ಇನ್ನೊಂದೆಡೆ, ಜಿಲ್ಲಾಡಳಿತ ಭಕ್ತರಿಗೂ ಷರತ್ತುಗಳನ್ನು ವಿಧಿಸಿದ್ದು, ದೇವಾಲಯ, ಚರ್ಚ್, ಮಸೀದಿಗಳಲ್ಲಿ ಪವಿತ್ರ ಜಲ ಪ್ರೋಕ್ಷಣೆ ಮಾಡುವುದು ನಿಷೇಧಿಸಿದೆ. ಜತೆಗೆ ಭಕ್ತಾಧಿಗಳು ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕಿ, ಧಾರ್ಮಿಕ ಗ್ರಂಥ , ಪುಸ್ತಕ ಮುಂತಾದವುಗಳನ್ನು ಮುಟ್ಟುವುದು ಮತ್ತು ಮುತ್ತಿಡುವುದನ್ನು ನಿರ್ಬಂಧಿಸಿದೆ.