ನಗರದ ಜಾಲಾರಿ ಗಂಗಾಮಾಂಭ–ಈಶ್ವರ ದೇಗುಲ, ರಾಘವೇಂದ್ರಸ್ವಾಮಿ ಮಠ, ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹೊಸ ಮೊರದಲ್ಲಿ ನೋಮುದಾರ, ಗೆಜ್ಜೆಮುಡಿ, ತೆಂಗಿನಕಾಯಿ, ಅರಿಸಿನ ಕೊಂಬು, ಒಣ ಕೊಬ್ಬರಿ, ಅಡಿಕೆ, ವೀಳ್ಯದೆಲೆ, ಬಾಳೆಹಣ್ಣು, ಬಳೆ ಜತೆಗೆ ಕಜ್ಜಾಯ ಇಟ್ಟುಕೊಂಡು ಹೆಣ್ಣುಮಕ್ಕಳು ದೇವಸ್ಥಾನದತ್ತ ಸಾಗುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯುತ್ತಿತ್ತು.