‘ಚದುಲಪುರ ಬಳಿ ಇಬ್ಬರು ಯುವಕರು ಬಸ್ ಹತ್ತಿದರು. ಅವರು ಬಾಗಿಲ ಬಳಿ ನಿಂತಿದ್ದು ಮಾಸ್ಕ್ ಧರಿಸಿರಲಿಲ್ಲ. ಪದೇ ಪದೇ ಹೊರಗೆ ಉಗುಳುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಇದೆ. ಬೇರೆಯುವರಿಗೆ ತೊಂದರೆ ಮಾಡಬೇಡಿ. ಈ ರೀತಿಯಲ್ಲಿ ಕೆಟ್ಟ ವರ್ತನೆ ಏಕೆ ಮಾಡುತ್ತಿದ್ದೀರಿ. ಒಳಗೆ ಬನ್ನಿ ಎಂದು ಹೇಳಿದೆ. ಆಗ ಈ ಇಬ್ಬರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರು’ ಎಂದು ಕೃಷ್ಣಪ್ಪ ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.