<p><strong>ಗೌರಿಬಿದನೂರು</strong>: ರಾಯನಕಲ್ಲು ಯುವಕ ಬಾನುಪ್ರಸಾದ್ ರೆಡ್ಡಿ (22) ಸೈಕಲ್ ಸವಾರಿ ಮೂಲಕ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮಮಂದಿರ ದರ್ಶನಕ್ಕೆ ತೆರಳಿದರು.</p>.<p>ಅವರನ್ನು ಮಾರ್ಗ ಮಧ್ಯೆ ಡಿ.ಪಾಳ್ಯ ಗ್ರಾಮದಲ್ಲಿ ರಾಮಭಕ್ತರು, ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಬರಮಾಡಿಕೊಂಡು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿ ಶುಭಕೋರಿ ಬೀಳ್ಕೊಟ್ಟರು.</p>.<p>ವಿಶ್ವ ಹಿಂದೂ ಪರಿಷತ್ ಸಾಗಾನಹಳ್ಳಿ ಶಿವಕುಮಾರ್ ಮಾತನಾಡಿ, ಹನುಮನ ನಾಡಿನಿಂದ ದೂರದ ರಾಮನ ನಾಡಿಗೆ ಸೈಕಲ್ ಸವಾರಿ ಮೂಲಕ ಹೊರಟಿರುವ ಬಾನುಪ್ರಸಾದ್ ರೆಡ್ಡಿ ಅವರ ನಲವತ್ತು ದಿನಗಳ ಪ್ರವಾಸ ಅತ್ಯಂತ ಸುಖಕರವಾಗಿರಲಿ ಎಂದು ಹಾರೈಸಿದರು.</p>.<p>ಶಿರಿಡಿ ಬಾಬಾ ಮಂದಿರದ ಧರ್ಮದರ್ಶಿ ಹರೀಶ್ ಮಾತನಾಡಿ, ಬಾನುಪ್ರಸಾದ್ ರೆಡ್ಡಿ ಅವರ ಸಂಕಲ್ಪ ನಿಜಕ್ಕೂ ಮೆಚ್ಚುಗೆ ಕಾರ್ಯ ಎಂದರು.</p>.<p>ಮೈಲಪ್ಪ, ಆದಿನಾರಾಯಣಪ್ಪ, ಮಾರುತಿ, ರವಿ, ಶ್ರೀನಿವಾಸ್ ಕಲ್ಯಾಣ್, ರಮೇಶ್ , ಶಶಿಧರ್, ವಿಶ್ವ, ರಾಘವೇಂದ್ರ ಹಾಗೂ ವಿಶ್ವ ಹಿಂದೂ ಪರಿಷತ್ ರಮೇಶ್ ಬಾಬು, ಸುಧಾಕರ್ ರೆಡ್ಡಿ, ಭಾಸ್ಕರ್ , ದಂಡಿಗಾನಹಳ್ಳಿ ರಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ರಾಯನಕಲ್ಲು ಯುವಕ ಬಾನುಪ್ರಸಾದ್ ರೆಡ್ಡಿ (22) ಸೈಕಲ್ ಸವಾರಿ ಮೂಲಕ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮಮಂದಿರ ದರ್ಶನಕ್ಕೆ ತೆರಳಿದರು.</p>.<p>ಅವರನ್ನು ಮಾರ್ಗ ಮಧ್ಯೆ ಡಿ.ಪಾಳ್ಯ ಗ್ರಾಮದಲ್ಲಿ ರಾಮಭಕ್ತರು, ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಬರಮಾಡಿಕೊಂಡು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿ ಶುಭಕೋರಿ ಬೀಳ್ಕೊಟ್ಟರು.</p>.<p>ವಿಶ್ವ ಹಿಂದೂ ಪರಿಷತ್ ಸಾಗಾನಹಳ್ಳಿ ಶಿವಕುಮಾರ್ ಮಾತನಾಡಿ, ಹನುಮನ ನಾಡಿನಿಂದ ದೂರದ ರಾಮನ ನಾಡಿಗೆ ಸೈಕಲ್ ಸವಾರಿ ಮೂಲಕ ಹೊರಟಿರುವ ಬಾನುಪ್ರಸಾದ್ ರೆಡ್ಡಿ ಅವರ ನಲವತ್ತು ದಿನಗಳ ಪ್ರವಾಸ ಅತ್ಯಂತ ಸುಖಕರವಾಗಿರಲಿ ಎಂದು ಹಾರೈಸಿದರು.</p>.<p>ಶಿರಿಡಿ ಬಾಬಾ ಮಂದಿರದ ಧರ್ಮದರ್ಶಿ ಹರೀಶ್ ಮಾತನಾಡಿ, ಬಾನುಪ್ರಸಾದ್ ರೆಡ್ಡಿ ಅವರ ಸಂಕಲ್ಪ ನಿಜಕ್ಕೂ ಮೆಚ್ಚುಗೆ ಕಾರ್ಯ ಎಂದರು.</p>.<p>ಮೈಲಪ್ಪ, ಆದಿನಾರಾಯಣಪ್ಪ, ಮಾರುತಿ, ರವಿ, ಶ್ರೀನಿವಾಸ್ ಕಲ್ಯಾಣ್, ರಮೇಶ್ , ಶಶಿಧರ್, ವಿಶ್ವ, ರಾಘವೇಂದ್ರ ಹಾಗೂ ವಿಶ್ವ ಹಿಂದೂ ಪರಿಷತ್ ರಮೇಶ್ ಬಾಬು, ಸುಧಾಕರ್ ರೆಡ್ಡಿ, ಭಾಸ್ಕರ್ , ದಂಡಿಗಾನಹಳ್ಳಿ ರಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>