಾಹನಗಳು ಚಲಾಯಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>