<p><strong>ಚಿಕ್ಕಬಳ್ಳಾಪುರ:</strong> ದೇವರ ಉತ್ಸವಮೂರ್ತಿ ಮೆರವಣಿಗೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಆನೆಮೊಡಗು ಕೊತ್ತೂರು ಗ್ರಾಮದಲ್ಲಿ ಭಾನುವಾರ ರಾತ್ರಿ ದಲಿತರು ಮತ್ತು ಒಕ್ಕಲಿಗರ ನಡುವೆ ವಾಗ್ವಾದ ನಡೆದಿದೆ. </p>.<p>ಗ್ರಾಮದೇವತೆ ಮಾರಮ್ಮ ದೇವಿ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಲು ಗ್ರಾಮಸ್ಥರು ಎಲ್ಲ ಜಾತಿಯ ಜನರಿಂದ ಚಂದಾ ಹಣ ವಸೂಲಿ ಮಾಡಿದ್ದರು. ಆದರೆ ಭಾನುವಾರ ರಾತ್ರಿ ಮೆರವಣಿಗೆ ವೇಳೆ ದಲಿತರು ಉತ್ಸವಮೂರ್ತಿಯನ್ನು ಹೊತ್ತುಕೊಳ್ಳಲು ಮುಂದಾಗಿದ್ದರು. ಇದನ್ನು ಒಕ್ಕಲಿಗ ಸಮುದಾಯದವರು ತಡೆದಿದ್ದರು.</p>.<p>ಆಗ ಎರಡೂ ಸಮುದಾಯಗಳ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದರಿಂದಾಗಿ ಗ್ರಾಮ ದೇವತೆಯಾದ ಮಾರಮ್ಮ ಮತ್ತು ಗಂಗಮ್ಮನ ಉತ್ಸವ ಮೂರ್ತಿಗಳು ಬೀದಿಯಲ್ಲಿ ಬಿಡಲಾಗಿತ್ತು.</p>.<p>ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಸೋಮವಾರ ಪೊಲೀಸರು, ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಎರಡೂ ಸಮುದಾಯದವರನ್ನು ದೇವಸ್ಥಾನದ ಬಳಿ ಕರೆಯಿಸಿ ಸಂಧಾನ ನಡೆಸಿದರು. ಗ್ರಾಮದಲ್ಲಿ ಪರಿಸ್ಥಿತಿ ಸದ್ಯ ತಿಳಿಯಾಗಿದ್ದು, ಪೊಲೀಸ್ ಬಂದೋಬಸ್ತ್ ಇದೆ. </p>
<p><strong>ಚಿಕ್ಕಬಳ್ಳಾಪುರ:</strong> ದೇವರ ಉತ್ಸವಮೂರ್ತಿ ಮೆರವಣಿಗೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಆನೆಮೊಡಗು ಕೊತ್ತೂರು ಗ್ರಾಮದಲ್ಲಿ ಭಾನುವಾರ ರಾತ್ರಿ ದಲಿತರು ಮತ್ತು ಒಕ್ಕಲಿಗರ ನಡುವೆ ವಾಗ್ವಾದ ನಡೆದಿದೆ. </p>.<p>ಗ್ರಾಮದೇವತೆ ಮಾರಮ್ಮ ದೇವಿ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಲು ಗ್ರಾಮಸ್ಥರು ಎಲ್ಲ ಜಾತಿಯ ಜನರಿಂದ ಚಂದಾ ಹಣ ವಸೂಲಿ ಮಾಡಿದ್ದರು. ಆದರೆ ಭಾನುವಾರ ರಾತ್ರಿ ಮೆರವಣಿಗೆ ವೇಳೆ ದಲಿತರು ಉತ್ಸವಮೂರ್ತಿಯನ್ನು ಹೊತ್ತುಕೊಳ್ಳಲು ಮುಂದಾಗಿದ್ದರು. ಇದನ್ನು ಒಕ್ಕಲಿಗ ಸಮುದಾಯದವರು ತಡೆದಿದ್ದರು.</p>.<p>ಆಗ ಎರಡೂ ಸಮುದಾಯಗಳ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದರಿಂದಾಗಿ ಗ್ರಾಮ ದೇವತೆಯಾದ ಮಾರಮ್ಮ ಮತ್ತು ಗಂಗಮ್ಮನ ಉತ್ಸವ ಮೂರ್ತಿಗಳು ಬೀದಿಯಲ್ಲಿ ಬಿಡಲಾಗಿತ್ತು.</p>.<p>ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಸೋಮವಾರ ಪೊಲೀಸರು, ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಎರಡೂ ಸಮುದಾಯದವರನ್ನು ದೇವಸ್ಥಾನದ ಬಳಿ ಕರೆಯಿಸಿ ಸಂಧಾನ ನಡೆಸಿದರು. ಗ್ರಾಮದಲ್ಲಿ ಪರಿಸ್ಥಿತಿ ಸದ್ಯ ತಿಳಿಯಾಗಿದ್ದು, ಪೊಲೀಸ್ ಬಂದೋಬಸ್ತ್ ಇದೆ. </p>