<p><strong>ಚಿಕ್ಕಬಳ್ಳಾಪುರ:</strong> ಜಿಲ್ಲೆಯ ವಿವಿಧೆಡೆ ಸಂಘ ಸಂಸ್ಥೆಗಳು, ಯುವಕರ ಸಂಘಗಳು, ಸ್ವಯಂ ಸೇವಕರು ಹಾಗೂ ಪರಿಸರ ಆಸಕ್ತರು ಶನಿವಾರ ಗಿಡಗಳನ್ನು ನೆಟ್ಟು ಪರಿಸರ ದಿನ ಆಚರಿಸಿದರು. ನೀರಿನ ಸಮಸ್ಯೆ ಮತ್ತು ಬರದ ನಾಡು ಎನಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹಸಿರೀಕರಣಗೊಳಿಸುವ ಪಣ ತೊಟ್ಟರು.</p>.<p>ಉಸಿರಿಗಾಗಿ ಹಸಿರು ಸಂಸ್ಥೆ: ತಾಲ್ಲೂಕಿನ ಗುಂತಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯು ಆಯೋಜಿಸಿದ್ದ ಪರಿಸರ ದಿನದ ಕಾರ್ಯಕ್ರಮದಲ್ಲಿ ವಿವಿಧ ಪ್ರಬೇಧದ 130 ಸಸಿಗಳನ್ನು ನೆಡಲಾಯಿತು. 20 ಸಸಿಗಳನ್ನು ಆಸಕ್ತ ಮಕ್ಕಳಿಗೆ ವಿತರಿಸಿದರು.</p>.<p>ಈ ಮಳೆಗಾಲದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 1,000ಕ್ಕೂ ಅಧಿಕ ಸಸಿಗಳನ್ನು ನೆಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಉಸಿರಿಗಾಗಿ ಹಸಿರು ಟ್ರಸ್ಟಿನ ಎನ್.ಗಂಗಾಧರ ರೆಡ್ಡಿ ತಿಳಿಸಿದರು.</p>.<p>ಮುಖ್ಯಶಿಕ್ಷಕ ನರಸಿಂಹಮೂರ್ತಿ ಮಾತನಾಡಿ, ಮರಗಳನ್ನು ಬೆಳೆಸಲು ಅತ್ಯಂತ ವಿಶಾಲವಾದ ಮೈದಾನವನ್ನು ಶಾಲೆ ಹೊಂದಿದೆ. ಆದರೆ ಸೂಕ್ತ ಕಾಂಪೌಡ್ ವ್ಯವಸ್ಥೆ ಇಲ್ಲ. ನೆಟ್ಟ ಎಲ್ಲ ಸಸಿಗಳನ್ನು ಪೋಷಿಸಲು ಕಷ್ಟಸಾಧ್ಯ. ಹೀಗಿದ್ದರೂ ಎಸ್ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಸಸಿಗಳನ್ನು ಪೋಷಿಸಲಾಗುವುದು ಎಂದು ಹೇಳಿದರು.</p>.<p>ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಕೆ.ಎಸ್. ನವೀನ್ ಕುಮಾರ್, ಟ್ರಸ್ಟಿ ಸದಸ್ಯರಾದ ಸಿ.ಕೆ.ರಾಮಾಂಜಿನಪ್ಪ, ಎಂ. ಅಜಯ್, ಕೆ.ಇ.ಜಗದೀಶ್, ಉಮೇಶ್, ರಮೇಶ್, ಪವನ್, ಪ್ರಕಾಶ್ ಇದ್ದರು.</p>.<p>ಗೆಳೆಯರ ಬಳಗ: ನಗರದ ಕ್ಯಾಂಪಸ್ ಬೆಟ್ಟದಲ್ಲಿ ಸಮಾನ ಮನಸ್ಕ ಗೆಳೆಯರ ತಂಡದ ಸದಸ್ಯರು 25ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು. ಬೆಳಿಗ್ಗೆಯಿಂದೇ ಯುವಕರು ಬೆಟ್ಟದಲ್ಲಿ ಸ್ಥಳಗಳನ್ನು ಗುರುತಿಸಿ ಸಸಿಗಳನ್ನು ನೆಡಲು ಮುಂದಾರು. ಮಧ್ಯಾಹ್ನದ ವೇಳೆ ಗಿಡಗಳನ್ನು ನೆಟ್ಟು ಸಂಭ್ರಮಾಚರಣೆ ಮಾಡಿದರು.</p>.<p>‘ಇಲ್ಲಿ ನೆಟ್ಟ ಗಿಡಗಳನ್ನು ನಾವೇ ನಿರ್ವಹಿಸುತ್ತೇವೆ. ಇದಕ್ಕಾಗಿ ಆಗಾಗ್ಗೆ ಭೇಟಿ ನೀಡುತ್ತೇವೆ’ ಎಂದು ತಂಡ ದರ್ಶನ್ ತಿಳಿಸಿದರು. ವಿನಿತ್, ವಿನ್ಸಂಟ್, ರಘು, ಶಶಿ ಇತರರು ಇದ್ದರು.</p>.<p>ಸುಧಾಕರ್ ಅಭಿಮಾನಿ ಬಳಗ: ಸಚಿವ ಡಾ.ಕೆ. ಸುಧಾಕರ್ ಅಭಿಮಾನಿ ಬಳಗದಿಂದ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಅವರಣದಲ್ಲಿ ಗಿಡನೆಟ್ಟು ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಯಿತು.</p>.<p>ಯುವ ಮುಖಂಡ ಎಸ್.ಪಿ. ಶ್ರೀನಿವಾಸ್ ಮಾತನಾಡಿ, ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಕೆರೆ, ಹಳ್ಳ, ನದಿ, ಸಾಗರ ಇತ್ಯಾದಿಗಳನ್ನು ನಾವು ಉಳಿಸಿಕೊಂಡು ಹೋಗುವುದು ಅತ್ಯಗತ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಈ ಪರಿಸರವನ್ನು ಹಾಳು ಮಾಡದೆ ರಕ್ಷಿಸಿಕೊಡಬೇಕು. ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.</p>.<p>ಸಬ್ಇನ್ಸ್ಪೆಕ್ಟರ್ ಹೊನ್ನೇಗೌಡ, ಮೊಬೈಲ್ ಬಾಬು, ನಗರಸಭಾ ಸದಸ್ಯ ತರಕಾರಿ ವೆಂಕಟೇಶ್, ಯುವ ಮುಖಂಡರಾದ ಬಿ.ವಿ.ಆನಂದ್, ಹರ್ಷವರ್ಧನ್, ವಕೀಲ ಮಹೇಶ್ ಕುಮಾರ್, ಮಹೇಶ್, ರಾಜು ,ಅನಿಲ್, ಸುಭಾನ್ ಮತ್ತಿತರರು ಹಾಜರಿದ್ದರು.</p>.<p>ಶಿಕ್ಷಕರ ಸ್ಮರಣೆ: ಕೋವಿಡ್ನಿಂದ ಮೃತಪಟ್ಟ ಶಿಕ್ಷಕರ ಸ್ಮರಣಾರ್ಥ ಪರಿಸರ ದಿನದಲ್ಲಿ ಗಿಡ ನೆಡಲಾಯಿತು. ಜಿಲ್ಲಾ ಗುರುಭವನ, ಜಿಲ್ಲಾಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಿಪ್ಪೇನಹಳ್ಳಿ ಶಾಲೆಯ ಸಸಿಗಳನ್ನು ನಡೆಲಾಯಿತು.</p>.<p>ಕಾರ್ಯಕ್ರಮದಲ್ಲಿ ಡಿಎಚ್ಒ ಇಂದಿರಾ ಆರ್.ಕಬಾಡೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಬಿಇಒ ಶೋಭಾ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಜಿಲ್ಲೆಯ ವಿವಿಧೆಡೆ ಸಂಘ ಸಂಸ್ಥೆಗಳು, ಯುವಕರ ಸಂಘಗಳು, ಸ್ವಯಂ ಸೇವಕರು ಹಾಗೂ ಪರಿಸರ ಆಸಕ್ತರು ಶನಿವಾರ ಗಿಡಗಳನ್ನು ನೆಟ್ಟು ಪರಿಸರ ದಿನ ಆಚರಿಸಿದರು. ನೀರಿನ ಸಮಸ್ಯೆ ಮತ್ತು ಬರದ ನಾಡು ಎನಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹಸಿರೀಕರಣಗೊಳಿಸುವ ಪಣ ತೊಟ್ಟರು.</p>.<p>ಉಸಿರಿಗಾಗಿ ಹಸಿರು ಸಂಸ್ಥೆ: ತಾಲ್ಲೂಕಿನ ಗುಂತಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯು ಆಯೋಜಿಸಿದ್ದ ಪರಿಸರ ದಿನದ ಕಾರ್ಯಕ್ರಮದಲ್ಲಿ ವಿವಿಧ ಪ್ರಬೇಧದ 130 ಸಸಿಗಳನ್ನು ನೆಡಲಾಯಿತು. 20 ಸಸಿಗಳನ್ನು ಆಸಕ್ತ ಮಕ್ಕಳಿಗೆ ವಿತರಿಸಿದರು.</p>.<p>ಈ ಮಳೆಗಾಲದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 1,000ಕ್ಕೂ ಅಧಿಕ ಸಸಿಗಳನ್ನು ನೆಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಉಸಿರಿಗಾಗಿ ಹಸಿರು ಟ್ರಸ್ಟಿನ ಎನ್.ಗಂಗಾಧರ ರೆಡ್ಡಿ ತಿಳಿಸಿದರು.</p>.<p>ಮುಖ್ಯಶಿಕ್ಷಕ ನರಸಿಂಹಮೂರ್ತಿ ಮಾತನಾಡಿ, ಮರಗಳನ್ನು ಬೆಳೆಸಲು ಅತ್ಯಂತ ವಿಶಾಲವಾದ ಮೈದಾನವನ್ನು ಶಾಲೆ ಹೊಂದಿದೆ. ಆದರೆ ಸೂಕ್ತ ಕಾಂಪೌಡ್ ವ್ಯವಸ್ಥೆ ಇಲ್ಲ. ನೆಟ್ಟ ಎಲ್ಲ ಸಸಿಗಳನ್ನು ಪೋಷಿಸಲು ಕಷ್ಟಸಾಧ್ಯ. ಹೀಗಿದ್ದರೂ ಎಸ್ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಸಸಿಗಳನ್ನು ಪೋಷಿಸಲಾಗುವುದು ಎಂದು ಹೇಳಿದರು.</p>.<p>ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಕೆ.ಎಸ್. ನವೀನ್ ಕುಮಾರ್, ಟ್ರಸ್ಟಿ ಸದಸ್ಯರಾದ ಸಿ.ಕೆ.ರಾಮಾಂಜಿನಪ್ಪ, ಎಂ. ಅಜಯ್, ಕೆ.ಇ.ಜಗದೀಶ್, ಉಮೇಶ್, ರಮೇಶ್, ಪವನ್, ಪ್ರಕಾಶ್ ಇದ್ದರು.</p>.<p>ಗೆಳೆಯರ ಬಳಗ: ನಗರದ ಕ್ಯಾಂಪಸ್ ಬೆಟ್ಟದಲ್ಲಿ ಸಮಾನ ಮನಸ್ಕ ಗೆಳೆಯರ ತಂಡದ ಸದಸ್ಯರು 25ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು. ಬೆಳಿಗ್ಗೆಯಿಂದೇ ಯುವಕರು ಬೆಟ್ಟದಲ್ಲಿ ಸ್ಥಳಗಳನ್ನು ಗುರುತಿಸಿ ಸಸಿಗಳನ್ನು ನೆಡಲು ಮುಂದಾರು. ಮಧ್ಯಾಹ್ನದ ವೇಳೆ ಗಿಡಗಳನ್ನು ನೆಟ್ಟು ಸಂಭ್ರಮಾಚರಣೆ ಮಾಡಿದರು.</p>.<p>‘ಇಲ್ಲಿ ನೆಟ್ಟ ಗಿಡಗಳನ್ನು ನಾವೇ ನಿರ್ವಹಿಸುತ್ತೇವೆ. ಇದಕ್ಕಾಗಿ ಆಗಾಗ್ಗೆ ಭೇಟಿ ನೀಡುತ್ತೇವೆ’ ಎಂದು ತಂಡ ದರ್ಶನ್ ತಿಳಿಸಿದರು. ವಿನಿತ್, ವಿನ್ಸಂಟ್, ರಘು, ಶಶಿ ಇತರರು ಇದ್ದರು.</p>.<p>ಸುಧಾಕರ್ ಅಭಿಮಾನಿ ಬಳಗ: ಸಚಿವ ಡಾ.ಕೆ. ಸುಧಾಕರ್ ಅಭಿಮಾನಿ ಬಳಗದಿಂದ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಅವರಣದಲ್ಲಿ ಗಿಡನೆಟ್ಟು ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಯಿತು.</p>.<p>ಯುವ ಮುಖಂಡ ಎಸ್.ಪಿ. ಶ್ರೀನಿವಾಸ್ ಮಾತನಾಡಿ, ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಕೆರೆ, ಹಳ್ಳ, ನದಿ, ಸಾಗರ ಇತ್ಯಾದಿಗಳನ್ನು ನಾವು ಉಳಿಸಿಕೊಂಡು ಹೋಗುವುದು ಅತ್ಯಗತ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಈ ಪರಿಸರವನ್ನು ಹಾಳು ಮಾಡದೆ ರಕ್ಷಿಸಿಕೊಡಬೇಕು. ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.</p>.<p>ಸಬ್ಇನ್ಸ್ಪೆಕ್ಟರ್ ಹೊನ್ನೇಗೌಡ, ಮೊಬೈಲ್ ಬಾಬು, ನಗರಸಭಾ ಸದಸ್ಯ ತರಕಾರಿ ವೆಂಕಟೇಶ್, ಯುವ ಮುಖಂಡರಾದ ಬಿ.ವಿ.ಆನಂದ್, ಹರ್ಷವರ್ಧನ್, ವಕೀಲ ಮಹೇಶ್ ಕುಮಾರ್, ಮಹೇಶ್, ರಾಜು ,ಅನಿಲ್, ಸುಭಾನ್ ಮತ್ತಿತರರು ಹಾಜರಿದ್ದರು.</p>.<p>ಶಿಕ್ಷಕರ ಸ್ಮರಣೆ: ಕೋವಿಡ್ನಿಂದ ಮೃತಪಟ್ಟ ಶಿಕ್ಷಕರ ಸ್ಮರಣಾರ್ಥ ಪರಿಸರ ದಿನದಲ್ಲಿ ಗಿಡ ನೆಡಲಾಯಿತು. ಜಿಲ್ಲಾ ಗುರುಭವನ, ಜಿಲ್ಲಾಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಿಪ್ಪೇನಹಳ್ಳಿ ಶಾಲೆಯ ಸಸಿಗಳನ್ನು ನಡೆಲಾಯಿತು.</p>.<p>ಕಾರ್ಯಕ್ರಮದಲ್ಲಿ ಡಿಎಚ್ಒ ಇಂದಿರಾ ಆರ್.ಕಬಾಡೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಬಿಇಒ ಶೋಭಾ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>