<p><strong>ಗೌರಿಬಿದನೂರು:</strong> ಹಾವು ಕಡಿದ ತಕ್ಷಣ ಆಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಆಂಬುಲೆನ್ಸ್ ಮತ್ತು ವೈದ್ಯರು ಸಿಗದೆ ಪಂಚಾಯಿತಿಯ ಗ್ರೇಡ್–2 ಕಾರ್ಯದರ್ಶಿಯೊಬ್ಬರು ಮೃತಪಟ್ಟಿದ್ದಾರೆ.</p>.<p>ತಾಲ್ಲೂಕಿನ ದಿನ್ನೇನಹಳ್ಳಿ ಗ್ರಾಮದ ತೋಟದಲ್ಲಿ ಶನಿವಾರ ರಾತ್ರಿ ಮೇವು ಕೊಯ್ಯುತ್ತಿದ್ದ ಮುದಲೋಡು ಪಂಚಾಯಿತಿಯ ಗ್ರೇಡ್–2 ಕಾರ್ಯದರ್ಶಿ ಅಶ್ವತ್ಥಪ್ಪ ಕಾಲಿಗೆ ಹಾವು ಕಚ್ಚಿತು. </p>.<p>ತಕ್ಷಣ ಮಂಚೇನಹಳ್ಳಿ ಆಂಬುಲೆನ್ಸ್ಗೆ ಕರೆ ಮಾಡಿದರು. ಪೆಟ್ರೋಲ್ ಇಲ್ಲ ಬರುವುದು ತಡವಾಗುತ್ತದೆ ಎಂದು ಚಾಲಕ ತಿಳಿಸಿದ. ಗೌರಿಬಿದನೂರು ನಗರದ ಆಂಬುಲೆನ್ಸ್ ಕರೆ ಮಾಡಿದರು. ಅದರ ಚಾಲಕನೂ ಬರುವುದು ತಡವಾಗುತ್ತದೆ ಎಂದು ಹೇಳಿದ.</p>.<p>ಈ ನಡುವೆ ಅವರು ದಿನ್ನೇನಹಳ್ಳಿಯಿಂದ 10 ಕಿ.ಮಿ ದೂರದ ಡಿ. ಪಾಳ್ಯ ಪ್ರಾಥಮಿಕ ಚಿಕಿತ್ಸಾ ಕೇಂದ್ರ ತಲುಪಿದರು. ಆದರೆ, ಅಲ್ಲಿ ವೈದ್ಯರು ಇರಲಿಲ್ಲ. ಹಾಗಾಗಿ ಆಟೊದಲ್ಲಿ 13 ಕಿ.ಮೀ ದೂರದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತಲುಪಿದರು. ಆ ವೇಳೆಗಾಗಲೇ ದೇಹದಲ್ಲಿ ವಿಷ ವ್ಯಾಪಿಸಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಅಶ್ವತ್ಥಪ್ಪ ಅವರ ಪುತ್ರಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು:</strong> ಹಾವು ಕಡಿದ ತಕ್ಷಣ ಆಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಆಂಬುಲೆನ್ಸ್ ಮತ್ತು ವೈದ್ಯರು ಸಿಗದೆ ಪಂಚಾಯಿತಿಯ ಗ್ರೇಡ್–2 ಕಾರ್ಯದರ್ಶಿಯೊಬ್ಬರು ಮೃತಪಟ್ಟಿದ್ದಾರೆ.</p>.<p>ತಾಲ್ಲೂಕಿನ ದಿನ್ನೇನಹಳ್ಳಿ ಗ್ರಾಮದ ತೋಟದಲ್ಲಿ ಶನಿವಾರ ರಾತ್ರಿ ಮೇವು ಕೊಯ್ಯುತ್ತಿದ್ದ ಮುದಲೋಡು ಪಂಚಾಯಿತಿಯ ಗ್ರೇಡ್–2 ಕಾರ್ಯದರ್ಶಿ ಅಶ್ವತ್ಥಪ್ಪ ಕಾಲಿಗೆ ಹಾವು ಕಚ್ಚಿತು. </p>.<p>ತಕ್ಷಣ ಮಂಚೇನಹಳ್ಳಿ ಆಂಬುಲೆನ್ಸ್ಗೆ ಕರೆ ಮಾಡಿದರು. ಪೆಟ್ರೋಲ್ ಇಲ್ಲ ಬರುವುದು ತಡವಾಗುತ್ತದೆ ಎಂದು ಚಾಲಕ ತಿಳಿಸಿದ. ಗೌರಿಬಿದನೂರು ನಗರದ ಆಂಬುಲೆನ್ಸ್ ಕರೆ ಮಾಡಿದರು. ಅದರ ಚಾಲಕನೂ ಬರುವುದು ತಡವಾಗುತ್ತದೆ ಎಂದು ಹೇಳಿದ.</p>.<p>ಈ ನಡುವೆ ಅವರು ದಿನ್ನೇನಹಳ್ಳಿಯಿಂದ 10 ಕಿ.ಮಿ ದೂರದ ಡಿ. ಪಾಳ್ಯ ಪ್ರಾಥಮಿಕ ಚಿಕಿತ್ಸಾ ಕೇಂದ್ರ ತಲುಪಿದರು. ಆದರೆ, ಅಲ್ಲಿ ವೈದ್ಯರು ಇರಲಿಲ್ಲ. ಹಾಗಾಗಿ ಆಟೊದಲ್ಲಿ 13 ಕಿ.ಮೀ ದೂರದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತಲುಪಿದರು. ಆ ವೇಳೆಗಾಗಲೇ ದೇಹದಲ್ಲಿ ವಿಷ ವ್ಯಾಪಿಸಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಅಶ್ವತ್ಥಪ್ಪ ಅವರ ಪುತ್ರಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>