<p><strong>ಚಿಂತಾಮಣಿ</strong>: ನಗರದ ಚೇಳೂರು ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ರೈತರಿಗೆ ಯೂರಿಯಾ ಗೊಬ್ಬರ ವಿತರಿಸಲಾಗುತ್ತಿಲ್ಲ. ಸಲ್ಫರ್ ಗೊಬ್ಬರ ಖರೀದಿಸಿದರೆ ಮಾತ್ರವೇ ಯೂರಿಯಾ ನೀಡುವುದಾಗಿ ಅಂಗಡಿಯವರು ಹೇಳುತ್ತಿದ್ದಾರೆ ಎಂದು ತಾಲ್ಲೂಕಿನ ಕದಿರಪ್ಪನಾಯನಕೋಟೆ ಗ್ರಾಮದ ನಿವಾಸಿ ಬಿ. ಸುಧಾಕರರೆಡ್ಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ. </p>.<p>ಕಲ್ಪವೃಕ್ಷ ಫರ್ಟಿಲೈಸರ್ ಅಂಗಡಿಯವರು ರೈತರು ಯೂರಿಯಾ ಗೊಬ್ಬರದ ಮೂಟೆಯನ್ನು ಕೇಳಿದರೆ ಸಲ್ಫರ್ ಗೊಬ್ಬರವನ್ನು ತೆಗೆದುಕೊಂಡರೆ ಮಾತ್ರ ಯೂರಿಯಾ ನೀಡುವುದಾಗಿ ಒತ್ತಡ ಹೇರುತ್ತಿದ್ದಾರೆ ಎಂದು ತಾಲ್ಲೂಕಿನ ಕದಿರಪ್ಪನಾಯನಕೋಟೆ ಗ್ರಾಮದ ನಿವಾಸಿ ಬಿ.ಸುಧಾಕರರೆಡ್ಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ.</p>.<p>ರೈತರಿಗೆ ಬೇಕಿರುವ ಗೊಬ್ಬರ ನೀಡದೆ ಅಂಗಡಿಯವರು ಮಾರಾಟ ಮಾಡುವ ಗೊಬ್ಬರ ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ. ಜೊತೆಗೆ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ದೂರವಾಣಿ ಮೂಲಕ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದೇನೆ. ಆದಾಗ್ಯೂ, ಅಂಗಡಿಯವರು ಯೂರಿಯಾ ಮಾತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ನಗರದ ಚೇಳೂರು ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ರೈತರಿಗೆ ಯೂರಿಯಾ ಗೊಬ್ಬರ ವಿತರಿಸಲಾಗುತ್ತಿಲ್ಲ. ಸಲ್ಫರ್ ಗೊಬ್ಬರ ಖರೀದಿಸಿದರೆ ಮಾತ್ರವೇ ಯೂರಿಯಾ ನೀಡುವುದಾಗಿ ಅಂಗಡಿಯವರು ಹೇಳುತ್ತಿದ್ದಾರೆ ಎಂದು ತಾಲ್ಲೂಕಿನ ಕದಿರಪ್ಪನಾಯನಕೋಟೆ ಗ್ರಾಮದ ನಿವಾಸಿ ಬಿ. ಸುಧಾಕರರೆಡ್ಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ. </p>.<p>ಕಲ್ಪವೃಕ್ಷ ಫರ್ಟಿಲೈಸರ್ ಅಂಗಡಿಯವರು ರೈತರು ಯೂರಿಯಾ ಗೊಬ್ಬರದ ಮೂಟೆಯನ್ನು ಕೇಳಿದರೆ ಸಲ್ಫರ್ ಗೊಬ್ಬರವನ್ನು ತೆಗೆದುಕೊಂಡರೆ ಮಾತ್ರ ಯೂರಿಯಾ ನೀಡುವುದಾಗಿ ಒತ್ತಡ ಹೇರುತ್ತಿದ್ದಾರೆ ಎಂದು ತಾಲ್ಲೂಕಿನ ಕದಿರಪ್ಪನಾಯನಕೋಟೆ ಗ್ರಾಮದ ನಿವಾಸಿ ಬಿ.ಸುಧಾಕರರೆಡ್ಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ.</p>.<p>ರೈತರಿಗೆ ಬೇಕಿರುವ ಗೊಬ್ಬರ ನೀಡದೆ ಅಂಗಡಿಯವರು ಮಾರಾಟ ಮಾಡುವ ಗೊಬ್ಬರ ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ. ಜೊತೆಗೆ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ದೂರವಾಣಿ ಮೂಲಕ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದೇನೆ. ಆದಾಗ್ಯೂ, ಅಂಗಡಿಯವರು ಯೂರಿಯಾ ಮಾತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>