ಇಲ್ಲಿನ ಯಾವ ಕುಟುಂಬಕ್ಕೂ ಮನೆಯಾಗಲಿ, ಜಮೀನಾಗಲಿ ಇಲ್ಲ. ಕೂಲಿನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ರಾತ್ರಿಯಾದರೆ ಜೀವವನ್ನು ಕೈಯಲ್ಲಿ ಹಿಡಿದು ನಿದ್ದೆ ಮಾಡುವ ಸ್ಥಿತಿ. ಹರಕಲು ಗೋಡೆಗಳಿಗೆ ಪೇಪರ್ ಕಟ್ಟಿಕೊಂಡು, ಅಲ್ಪ ಸ್ವಲ್ಪ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತೇವೆ. ಬೆಳಕನ್ನೇ ಕಾಣದ ಹಾಳು ಕೊಂಪೆಯಾಗಿರುವುದರಿಂದ ಹಾವು, ಚೇಳುಗಳ ಕಾಟ.ಮಳೆಗಾಲದಲ್ಲಿ ರಾತ್ರಿಯೆಲ್ಲ ಜಾಗರಣೆ ಮಾಡುತ್ತೇವೆ ಎನ್ನುತ್ತಾರೆ ಅಲ್ಲಿನ ನಿವಾಸಿ ಸೈಯದ್ ಪಾಷಾ.