ಕೊರೊನಾ ಜಾಗೃತಿ: ತಾಲ್ಲೂಕಿನಲ್ಲಿ ಕೋವಿಡ್– 19 ಜಾಗೃತಿ ಮೂಡಿಸಲು ನಗರದ ಪ್ರಮುಖ ವೃತ್ತ, ಕೆಲ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರನಾ ವೈರಸ್ ಚಿತ್ರ ಬರೆದು ಜಾಗೃತಿ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಲಾಕ್ಡೌನ್ ಅವಧಿಯಲ್ಲಿ ನರೇಗಾ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದೆ. ಇದರಿಂದ ನಾಮಫಲಕ ಬರೆಯುವ ಕಲಾವಿದರಿಗೆ ಅವಕಾಶಗಳು ಹೆಚ್ಚಿವೆ. ಇದರಿಂದಾಗಿ ಜಗದೀಶ್ ಅವರಿಗೂ ಅವಕಾಶಗಳ ಬಾಗಿಲು ತೆರೆದಿದೆ.