ಗುರುವಾರ ರಾತ್ರಿ ಹೇಮಂತ್ ಕುಮಾರ್ ಮತ್ತು ರವಿಚಂದ್ರ ನಡುವೆ ಗಲಾಟೆಯಾಗಿದ್ದು, ಹೇಮಂತ್ ಕುಮಾರ್ ಬಾರ್ನಲ್ಲಿನ ಗ್ಲಾಸುಗಳನ್ನು ಒಡೆದು ಗಲಾಟೆ ಮಾಡಿದ್ದನು. ಶುಕ್ರವಾರ ಮಧ್ಯಾಹ್ನ ಮತ್ತೆ ಬಾರ್ಗೆ ಹೋಗಿ ಕುಡಿದು ಹಣ ನೀಡದೆ ಗಲಾಟೆ ಮಾಡಿದ್ದಾನೆ. ಅವರಿಬ್ಬರ ನಡುವೆ ಘರ್ಷಣೆ ನಡೆದಿದೆ. ಹೇಮಂತ್ ಕುಮಾರ್ ಚಾಕುವಿನಿಂದ ರವಿಚಂದ್ರ ಅವರಿಗೆ ಚುಚ್ಚಲು ಯತ್ನಿಸಿದ್ದಾನೆ. ರವಿಚಂದ್ರ ಹೇಮಂತ್ ಕುಮಾರ್ನಿಂದ ಅದೇ ಚಾಕುವನ್ನು ಕಸಿದುಕೊಂಡು ಹಾಡುಹಗಲೇ ಹಲ್ಲೆ ನಡೆಸಿದ್ದಾನೆ.