ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ದಾನಿಗಳಿಂದ ಸ್ಥಾಪಿಸ್ಪಟ್ಟಿರುವ ನೀರಿನ ಘಟಕ
ನೀರು ಲಭ್ಯವಿದ್ದರೂ ಗ್ರಾಮಗಳ ಮಟ್ಟದಲ್ಲಿ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ವಿದ್ಯುತ್ ಕಡಿತ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ನೀರಿನ ಸಮಸ್ಯೆ ಹೆಚ್ಚಾಗಬಹುದು
ಸುರೇಶ್ ಹಿರಿಯ ನಾಗರಿಕ
ಬೇಸಿಗೆಯಲ್ಲಿ ನೀರು ಒದಗಿಸಲು ಅಧಿಕಾರಿಗಳು ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿದಂತೆ ಕೆಲಸ ಮಾಡಬೇಕು. ಕೊಳವೆಬಾವಿ ಪಂಪ್ ಹಾಗೂ ಮೋಟಾರುಗಳ ದುರಸ್ತಿಗೆ ತಯಾರಾಗಿರಬೇಕು. ದೂರು ಬಂದ ಕೂಡಲೇ ದುರಸ್ತಿಗೊಳಿಸಬೇಕು
ಮಂಜುನಾಥರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ
ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ
ಕಳೆದ ವರ್ಷ ಮಳೆ ಕೊರತೆಯಾಗಿತ್ತು. ಹಾಗಾಗಿ ಈ ವರ್ಷ ನೀರಿನ ಸಮಸ್ಯೆ ಬಿಗಡಾಯಿಸುವ ಸಂಭವವಿದೆ. ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕೊಳವೆ ಬಾವಿಗಳಿಂದ ಬರುತ್ತಿದ್ದ ನೀರು ಕಡಿಮೆಯಾಗಿದೆ. ಮುಂಗಾರು ಮಳೆ ತಡವಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ವಿ.ನರಸಿಂಹಪ್ಪ ಡಿಎಸ್ಎಸ್ ಮುಖಂಡ ನಿಖರ ಮಾಹಿತಿ ನೀಡಬೇಕು ಬೇಸಿಗೆಯಲ್ಲಿ ಜನರಿಗೆ ನೀರಿನ ಸಮಸ್ಯೆ ತಲೆದೋರದಂತೆ ವ್ಯವಸ್ಥೆ ಮಾಡಲು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಎಂಜಿನಿಯರ್ ಮತ್ತು ಪಿಡಿಒಗಳ ಸಭೆನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲೂ ಪರಿಶೀಲನೆ ನಡೆಸಿ ನಿಖರವಾದ ಮಾಹಿತಿ ನೀಡಬೇಕು. ಜತೆಗೆ ನೀರು ಕಲುಷಿತವಾಗದಂತೆ ಮುನ್ನೆಚ್ಚರಿಕೆ ಸಲಹೆ ನೀಡಿದ್ದೇನೆ. ಎಸ್.ಆನಂದ್ ಇ.ಒ ಚಿಂತಾಮಣಿ