ಹಿನ್ನೆಲೆ: 2020ರ ನ.17ರಂದು ಪಡಿತರ ಅಕ್ಕಿಯನ್ನು ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಸಾರ್ವಜನಿಕರು ಮಾಲು ಸಮೇತ ಹಿಡಿದು ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ತಹಶೀಲ್ದಾರ್ ಕ್ಯಾಂಟರ್ನಲ್ಲಿದ್ದ ಅಕ್ಕಿಮೂಟೆಗಳನ್ನು ಪರಿಶೀಲಿಸಿ ಪೊಲೀಸ್ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಸೂಚಿಸಿದ್ದರು. ಆಹಾರ ನಿರೀಕ್ಷಕ ಪ್ರಕಾಶ್ ಸುಮಾರು ಒಂದು ಗಂಟೆತಡವಾಗಿ ಬಂದು ತಹಶೀಲ್ದಾರ್ ಅವರನ್ನು ಕಾಯುವಂತೆಮಾಡಿದ್ದರು.