‘ಕದಿರುಣ್ಣಿಮೆಗೆ ನಮ್ಮನ್ನೆಲ್ಲಾ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದರು. ಹೊಸ ಬಟ್ಟೆ ಕೊಡಿಸುತ್ತಿದ್ದರು. ದುಡಿದು ಬದುಕಬೇಕು ಮಗಾ, ಯಾರೊಡವೆಯೂ ನಮಗೆ ಬೇಡ. ತಿನ್ನುವ ಊಟ ನಮ್ಮ ದುಡಿಮೆಯದಾಗಿರಲಿ. ಬೇರೆಯವರಿಗೆ ತೊಂದರೆ ಕೊಟ್ಟು ಸಂಪಾದಿಸಿದ ಹಣದಲ್ಲಿ ತಿಂದರೆ ಅದು ಮೈಗತ್ತುವುದಿಲ್ಲ ಎನ್ನುತ್ತಿದ್ದರು. ಅವರು ಕೊಡಿಸಿದ ಬಜಾಜ್ ಸ್ಕೂಟರ್, ಕಷ್ಟಪಟ್ಟು ಕಟ್ಟಿದ್ದ ಮನೆ ಮತ್ತು ಬದುಕಲು ಕಲಿಸಿದ ವಿದ್ಯೆಯೇ ನಮಗೆ ನಮ್ಮಪ್ಪ ಕೊಟ್ಟ ದೊಡ್ಡ ಆಸ್ತಿ’ ಎಂದು
ಅವರು ಹೇಳಿದರು.