<p><strong>ಗುಡಿಬಂಡೆ: </strong>ಯೂರಿಯಾ ರಸಗೊಬ್ಬರಕ್ಕಾಗಿ ತಾಲ್ಲೂಕಿನ ರೈತರು ಪರದಾಡುತ್ತಿದ್ದಾರೆ. ಪಟ್ಟಣದ ಮಾರುತಿ ವೃತ್ತದ ಟಿಎಪಿಸಿಎಂಎಸ್ ಮಳಿಗೆಗೆ ಯೂರಿಯಾ ರಸಗೊಬ್ಬರ ಸರಬರಾಜು ಆಗಿದೆ ಎಂದು ಮಹಿಳೆಯರು, ಮಕ್ಕಳು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತು ಒಂದು ಮೊಟೆ ಯೂರಿಯಾ ಖರೀದಿಸುತ್ತಿದ್ದಾರೆ. ಒಂದು ಮೂಟೆ ಗೊಬ್ಬರಕ್ಕೆ ದಿನಪೂರ್ತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.</p>.<p>ಜೋಳ ಹಾಗೂ ರಾಗಿಗೆ ಯೂರಿಯಾ ಗೊಬ್ಬರ ನೀಡಬೇಕಾಗಿದೆ. ಈ ಮೊದಲೇ ಯೂರಿಯಾ ದಾಸ್ತಾನು ಮಾಡಿಕೊಳ್ಳದ ಕಾರಣ ಬೇಡಿಕೆ ಹೆಚ್ಚಾಗಿದೆ. ಗೊಬ್ಬರಕ್ಕಾಗಿ ರೈತರು ರಂಗಾಲಾಗಿದ್ದಾರೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ ನೀಡದಿದ್ದರೆ ಕೃಷಿ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.</p>.<p>‘ತಾಲ್ಲೂಕಿನಲ್ಲಿ ಸಮೃದ್ಧ ಮಳೆಯಾಗಿದೆ. ಶೇ 90.6ರಷ್ಟು ಬಿತ್ತನೆಯಾಗಿದೆ. ಆ. 13ರಿಂದ ಈವರೆಗೆ 225 ಟನ್ ಯೂರಿಯಾ ಸರಬರಾಜು ಆಗಿದೆ. ಆದರೂ, ರೈತರು ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾ ಬಳಕೆ ಮಾಡುತ್ತಿರುವುದರಿಂದ ಕೊರತೆ ಕಾಡುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವರೆಡ್ಡಿ ತಿಳಿಸಿದರು.</p>.<p>ತಾಲ್ಲೂಕಿನಲ್ಲಿ ಈಗಾಗಲೇ 9,826 ಹೆಕ್ಟೇರ್ನಲ್ಲಿ ರಾಗಿ, ಜೋಳ ಬಿತ್ತನೆಯಾಗಿವೆ. ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ 250 ಟನ್ ಯೂರಿಯಾ ಅಗತ್ಯವಿದೆ. ಖಾಸಗಿ ಅಂಗಡಿಗಳ ಮೂಲಕ 90 ಟನ್, ಟಿಎಪಿಸಿಎಂಎಸ್ ಮೂಲಕ 135 ಟನ್ ಗೊಬ್ಬರವನ್ನು 4 ಸಾವಿರ ರೈತರು ಖರೀದಿ ಮಾಡಿದ್ದಾರೆ ಎಂದರು.</p>.<p>ಉಳಿದ 25 ಟನ್ ಸರಬರಾಜಿಗೆ ಅನುಮತಿ ನೀಡಲಾಗಿದೆ. ಸರ್ಕಾರ ರಿಯಾಯಿತಿ ದರದಲ್ಲಿ ಯೂರಿಯಾ ಮಾರಾಟ ಮಾಡುತ್ತಿರುವುದರಿಂದ ಖಾಸಗಿ ಅಂಗಡಿಗಳು ಗೊಬ್ಬರ ಮಾರಾಟ ಮಾಡಲು ನಿರಾಸಕ್ತಿ ತೊರುತ್ತಿವೆ. ಟಿಎಪಿಸಿಎಂಎಸ್ ಬಳಿ ರೈತರು ಯೂರಿಯಾ ಖರೀದಿಗೆ ಮುಗಿಬಿದ್ದಿದ್ದಾರೆ ಎಂದು ತಿಳಿಸಿದರು.</p>.<p>ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅಸಮರ್ಪಕ ಉತ್ತರ ನೀಡುತ್ತಾರೆ. ತಕ್ಷಣವೇ ರೈತರಿಗೆ ಗೊಬ್ಬರ ದೊರೆಯಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ: </strong>ಯೂರಿಯಾ ರಸಗೊಬ್ಬರಕ್ಕಾಗಿ ತಾಲ್ಲೂಕಿನ ರೈತರು ಪರದಾಡುತ್ತಿದ್ದಾರೆ. ಪಟ್ಟಣದ ಮಾರುತಿ ವೃತ್ತದ ಟಿಎಪಿಸಿಎಂಎಸ್ ಮಳಿಗೆಗೆ ಯೂರಿಯಾ ರಸಗೊಬ್ಬರ ಸರಬರಾಜು ಆಗಿದೆ ಎಂದು ಮಹಿಳೆಯರು, ಮಕ್ಕಳು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತು ಒಂದು ಮೊಟೆ ಯೂರಿಯಾ ಖರೀದಿಸುತ್ತಿದ್ದಾರೆ. ಒಂದು ಮೂಟೆ ಗೊಬ್ಬರಕ್ಕೆ ದಿನಪೂರ್ತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.</p>.<p>ಜೋಳ ಹಾಗೂ ರಾಗಿಗೆ ಯೂರಿಯಾ ಗೊಬ್ಬರ ನೀಡಬೇಕಾಗಿದೆ. ಈ ಮೊದಲೇ ಯೂರಿಯಾ ದಾಸ್ತಾನು ಮಾಡಿಕೊಳ್ಳದ ಕಾರಣ ಬೇಡಿಕೆ ಹೆಚ್ಚಾಗಿದೆ. ಗೊಬ್ಬರಕ್ಕಾಗಿ ರೈತರು ರಂಗಾಲಾಗಿದ್ದಾರೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ ನೀಡದಿದ್ದರೆ ಕೃಷಿ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.</p>.<p>‘ತಾಲ್ಲೂಕಿನಲ್ಲಿ ಸಮೃದ್ಧ ಮಳೆಯಾಗಿದೆ. ಶೇ 90.6ರಷ್ಟು ಬಿತ್ತನೆಯಾಗಿದೆ. ಆ. 13ರಿಂದ ಈವರೆಗೆ 225 ಟನ್ ಯೂರಿಯಾ ಸರಬರಾಜು ಆಗಿದೆ. ಆದರೂ, ರೈತರು ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾ ಬಳಕೆ ಮಾಡುತ್ತಿರುವುದರಿಂದ ಕೊರತೆ ಕಾಡುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವರೆಡ್ಡಿ ತಿಳಿಸಿದರು.</p>.<p>ತಾಲ್ಲೂಕಿನಲ್ಲಿ ಈಗಾಗಲೇ 9,826 ಹೆಕ್ಟೇರ್ನಲ್ಲಿ ರಾಗಿ, ಜೋಳ ಬಿತ್ತನೆಯಾಗಿವೆ. ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ 250 ಟನ್ ಯೂರಿಯಾ ಅಗತ್ಯವಿದೆ. ಖಾಸಗಿ ಅಂಗಡಿಗಳ ಮೂಲಕ 90 ಟನ್, ಟಿಎಪಿಸಿಎಂಎಸ್ ಮೂಲಕ 135 ಟನ್ ಗೊಬ್ಬರವನ್ನು 4 ಸಾವಿರ ರೈತರು ಖರೀದಿ ಮಾಡಿದ್ದಾರೆ ಎಂದರು.</p>.<p>ಉಳಿದ 25 ಟನ್ ಸರಬರಾಜಿಗೆ ಅನುಮತಿ ನೀಡಲಾಗಿದೆ. ಸರ್ಕಾರ ರಿಯಾಯಿತಿ ದರದಲ್ಲಿ ಯೂರಿಯಾ ಮಾರಾಟ ಮಾಡುತ್ತಿರುವುದರಿಂದ ಖಾಸಗಿ ಅಂಗಡಿಗಳು ಗೊಬ್ಬರ ಮಾರಾಟ ಮಾಡಲು ನಿರಾಸಕ್ತಿ ತೊರುತ್ತಿವೆ. ಟಿಎಪಿಸಿಎಂಎಸ್ ಬಳಿ ರೈತರು ಯೂರಿಯಾ ಖರೀದಿಗೆ ಮುಗಿಬಿದ್ದಿದ್ದಾರೆ ಎಂದು ತಿಳಿಸಿದರು.</p>.<p>ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅಸಮರ್ಪಕ ಉತ್ತರ ನೀಡುತ್ತಾರೆ. ತಕ್ಷಣವೇ ರೈತರಿಗೆ ಗೊಬ್ಬರ ದೊರೆಯಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>