<p><strong>ಚಿಕ್ಕಬಳ್ಳಾಪುರ:</strong> ಕೊರೊನಾ ಇದೆ ಉಗುಳಬೇಡಿ ಎಂದಿದ್ದಕ್ಕೆ ತಾಲ್ಲೂಕಿನ ಚದುಲಪುರದ ಬಳಿ ಮುಳಬಾಗಿಲು ಡಿಪೊಗೆ ಸೇರಿದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಕೃಷ್ಣಪ್ಪ ಅವರ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಈ ಬಸ್ ಮುಳಬಾಗಿಲಿನಿಂದ ಕೋಲಾರ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿತ್ತು.</p>.<p>ಹಲ್ಲೆ ನಡೆಸಿದ ಕುಪ್ಪಹಳ್ಳಿ ಗ್ರಾಮದ ಚಿರಂಜೀವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಮತ್ತೊಬ್ಬ ಯುವಕ ಪರಾರಿ ಆಗಿದ್ದಾನೆ.</p>.<p>‘ಚದುಲಪುರ ಬಳಿ ಇಬ್ಬರು ಯುವಕರು ಬಸ್ ಹತ್ತಿದರು. ಅವರು ಬಾಗಿಲ ಬಳಿ ನಿಂತಿದ್ದು ಮಾಸ್ಕ್ ಧರಿಸಿರಲಿಲ್ಲ. ಪದೇ ಪದೇ ಹೊರಗೆ ಉಗುಳುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಇದೆ. ಬೇರೆಯುವರಿಗೆ ತೊಂದರೆ ಮಾಡಬೇಡಿ. ಈ ರೀತಿಯಲ್ಲಿ ಕೆಟ್ಟ ವರ್ತನೆ ಏಕೆ ಮಾಡುತ್ತಿದ್ದೀರಿ. ಒಳಗೆ ಬನ್ನಿ ಎಂದು ಹೇಳಿದೆ. ಆಗ ಈ ಇಬ್ಬರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರು’ ಎಂದು ಕೃಷ್ಣಪ್ಪ ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಕೊರೊನಾ ಇದೆ ಉಗುಳಬೇಡಿ ಎಂದಿದ್ದಕ್ಕೆ ತಾಲ್ಲೂಕಿನ ಚದುಲಪುರದ ಬಳಿ ಮುಳಬಾಗಿಲು ಡಿಪೊಗೆ ಸೇರಿದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಕೃಷ್ಣಪ್ಪ ಅವರ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಈ ಬಸ್ ಮುಳಬಾಗಿಲಿನಿಂದ ಕೋಲಾರ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿತ್ತು.</p>.<p>ಹಲ್ಲೆ ನಡೆಸಿದ ಕುಪ್ಪಹಳ್ಳಿ ಗ್ರಾಮದ ಚಿರಂಜೀವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಮತ್ತೊಬ್ಬ ಯುವಕ ಪರಾರಿ ಆಗಿದ್ದಾನೆ.</p>.<p>‘ಚದುಲಪುರ ಬಳಿ ಇಬ್ಬರು ಯುವಕರು ಬಸ್ ಹತ್ತಿದರು. ಅವರು ಬಾಗಿಲ ಬಳಿ ನಿಂತಿದ್ದು ಮಾಸ್ಕ್ ಧರಿಸಿರಲಿಲ್ಲ. ಪದೇ ಪದೇ ಹೊರಗೆ ಉಗುಳುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಇದೆ. ಬೇರೆಯುವರಿಗೆ ತೊಂದರೆ ಮಾಡಬೇಡಿ. ಈ ರೀತಿಯಲ್ಲಿ ಕೆಟ್ಟ ವರ್ತನೆ ಏಕೆ ಮಾಡುತ್ತಿದ್ದೀರಿ. ಒಳಗೆ ಬನ್ನಿ ಎಂದು ಹೇಳಿದೆ. ಆಗ ಈ ಇಬ್ಬರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರು’ ಎಂದು ಕೃಷ್ಣಪ್ಪ ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>